(www.vknews.com) : ನಾವು ಇಂದು ಬಹಳ ಪ್ರಮುಖವಾಗಿ ಚಿಂತಿಸಬೇಕಾದ ವಿಷಯ ಏನೆಂದರೆ , ಪ್ರಮುಖವಾಗಿ ಗಲ್ಫ್ ದೇಶಗಳಲ್ಲಿ ಕೊರೊನ ಎಂಬ ಮಹಾಮಾರಿಯಾ ಅಟ್ಟಹಾಸದ ಪರಿಣಾಮದಿಂದ ಉದ್ಯೋಗ ಇಲ್ಲದೆ, ವೀಸಾ ಅವಧಿ ಮುಗಿದು, ವೇತನ ಇಲ್ಲದೆ ದೀರ್ಘ ಅವಧಿಯ ಕಡ್ಡಾಯ ರಜೆ ಪಡೆದು ಲಕ್ಷಾಂತರ ಭಾರತೀಯರು ಹಾಗೂ ಕನ್ನಡಿಗರು ಸಂಕಷ್ಟ ಅನುಭವಿಸುವಂತಾಗಿದೆ.
ಉದ್ಯೋಗ ಇಲ್ಲ, ದಿನ ಕಳೆಯಲು ಹಣವೂ ಇಲ್ಲ,…! ಮುಂದೇನು ಎಂಬ ಚಿಂತೆ, ತವರಿಗೆ ಮರಳೋನ ಎಂದರೆ ಲಾಕ್ ಡೌನ್ ಕಾರಣದಿಂದ ಸಮರ್ಪಕ ವಿಮಾನಯಾನ ಸೌಕರ್ಯ ಕೂಡ ಇಲ್ಲದೆ ಎಲ್ಲಾರೂ ಕೈ ಕಟ್ಟಿ ಆಕಾಶ ನೋಡುವ ಪರಿಸ್ಥಿತಿ ಬಂದೊದಗಿದೆ. ಪ್ರವಾಸಿ ಸಂಘಟನೆಗಳು ಹಾಗೂ ಇಲ್ಲಿನ ಸರಕಾರ ಒದಗಿಸುತ್ತಿರುವ ಪಡಿತರ ಸಾಮಗ್ರಿ ಹಾಗೂ ಇನ್ನಿತರ ಸೌಲಭ್ಯಗಳಿಂದ ಇಲ್ಲಿಯವರೆಗೂ ದೈನಂದಿನ ಚಟುವಟಿಕೆ ಪೂರೈಸಿದ ಅನಿವಾಸಿಗರು ಮುಂದೇನು ಎಂಬ ಚಿಂತೆಯಲ್ಲಿ ಕೊರಗ ತೊಡಗಿದ್ದಾರೆ…
ತವರಿಗೆ ತೆರಳಿ ಗಂಜಿ ಅನ್ನ ಕುಡಿದು ಆದರು ಜೀವನ ನಡೆಸೋನ ಎಂದರೆ ಭಾರತ ಸರಕಾರದ ದಿವ್ಯ ನಿರ್ಲಕ್ಷ್ಯ ಹಾಗೂ ಅಸಡ್ಡೆ. ಇಲ್ಲಿನ ಸರಕಾರಗಳು ಜಗತ್ತಿನ ಎಲ್ಲಾ ದೇಶಗಳಿಗೆ, ತಮ್ಮ ತಮ್ಮ ದೇಶದ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರನ್ನು ವಾಪಸ್ ಕರೆದುಕೊಂಡು ಹೋಗಲು ಅನುವು ಮಾಡಿಕೊಟ್ಟು, ಸೂಚನೆ ನೀಡಿದಾಗ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ರಿಕ ದೇಶಗಳ ಹಾದಿಯಾಗಿ ಜಗತ್ತಿನ ಎಲ್ಲಾ ದೇಶಗಳು ವಿಶೇಷ ಆಸಕ್ತಿ ವಹಿಸಿ ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸ ತೊಡಗುತ್ತದೆ. ಆದರೆ ಜಗತ್ತಿನ ಸೂಪರ್ ಪವರ್ ದೇಶ ಎಂದೆಲ್ಲ ಕರೆಸಿಕೊಳ್ಳುವ ನಮ್ಮ ಹೆಮ್ಮೆಯ ಭಾರತ ದೇಶದ ಸರ್ಕಾರಕ್ಕೆ ಮಾತ್ರ ಪ್ರವಾಸಿಗರ ಗೋಳು ಕೇಳಿಸುವುದೇ ಇಲ್ಲ.
ತಮ್ಮದೇ ಸ್ವಂತ ದೇಶದ ನಾಗರಿಕರ ಸ್ಥಳಾಂತರಿಸುವ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಭಾರತ ದೇಶದ ವಿದೇಶಿ ವಾಣಿಜ್ಯ ವ್ಯವಹಾರಗಳ ಮೇಲೆ ನಿರ್ಬಂಧಗಳನ್ನು ಹೇರುತ್ತೇವೆ ಎಂಬ ಕಠಿಣ ಎಚ್ಚರಿಕೆ ಗಲ್ಫ್ ದೇಶಗಳು ನೀಡಿದ ನಂತರ, ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಭಾರತದ ಮಾನ ಹರಾಜು ಆದ ನಂತರ “ವಂದೇ ಭಾರತ್ ಮಿಷನ್” ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಬಗ್ಗೆ ಕೇಂದ್ರ ಸರಕಾರದಿಂದ ಅಧಿಕೃತ ಘೋಷಣೆಯಾಗುತ್ತದೆ. ಹಾಗೂ ಭಾರತೀಯ ಮಾಧ್ಯಮಗಳು ಇದಕ್ಕೆ ತುಪ್ಪ ಬೆಣ್ಣೆ ಸವರಿ ತಮ್ಮ ಎಂದಿನ ಕಾಯಕದಂತೆ ಪ್ರಚಾರ ನೀಡಲು ಆರಂಭಿಸುತ್ತದೆ.
“ವಂದೇ ಭಾರತ್ ಮಿಷನ್” ಕಾರ್ಯ ಚಟುವಟಿಕೆಗಳ ಮೇಲುಸ್ತುವಾರಿಯನ್ನು ಆಯಾ ದೇಶಗಳ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸುತ್ತದೆ. ಹಾಗೂ ಸರಕಾರವು ಕೆಲವು ಮಾನದಂಡ ವಿಧಿಸಿ ಭಾರತಕ್ಕೆ ಬರಲು ಇಚ್ಛಿಸುವವರು ಸರಕಾರದ ವೆಬ್ಸೈಟ್ ಗಳಲ್ಲಿ ತಮ್ಮ ತಮ್ಮ ದಾಖಲೆ ಗಳನ್ನು ಒದಗಿಸಲು ತಿಳಿಸುತ್ತದೆ. ಅದರಂತೆ 4 ಲಕ್ಷಕ್ಕೂ ಅಧಿಕ ಮಂದಿ ಮೊದಲ ತಿಂಗಳುಗಳಲ್ಲಿ ತಮ್ಮ ಮಾಹಿತಿ ದಾಖಲಿಸಿ, ರಾಯಭಾರಿ (Embassy) ಕಚೇರಿಯ ಕರೆಗಾಗಿ ಕಾದು ಕುಳಿತಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ 6500 ಹೆಚ್ಚು ಗರ್ಭಿಣಿಯರು ತಮ್ಮ ದೇಶಕ್ಕೆ ವಾಪಸ್ ತೆರಳಲು ನೋಂದಾವಣಿ ಮಾಡಿರುತ್ತಾರೆ.
ಭಾರತಕ್ಕೆ ವಾಪಸ್ ತೆರಳಲು ಯಾರು ಯಾರು ಮೊದಲ ಆದ್ಯತೆ ಪಡೆಯುತ್ತಾರೆ ಎಂಬ ಪ್ರಶ್ನೆಗೆ ಸರಕಾರದ ಮಾನದಂಡ ಈ ಕೆಳಗಿನಂತೆ ಇದೆ. 1. ಗರ್ಭಿಣಿಯರು 2. ಹಿರಿಯ ನಾಗರಿಕರು. 3. ವೈದ್ಯಕೀಯ ಚಿಕಿತ್ಸೆಯ ರೋಗಿಗಳು. 4. ವೀಸಾ ಕಾಲಾವಧಿ ಮುಗಿದವರು. 5.ಕೆಳ ಹಂತದ ಕಾರ್ಮಿಕ ವರ್ಗ ದವರು. 6. ಕೆಲಸ ಕಳೆದು ಕೊಂಡವರು 7. ರಜಾ ಅವಧಿಯಲ್ಲಿ ಬರಲು ಇಚ್ಛಿಸಿದವರು.
ಹೀಗೆ ಮಾನದಂಡ ವಿಧಿಸಿದ ಸರಕಾರ ನಂತರ ತನ್ನ ಕರಾಮತ್ತು ತೋರಿಸುತ್ತದೆ.
ಮೊದಲ ವಿಮಾನದಲ್ಲಿ ಇಲ್ಲಿ ವಂಚನೆ ಮಾಡಿ ಇಲ್ಲಿನ ಸರಕಾರಕ್ಕೆ ಬೇಕಾಗಿದ್ದ ವ್ಯಕ್ತಿ(ಹೆಸರು ಬೇಡ) ಹಾಗೂ ಅವನ ಕುಟುಂಬದ 6 ಜನರಿಗೆ ಭಾರತಕ್ಕೆ ತೆರಳಲು ಟಿಕೆಟ್ ಒದಗಿಸಿ ಇಲ್ಲಿಂದ ಪರಾರಿಯಾಗಲು ಸಹಕಾರ ನೀಡುತ್ತದೆ. ಈ ಸುದ್ದಿ ಇಲ್ಲಿನ ಅಧಿಕೃತ ಮಾಧ್ಯಮಗಳಲ್ಲೂ ಚರ್ಚೆಯಾಗಿತ್ತು. ಕಷ್ಟ ದಲ್ಲಿ ಇರುವವರಿಗೆ ಸಹಾಯ ಮಾಡುವ ಬದಲು ಉದ್ಯಮಿಗಳು ಹಾಗೂ ತನಗೆ ಬೇಕಾದವರಿಗೆ ಪ್ರಾಮುಖ್ಯತೆ ನೀಡುತ್ತ ಬಡ ಪ್ರವಾಸಿ ಜನರು, ಗರ್ಭಿಣಿ ಮಹಿಳೆಯರಿಗೆ ವಂಚಿಸುತ್ತಾ ಬಂದಿದೆ. ಇಂದಿಗೂ ಕೂಡ ಬಹುತೇಕ ಗರ್ಭಿಣಿ ಮಹಿಳೆಯರು ತಮ್ಮ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.
ಕರ್ನಾಟಕ ಸರಕಾರವು ಕನ್ನಡಿಗರು ಇನ್ನಿತರ ದೇಶಗಳಲ್ಲಿ ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಪರಿವೇ ಇಲ್ಲದ ಹಾಗೆ ಕೈ ಕಟ್ಟಿ ಕುಳಿತಿದೆ. ಮೊದಲ ವಿಮಾನಯಾನ ಪಟ್ಟಿಯಲ್ಲಿ ಗಲ್ಫ್ ದೇಶ ಗಳಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ಸೌಲಭ್ಯ ಇಲ್ಲದಿರುವುದೇ ಇವರ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ. ಇನ್ನಾದರೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ, ಹೆಚ್ಚಿನ ವಿಮಾನಯಾನ ಸೇವೆ ಒದಗಿಸುವ ಮೂಲಕ, ರಾಜ್ಯಕ್ಕೆ ಹಿಂದಿರುಗುವ ಕನ್ನಡಿಗರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಸರಕಾರದ ಖರ್ಚಿನಲ್ಲಿ ಒದಗಿಸಬೇಕು. ಏಕೆಂದರೆ ಅನಿವಾಸಿ ಕನ್ನಡಿಗರು ಕೆಲಸ ಕಾರ್ಯ ಕಳೆದು ಹಿಂತಿರುಗಿ ಬರುತ್ತಿರುವ ಈ ಸಮಯದಲ್ಲಿ ಅವರಿಂದ ಕ್ವಾರಂಟೈನ್ ಸೌಲಭ್ಯಧ ವೆಚ್ಚ ಭರಿಸಲು ಆದೇಶ ನೀಡಿರುವುದು ಎಷ್ಟು ಸರಿ.???
ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತ ಸರಕಾರ ಹಾಗೂ ರಾಜ್ಯ ಸರಕಾರ ಹೆಚ್ಚಿನ ವಿಮಾನಯಾನ ಸೌಲಭ್ಯ ಉಚಿತವಾಗಿ ಒದಗಿಸಿ ತಮ್ಮ ದೇಶದ ಅನಿವಾಸಿ ಭಾರತೀಯರ ರಕ್ಷಣೆಗೆ ಮುಂದಾಗಬೇಕಾಗಿ ಈ ಮೂಲಕ ಜಿ ಸಿ ಸಿ ಕೊಡಗು *SKSSF ಒಕ್ಕೊರಲಿನಿಂದ ಮನವಿ ಮಾಡುತ್ತಿದೆ.
✒ಅಬ್ದುಲ್ ರಜಾಕ್ ಬಜೆಗುಂಡಿ ಅನಿವಾಸಿ ಭಾರತೀಯ* . ●President:- HUSSAIN FAIZY BAJAGUNDI (Dubai) President Shihab Alungal (Jeddah )secretary Abdul razak Faize (Riyad )
#SKSSF_GCC_KODAGU_DISTRICT_COMMITTEE
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.