ಬೆಂಗಳುರು (www.vknews.com) : ಕೊರೊನ ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಏರುತ್ತಲಿದೆ.ಆದರೆ ರಾಜ್ಯ ಸರಕಾರ ಏನು ಮಾಡುತ್ತಿದೆ ? ನಮ್ಮ ಆರೋಗ್ಯ ಸಚಿವರು ಯಾರು ಎನ್ನುವುದೇ ಗೊತ್ತಿಲ್ಲ. ಇದರ ಬಗ್ಗೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಇವರಿಂದ ಸಾಧ್ಯವಾಗುವುದಿಲ್ಲ ಎಂದ ಮೇಲೆ ಇವರು ಸಚಿವರಾಗಿ ಏನು ಪ್ರಯೋಜನ?ಇವರಿಂದ ನಿಭಾಯಿಸಲು ಸಾಧ್ಯವಿಲ್ಲದಿದ್ದರೆ ರಾಜಿನಾಮೆ ಕೊಡಬಹುದಲ್ಲವೇ? ಕೇವಲ ಪತ್ರಿಕಾ ಗೋಷ್ಠಿ ನಡೆಸಿ ಹೇಳಿಕೆ ಕೊಡುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು ಎನ್ನುವ ಮೂಡರಾಗಿದ್ದಾರೆಯೇ ನಮ್ಮ ಸಚಿವರು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯಧ್ಯಕ್ಷರು ಅಡ್ವೋಕೇಟ್ ತಾಹೀರ್ ಹುಸೇನ್ ಆತಂಕ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿರುವುದು ಕೆಲವು ಸರಕಾರಿ ಹಾಸ್ಟೆಲ್ಗಳಲ್ಲಿ.ಈ ಹಾಸ್ಟೆಲ್ಗಳಲ್ಲಿ ಕೇವಲ ನಾಲ್ಕು ಇಲ್ಲವೇ ಐದು ಶೌಚಾಲಯಗಳಿರುತ್ತದೆ.50ರಿಂದ 60 ಮಂದಿಗೆ ನಾಲ್ಕೈದು ಶೌಚಾಲಯ ಉಪಯೋಗಿಸುವುದರಿಂದ ಕೊರೊನ ವೈರಸನ್ನು ನಿಯಂತ್ರಣ ಮಾಡಲು ಸಾಧ್ಯವಿದೆಯೇ?ಅಷ್ಟೂ ಜ್ಞಾನವಿಲ್ಲದ ಆರೋಗ್ಯ ಸಚಿವರಿರುವ ಈ ಆಡಳಿತ ಕೊರೊನವನ್ನು ನಿಯಂತ್ರಿಸಬಹುದೇ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಆದ್ದರಿಂದ ಜನರ ಸಹನೆಯನ್ನು ಪರೀಕ್ಷಿಸಬೇಡಿ.ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುದಿಲ್ಲವಾದರೆ ಕೂಡಲೇ ರಾಜಿನಾಮೆ ನೀಡಿ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.