ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಉದ್ಯಾವರ ಪಂಚಾಯತ್ ಗೆ ಗ್ರಾಮ ಪಂಚಾಯತ್ ಸದಸ್ಯರು ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಗ್ರಾಮ ಪಂಚಾಯತ್ ಸದಸ್ಯರ ಅಧಿಕಾರವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು ,ಇದಕ್ಕೂ ಮುನ್ನವೇ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಡಿಯೋ ರನ್ನ ಬದಲಾಯಿಸಿದನ್ನ ವಿರೋಧಿಸಿ ಗ್ರಾಮಪಂಚಾಯತ್ ನ ಎಲ್ಲಾ ಸದಸ್ಯರು ಒಟ್ಟಾಗಿ ವಿರೋಧಿಸಿದ್ದಾರೆ.ಕಳೆದ ನಾಲ್ಕು ತಿಂಗಳ ಹಿಂದೆ ಪಿಡಿಯೋ ವರ್ಗಾವಾದ ಬಳಿಕ ತಾತ್ಕಲಿಕವಾಗಿ ಪಿಡಿಯೋ ರನ್ನ ಪಂಚಾಯತ್ ಗೆ ನಿಯೋಜಿಸಲಾಗಿತ್ತು.ಅದ್ರೆ ಏಕಾಏಕಿ ಈಗಿರುವ ಪಿಡಿಯೋ ವರ್ಗಾವಣೆ ಹಿಂದೆ ರಾಜಕೀಯ ಪಿತೂರಿ ಇದೆ ಎನ್ನುವುದು ಸದಸ್ಯರ ಅರೋಪವಾಗಿದೆ.ಹೀಗಾಗಿ ಎಲ್ಲರು ಪಕ್ಷ ಬೇದ ಮರೆತು ಇದನ್ನ ವಿರೋಧಿಸಿದ್ದು ,ಪಂಚಾಯತ್ ಗೆ ಬೀಗ ಜಡಿದುಪ್ರತಿಭಟಿಸಿದ್ದೇವೆ ಎಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.