ಬಂಟ್ವಾಳ, ಗೂಡಿನಬಳಿ (ವಿಶ್ವ ಕನ್ನಡಿಗ ನ್ಯೂಸ್) ; ಟಾರ್ಜನ್ ಗ್ರೂಪ್ ಗೂಡಿನಬಳಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಬಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ನೇತ್ರಾವತಿ ವೀರರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 31 ಮೇ 2020 ನೇ ಆದಿತ್ಯವಾರದಂದು ಗೂಡಿನಬಳಿಯ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ 63 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಸಮಾರೋಪ ಸಮಾರಂಭದಲ್ಲಿ ನೇತ್ರಾವತಿ ವೀರರಾದ ಮಹಮ್ಮದ್ ಗೂಡಿನಬಳಿ,ಝಹೀದ್ ಗೂಡಿನಬಳಿ,ತೌಸೀಫ಼್ ಗೂಡಿನಬಳಿ,ಮುಕ್ತಾರ್ ಅಕ್ಕರಂಗಡಿ,ಆರೀಪ್ ಅಕ್ಕರಂಗಡಿ,ಇಬ್ರಾಹಿಂ ಗೂಡಿನಬಳಿ,ಸತ್ತಾರ್ ಗೂಡಿನಬಳಿ,ಶಮೀರ್ ಗೂಡಿನಬಳಿ ಹಾಗೂ ಹಾರೀಸ್ ಗೂಡಿನಬಳಿ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಉಳ್ಳಾಲ ಶಾಸಕರಾದ ಯು.ಟಿ ಖಾದರ್,ಗೂಡಿನಬಳಿ ಸರಕಾರಿ ಶಾಲೆಯ ಶಿಕ್ಷಕರಾದ ರಾಮಚಂದ್ರ ರಾವ್ ಅಲ್ಲದೇ ಗೂಡಿನಬಳಿ ಊರಿನ ಹಿರಿಯರು,ಸಾಮಾಜಿಕ ಕಾರ್ಯಕರ್ತರು,ರಾಜಕೀಯ ಮುಖಂಡರಲ್ಲದೇ ಟರ್ಜಾನ್ ಗ್ರೂಪ್ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಶ್ರಪ್ ಅರಬಿ ಕಲ್ಲಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿದರು.
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಗೂಡಿನಬಳಿಯ ವಿಲ್ಸ್ ಫ್ರೆಂಡ್ಸ್,ಕೆ.ಕೆ ಫ್ರೆಂಡ್ಸ್ ಮತ್ತು ಆಝಾದ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಟಾರ್ಜನ್ ಗ್ರೂಪ್ ನ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಪ್ರಕಟಣೆ: ಮಾಧ್ಯಮ ವಿಭಾಗ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.