ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಿಕೆ ಬ್ರದರ್ಸ್ ಕುಟುಂಬಸ್ಥರು ಗೂಡಿನಬಳಿ ಇವರ ವತಿಯಿಂದ ನೇತ್ರಾವತಿ ವೀರರು ಮತ್ತು ಕೊಡುಗೈ ದಾನಿ ಅಬ್ದುರ್ರಹ್ಮಾನ್ ಇವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಇವರನ್ನು ಜಿಕೆ ವಠಾರದಲ್ಲಿ ಸನ್ಮಾನಿಸಲಾಯಿತು.ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜನಾಬ್ ಪರ್ವೇಝ್ ಜಿಕೆ ಪ್ರಾಸ್ತಾವಿಕ ಸ್ವಾಗತ ಭಾಷಣಗೈದರು.ನೇತ್ರಾವತಿ ವೀರ ಜನಾಬ್ ಮೊಹಮ್ಮದ್ ಮಮ್ಮು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಜನಾಬ್ ಸಲೀಂ ಜಿಕೆ ಗೌರವಧನ ಹಸ್ತಾಂತರಿಸಿದರು.ಜನಾಬ್ ಅತಾವುಲ್ಲ ಜಿಕೆ ಧನ್ಯವಾದ ಸಲ್ಲಿಸಿ ಮಾಜಿ ಸ್ಥಳೀಯ ಶಿಕ್ಷಕರೂ ಆದ ಶ್ರೀಯುತ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕೆಲವು ದಿವಸದ ಹಿಂದೆ ಕಲ್ಲಡ್ಕದ ನಿಶಾಂತ್ ಎಂಬ ಹುಡುಗ ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದ.ಅವನನ್ನು ರಕ್ಷಿಸಲು ಜೀವದ ಹಂಗು ತೊರೆದು ನದಿಗೆ ಹಾರಿ ರಕ್ಷಿಸಲು ಪ್ರಯತ್ನಿಸಿದ್ದ ಕೆಲವು ಯುವಕರನ್ನು ಇಲ್ಲಿ ಸ್ಮರಿಸಲಾಯಿತು. ಕೊರೋನ ಸಂದರ್ಭದಲ್ಲೂ ಮಾನವೀಯ ನೆಲೆಯಲ್ಲಿ ಜೀವ ರಕ್ಷಿಸಿದ ಯುವಕರಿಗೆ ಧನ್ಯವಾದ ಸಲ್ಲಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.