(www.vknews.com) : ಅನ್ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗದ ಆದಿವಾಸಿ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವ ಕಾರಣದಿಂದ ಈ ಕೃತ್ಯವನ್ನು ಮಾಡಿದ್ದಾಳೆ.
ಇಲ್ಲಿ ದೇವಿಕಾ ಎಂಬ ಹೆಣ್ಣು ಮಗಳ ಮಾತ್ರ ಸಮಸ್ಯೆಯಲ್ಲ ಇದೂ ಒಂದು ದೇಶದ ಸಮಸ್ಯೆ ನಿನ್ನೆ ಇವಳು ಆತ್ಮಹತ್ಯೆ ಮಾಡಿಕೊಂಡದ್ದರಿಂದ ಸಮಸ್ಯೆಯ ಮೂಲವೇನೆಂದು ತಿಳಿಯಿತು.
ಈ ಘಟನೆಗೆ ಸಂಬಂಧಿಸಿದಂತೆ ಉತ್ತರಿಸಬೇಕಾದದ್ದು ಈ ದೇಶವನ್ನಾಳುವ ಜನಪ್ರತಿನಿಧಿಗಳು. ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ನಮ್ಮ ದೇಶದಲ್ಲಿ ಆನ್ಲೈನ್ ತರಗತಿಗಳು ನಡೆಯುವಷ್ಟು ನಮ್ಮ ದೇಶ ಬೆಳೆದು ನಿಂತಿಲ್ಲ ಯಾಕೆಂದರೆ ಇಲ್ಲಿ ಚುಣಾಯಿತರಾಗಿ ಅಧಿಕಾರ ಸ್ವೀಕರಿಸುವ ಪ್ರತಿನಿಧಿಗಳು ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಾರೆಯೇ ಹೊರತು ಜನರ ಅಹವಾಲನ್ನು ಸ್ವೀಕರಿಸಲು ಸಿಧ್ಧವಾಗಿರುವುಲ್ಲ. ದೇಶದ ಮೊದಲ ಸಮಸ್ಯೆ ಭ್ರಷ್ಟ ರಾಜಕಾರಣಿಗಳು. ಗ್ರಾಮೀಣ ಮಟ್ಟದಿಂದ ವಿಕಸನಗೊಂಡರೆ ರಾಷ್ಟ್ರೀಯ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬಹುದು.
ಯಾವುದೇ ರೀತಿಯ ವಿದ್ಯುತ್ ಸಂಪರ್ಕವನ್ನು ಇದುವರೆಗೂ ಪಡೆಯದ ಅದೆಷ್ಟೋ ಮನೆಗಳಿವೆ. ಇನ್ನು ಶಿಕ್ಷಣದಿಂದ ವಂಚಿತರಾದ ಮಕ್ಕಳು ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆನ್ಲೈನ್ ತರಗತಿಗಳು ಪೂರಕವಲ್ಲ ಎಂಬೂದು ನನ್ನ ಅನಿಸಿಕೆ.
#_ಚಿಗುರೆಲೆ Safwan Koorath
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.