ದುಬೈ (www.vknews.com) : ಸಮಸ್ತ ಕೇರಳ ಜಮ್ಯಿಯ್ಯತ್ತುಲ್ ಉಲಾಮಾ ವಿದ್ಯಾರ್ಥಿ ಸಂಘಟನೆ ಅದೀನದಲ್ಲಿ ಕಾರ್ಯಾಚರಿಸುತ್ತಿರುವ SKSSF ವಿಖಾಯ ತಂಡದ ಸಕ್ರೀಯ ಕಾರ್ಯಕರ್ತರಾದ ಮಾರಿಪಳ್ಳ ಮುಬಾರಕ್ ಅಮೆಮಾರ್ ಅವರು ಮಸೀದಿ ಸ್ವಚ್ಛತೆ ಮಾಡುವ ಸಂದರ್ಭ ವಿದ್ಯುತ್ ಅವಗಡ ಸಂಭವಿಸಿ ಮರಣ ಹೊಂದಿದರುವ ಬಗ್ಗೆ SKSSF ಮತ್ತು ವಿಖಾಯ ಯುಎಇ ಸಮಿತಿಯು ತೀವ್ರ ಸಂತಾಪ ಸೂಚಿಸಿರುತ್ತದೆ.
ಸಾಧು ಸ್ವಭಾವ ಮತ್ತು ಸೇವಾ ಮನೋಭಾವ ಮೈಗೂಡಿಸಿಕೊಂಡ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಮತ್ತು ಅವರ ಪರಲೋಕ ವಿಜಯಕ್ಕಾಗಿ ತಹ್ಲೀಲ್ ಸಮರ್ಥನೆಯನ್ನು ನಡೆಸಿರುತ್ತದೆ, ಕಾರ್ಯಕರ್ತರಲ್ಲಿ ಪ್ರಾರ್ಥನೆಗೆ ಮನವಿ ಮಾಡಿರುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ ಮತ್ತು ವಿಖಾಯ ಚಯರ್ ಮೇನ್ ನವಾಝ್ ಬಿ ಸಿ ರೋಡ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.