(ವಿಶ್ವ ಕನ್ನಡಿಗ ನ್ಯೂಸ್) ; “ಮನಮುದ ಗೋಳೆ! ಗಾಯನ ಸಾಧನ! ಜಗ! ತೋನೆಯದೇ ಶ್ರಾವ್ಯದಲಿ! ತೃಣ ಸಮವು ಧನ ಕನಕಾದಿರೇ ವಿನುತಾ ಸುರಾಗದಲಿ!!” ಇಂತಹ ಅಬ್ದುತ ಪದ್ಯವನ್ನು ಬರೆದು ಅಂದು ಕಾಳಿಂಗ ನಾವುಡರು ಒಂದು ಮಾತನ್ನು ಹೇಳುತ್ತಾರೆ. ಸಂಗೀತದ ಎದುರು ಎಷ್ಟು ಧನ ಕನಕಾದಿಗಳು ಇದ್ದರೂ ಅದು ತೃಣಕ್ಕೆ ಸಮ ಎಂದು ರಮೇಶ ಬೇಗಾರಲ್ಲಿ ನಾವುಡರು ಹೇಳುತ್ತಿದ್ದರಂತೆ. ೧೯೮೯ರಲ್ಲಿ ಜನ್ನ ಕವಿಯ ಯಶೋಧರ ಚರಿತೆಯ ನೃತ್ಯಕಾವ್ಯವನ್ನು ರಮೇಶ ಬೇಗಾರವರು ಯಕ್ಷಗಾನಕ್ಕೆ ತರಬೇಕು ಎಂದು ಯೋಚನೆ ಮಾಡಿದರಂತೆ. ಆ ಒಂದು ಸಣ್ಣ ದೃಶ್ಯ ಕಾವ್ಯವನ್ನು ಮಾಡಿಕೊಂಡು ಕಾಳಿಂಗ ನಾವುಡರಲ್ಲಿ ತೆಗೆದುಕೊಂಡು ಹೋದರಂತೆ, ಅದಕ್ಕೆ ಕಾಳಿಂಗನಾವುಡರು ಈ ಕಥೆ ಮತ್ತು ದೃಶ್ಯ ಕಾವ್ಯ ಚೆನ್ನಾಗಿದೆ. ಅಪ್ಪಿ(ರಮೇಶ ಬೇಗಾರ್) ಆದರೆ ಇದಕ್ಕೆ ಸ್ವತಹಃ ನಾನೇ ಕುಳಿತು ಪದ್ಯ ಬರಿತೇನೆ. ಪದ್ಯದಲ್ಲಿ ಛಂದಸ್ಸು ಸರಿಯಾಗಿಲ್ಲ ಎಂದು ನಾವುಡರು ಹೇಳಿದರು. ಆಮೇಲೆ ಈ ಕಥೆಯನ್ನು ಧ್ವನಿ ಸುರುಳಿ ಮಾಡೋಣ ಎಂದು ಹೇಳಿದರು. ನಂತರ ಅಪ್ಪಿಯವರು ಕಾಳಿಂಗ ನಾವುಡರ ಆಗಿನ ಕಾಲದ ಕೃಷ್ಣವೇಣಿ ಮನೆಗೆ ಹೋಗಿ ಕಥೆಯನ್ನು ಹೇಳಿತ್ತಿದ್ದರು. ನಾವುಡರು ಸುಮಾರು ೩೦ ರಿಂದ ೩೫ ಪದ್ಯವನ್ನು ರಮೇಶ ಬೇಗಾರರ ಎದುರೆ ಬರದರಂತೆ, ಆಮೇಲೆ ಅಮೃತ ಮತಿ ಎಂದು ಯಕ್ಷ ಕಾವ್ಯ ಧ್ವನಿಸುರುಳಿಯೂ ಮಾಡಿದರಂತೆ ಎಂದು ಬೇಗಾರ್ ಹೇಳುತ್ತಿದ್ದರು.
ಅಮೃತ ಮತಿ ಯಕ್ಷಗಾನ ತುಂಬಾ ಚೆನ್ನಾಗಿದ್ದ ಕಥೆ ಯಶೋಧರನ ಪಾತ್ರ ಹೆಂಡತಿ ಅಮೃತ ಮತಿಯು ಬಾಹುಕನ ಗಾನಕೆ ಮಣಿದು ಕ್ಷಯರೋಗಿ, ಹೇಸಿಗೆಯಾದ, ರುಧಿರ ಸೋರುವ, ಆ ಅಷ್ಟವರ್ಕ ಬಾಹುಕನಿಗೆ ಮರುಳಾಗಿ ತನು ಒಪ್ಪಿಸುವಳು. ಇದನ್ನು ದುಃಸ್ವಪ್ನದ ಮೂಲಕ ಕಂಡ ರಾಜ ಯಶೋಧರ. ಈ ರೀತಿಯಲ್ಲಿ ದುಃಸ್ವಪ್ನದಿಂದ ಎದ್ದು ರಾಣಿಯು ಪಕ್ಕದಲ್ಲಿ ಇಲ್ಲದಾಗ ದಿಗಿಲಾದ ರಾಜ. ಈ ಅಪರಾತ್ರಿ ತನ್ನ ಮಡದಿ ಎದ್ದು ಏನು ರಾಜ ಕಾರ್ಯಕ್ಕೆ ಹೋಗಿದ್ದಾಳೆ? ಎಂಬ ಪ್ರಶ್ನೆ ಮನದಲ್ಲಿ ಮೂಡಿದಾಗ, ಆ ಬಾಹುಕನ ತೋಳಲ್ಲಿ ಬಂದಿಯಾಗಿರುವ ಅಮೃತಮತಿಯನ್ನು ಕಂಡನು. ಜೀನ ವಂಶದ ಶಿಕ್ಷೆಯನ್ನು ಅವಳಿಗೆ ಕೊಟ್ಟು ಕೊನೆಗೆ ತಾನೇ ಸಲ್ಲೇಖನ ವೃತದಿಂದ ನಿರ್ಯಾಣ ಹೊಂದುವ ರಾಜ ಯಶೋಧರನ ಚರಿತೆಯನ್ನು ಚೆನ್ನಾಗಿ ಜನ್ನ ಕವಿ ಬರೆದಿದ್ದಾರೆ. ಇಂತಹ ಯಕ್ಷಗಾನವನ್ನು ಕೇವಲ ಮಾತುಗಳಲ್ಲಿ ಮಾತ್ರವಲ್ಲದೆ ಸತ್ವಯುತ ಪದ್ಯವನ್ನು ಸಹ ಕಾಳಿಂಗ ನಾವುಡರು ಬರೆದಿದ್ದಾರೆ.
ಈ ಕಥೆಯಲ್ಲಿ ಅಮೃತಮತಿ ಗಾಯನಕ್ಕೆ ಮರುಳಾಗಿ ಬಾಹುಕನಲ್ಲಿ ಹೋಗುತ್ತಾಳೆ. ಆ ಸನ್ನಿವೇಶವನ್ನು ಇಂತಹ ಅದ್ಬುತ ಸಾಹಿತ್ಯವನ್ನು ಕೇವಲ ನಾಲ್ಕು ಸಾಲಿನ ಪದ್ಯದಲ್ಲಿ ವಿವರಣೆ ನೀಡಿದ್ದಾರೆ. ರಮೇಶ ಬೇಗಾರ್ ಮೇಕಿಂಗ್ ಅಮೃತಮತಿ ದೃಶ್ಯ ಕಾವ್ಯದಲ್ಲಿ ನಾಗಶ್ರೀ ಜಿ. ಎಸ್ ಇಲ್ಲಿ ಯಕ್ಷಗಾನ ನೃತ್ಯವನ್ನು ಮಾಡಿದ್ದಾರೆ. ಕಾಳಿಂಗನಾವುಡರು ಬರೆದ ಸಾಹಿತ್ಯದ ಪದ್ಯ “ಧನ್ಯನಾದೆ ತೃಪ್ತಳಾದೆ ಇಂದು ಬಾಹುಕ!! ಪೂರ್ಣಸುಖವ ಉಂಡೆ ನಿಜವೂ! ಚಿತ್ತರಂಜಕ ! ವರ್ಣಬೇಧ ಆದರೇನು ಗ್ರಹಿಸೆ ಮನದಲಿ! ನಿರ್ಣಯಿಸಿದೆ ಬಯಸಿ ಬರುವೆ ನಿತ್ಯ ನಿಶೆಯಲಿ!!” ಎಂಬ ಅದ್ಬುತ ಸಾಹಿತ್ಯ. ಇಲ್ಲಿ ಶ್ರೀಯುತ ಕಾಳಿಂಗನಾವುಡರು ಒಂದು ಹೆಣ್ಣು ತನ್ನ ಆಂತರ್ಯದಲ್ಲಿ ಕೇವಲ ಕಾಮ ಸುಖವನ್ನು ಉಂಡು ತೃಪ್ತಳಾದ ಅಮೃತಮತಿ. ಕೇವಲ ಆಳಾದ ಅಷ್ಟವರ್ಕ ಬಾಹುಕ ಹೇಳುತ್ತಾನೆ . ಮಹಾರಾಣಿ ನಾವು ಆಳುಗಳು ನೀವು ಮಹಾರಾಣಿ ಈ ರೀತಿ ನನ್ನ ಸೇರುವುದು ಸರಿಯಲ್ಲ. ಆಗ ಅಮೃತಮತಿ ಬಾಹುಕ ವರ್ಣ ಜಾತಿ ಬೇಧವನ್ನು ಮರೆತು ನಿನ್ನ ಕೂಡಿ ಸುಖವನ್ನು ಉಂಡ ನನಗೆ ತೃಪ್ತಿಯಾಗಿದೆ. ಇನ್ನು ದಿನೇ ದಿನೇ ರಾತ್ರಿಯಲಿ ನಿನ್ನ ಹತ್ತಿರ ಬರುತ್ತೇನೆ ನೀನು ಸುಖವನ್ನು ಕೊಡು ಎಂದು ಹೇಳುವ ಕಾಮನೆಯ ಬಾವವನ್ನು ಈ ಪದ್ಯವಲ್ಲಿ ಕೇವಲ ನಾಲ್ಕು ಸಾಲುಗಳಲ್ಲಿ ಕಾಳಿಂಗ ನಾವುಡರು ಬರೆಯುತ್ತಾರೆ. ಅಷ್ಟೆ ಸೊಗಸಾದ ಈ ಪದ್ಯವನ್ನು ಕಾಳಿಂಗ ನಾವುಡರ ಕಂಚಿನ ಕಂಠದಿಂದ ಇಂಪಾಗಿ ಹಾಡುತ್ತಾರೆ. ಇಲ್ಲಿ ನೃತ್ಯವನ್ನು ಯಕ್ಷತಾರೆ ನಾಗಶ್ರೀ ಜಿ. ಎಸ್. ಬಹಳ ಚೆನ್ನಾಗಿ ಅಭಿನಯ ಮಾಡಿದ್ದಾರೆ.
ಯಶೋಧರನ ಕಥೆಯಲ್ಲಿ ರಾಜನಾದ ಯಶೋಧರನು ಒಂದು ದಿನ ಮಧ್ಯರಾತ್ರಿಯಲ್ಲಿ ದುಃಸ್ವಪ್ನ ಕಾಣುತ್ತಾನೆ. ಆ ಪದವನ್ನು ಕಾಳಿಂಗನಾವುಡರು ಹೇಗೆ ವರ್ಣಿಸಿದ್ದಾರೆ ಎಂದರೆ, “ಇತ್ತ ಯಶೋಧರ ಕಂಡು ದುಃಸ್ವಪ್ನವ! ಚಿತ್ತ ತಲ್ಲಣಿಸಲ್ಕೇ ಬೆದರಿ! ತಾ ಬೆದರಿ! ಪತ್ನಿ ಅಮೃತಮತಿ ಅತ್ತಿ ತಾ ಗಿಣಿಯನು ಮತ್ತೆ ವೈಧವ್ಯದಿಂ ಅವಳು! ಪತ್ನಿ ತಾ ಗಡಬಡಿಸುತ್ತ ತಾ ಹೋಗಿ! ಹತ್ತಿರದಲಿ ಮಲಗಿರುವ ಪತ್ನಿಯ ಕಾಣದೆ ಚಿತ್ತದಿಂ ಬೆದರಿ ಎತ್ತ ಹೋದಳು ಈ ನಿಶೆಯೊಳು ಗುಪ್ತವಾಗಿಹ ಕಾರ್ಯವೇನು! ” ಎಂಬ ಸಾವೇರಿ ಹಾಗು ಅಭೇರಿ ರಾಗದಲ್ಲಿ ಕಾಳಿಂಗ ನಾವುಡರು ಹಾಡಿದ್ದಾರೆ. ಇಂತಹ ರಾಜ ಯಶೋಧರನ ದುಃಸ್ವಪ್ನವನ್ನು ಬರೆದಿದ್ದಾರೆ. ಇಲ್ಲಿ ಯಶೋಧರನ ಪಾತ್ರದಲ್ಲಿ ಶ್ರೀಮತಿ ನಿರ್ಮಲ ಗೋಳಿಕೊಪ್ಪನವರು ಚೆನ್ನಾಗಿ ಅಭಿನಹಿಸಿದ್ದಾರೆ. ಯಕ್ಷಗಾನ ಅಕಾಡಮಿಯ ಈಗಿನ ಸದಸ್ಯೆಯಾಗಿರುವ ಅವರು ಸ್ನೇಹಜೀವಿಯು ಆಗಿದ್ದಾರೆ.
“ರಾಜ ಕಾರ್ಯವ ತೊರೆ ಧನ್ಯ ಮಾನಸನಾಗೆ! ರಾಜ ತಾನಿಹ ನೀನೆಂಬ ಹದನ ರಾಜೇ ಮಾತೆಯು ಕೇಳಿ ದಿಗಿಲಾಗಿ! ಪರಿ ರವಿತೇಜ ಯಶೋಧರನೆಡೆಗೆ ಬರಲು!!” ಎಂಬ ರಾಜ ಮಾತೆಯು ತನ್ನ ಮನದ ಅಳಲು ತೋಡಿಕೊಳ್ಳಲು ಮಗನಾದ ಯಶೋಧರನಲ್ಲಿಗೆ ಬರುವ ಸನ್ನಿವೇಶವನ್ನು ಕಾಳಿಂಗನಾವುಡರು ಬರೆದಿದ್ದಾರೆ. ಇಲ್ಲಿ ನಾವುಡರು ಭೀಮ್ ಫಲಾಹ್ ಅಭೇರಿ ರಾಗವನ್ನು ಅಳವಡಿಸಿ ತುಂಬಾ ತನ್ನ ಕೋಗಿಲೆಯ ಧ್ವನಿಯಿಂದ ಇಂಪಾಗಿ ಹಾಡಿದ್ದಾರೆ. ಹೀಗೆ ಯಶೋಧರನ ತಾಯಿ ತನ್ನ ಸೊಸೆ ಅಮೃತ ಮತಿಯ ಹೀನ ಕಾರ್ಯವನ್ನು ಮಾಡುವಳು ಇದನ್ನು ಸಹ ಚೆನ್ನಾಗಿ ನಾವುಡವರು ಹಾಡಿದ್ದಾರೆ.
ಹಿಂದುಸ್ತಾನ ಶ್ರಾಸ್ತ್ರೀಯ ರಾಗವಾದ ಚಂದ್ರಕಂಸಾಳ್ ರಾಗವನ್ನು ಕಾಳಿಂಗ ನಾವುಡರು ಬರೆದಿದ್ದಾರೆ. “ರಾಧಿಕಾ ಕೃಷ್ಣ ರಾಧಿಕ ತರವಿರಹ ಕೇಶವ ತನವಿನಿ ಹಿತ ಮಫಿ ಹಾರ ಮುದಾಹಾರಂ ! ತಾನಾನು ಕೇತನ ತನುವಿನ ಬಾರಂ ಸರ ಸಮ ತೃಣ ಮಫಿ ಮಾಲಯ ಪಂಕಮ್ ಪಥ್ಯ ಹೀ ಹಿತ ಮಿಯಾ ವಟು ಹಿತ ಪಂಥಮ್ ಶಂಖಂ ಹರಿ ವೀಥಿ ಹರಿ ಹಿತಿ ಜಪ ಸೀತ ಕಾಮ್ ಹರೇ ಹರೇ ಹರೇ ವಿರಹ ವಿಹಿತ ಸ್ಮರಣಿಲಾಳೇನೇ ಕಾಣಂ ಶ್ರೀ ಜಯದೇವ ಸ್ಮರಹಿತ ಕಾಣಂ ಸುಖ ವಿತ ಕೇಶವಃ ಪದಮುಖ ವಿತಂ!!” ಎಂಬ ಜಯದೇವನ ಅಷ್ಟಪದಿ ಯ ಸಂಸ್ಕೃತ ಸಾಲುಗಳನ್ನು ಕಾಳಿಂಗ ನಾವುಡರು ತುಂಬ ಖುಷಿಯಿಂದ ಹಾಡಿದ್ದಾರೆ. ಅಲ್ಲದೆ ಯಕ್ಷಗಾನದಲ್ಲಿ ಸಂಸ್ಕೃತ ಪದವನ್ನು ಅಳವಡಿಸಿದ ಕೀರ್ತಿ ಶ್ರೀಯುತ ರಮೇಶ ಬೇಗಾರ್ ಹಾಗು ನಾವುಡರಿಗೆ ಸೇರಬೇಕು. ಈ ಪದ್ಯಕ್ಕೆ ಹೆಜ್ಜೆಯ ಹಾಕಿದವರು ಶ್ರೀಮತಿ ಅರ್ಪಿತಾ ರಾವ್ ಅಭಿನಯಿಸಿದ್ದಾರೆ. ಇಂತಹ ರಮೇಶ ಬೇಗಾರರವರ ಈ ಮೇಕಿಂಗ್ ಅಮೃತಮತಿ ಎಂಬ ಈ ದ್ಯಶ್ಯ ಕಾವ್ಯ ಸುಗಮವಾಗಲಿ ಎಂದು ಹಾರೈಸೋಣ. ಇವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಶೃಂಗೇರಿ ಶಾರದೆ ಕೊಡಲಿ ಎಂದು ಹಾರೈಸೋಣ.
✍️ ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.