ಮಂಗಳೂರು (www.vknews.com) : ಬೆಂಗಳೂರಿನ ಯಲಹಂಕ ಫ್ಲೈವರ್ ಗೆ ವಿವಾದಿತ ವ್ಯಕ್ತಿ ಸಾವರ್ಕರ್ ನ ಹೆಸರು ಇಡಲು ಸರಕಾರ ಪ್ರಯತ್ನಿಸಿದ ಸಂದರ್ಭದಲ್ಲಿ ಜನರ ಭುಗಿಲೆದ್ದ ಆಕ್ರೋಶದಿಂದ ಸರ್ಕಾರ ಸಾವರ್ಕರ್ ನ ಹೆಸರು ಹಾಕಲು ಹಿಂದೇಟು ಹಾಕಿ ನಾಮಕರಣ ಮುಂದೂಡಿದ ವಿಚಾರ ನಮಗೆಲ್ಲ ತಿಳಿದ ವಿಷಯ.
ಈ ಒಂದು ಸಂದಿಗ್ಧ ಸಮಯದಲ್ಲಿ ಮಂಗಳೂರಿನ ಪಂಪ್ವೆಲ್ ಮೇಲ್ಸೇತುವೆ ಉದ್ಘಾಟನೆಗೊಂಡು ಹಲವು ತಿಂಗಳು ಕಳೆದ ನಂತರ ಇದೀಗ ಸಂಘ ಪರಿವಾರದ ಕಿಡಿಗೇಡಿಗಳು ಗಲಭೆಯನ್ನು ಮತ್ತು ಪರಸ್ಪರ ದ್ವೇಷ ವನ್ನು ಹರಡಿ ಜಿಲ್ಲೆಯ ಸ್ವಾಸ್ಥ್ಯ ಕದಡುವ ಉದ್ದೇಶದಿಂದ ಬ್ರಿಟಿಷರಿಗೆ ಶರಣಾಗತಿ ಬಯಸಿ ಪತ್ರ ಬರೆದ ವಿವಾದಿತ ವ್ಯಕ್ತಿ ಸಾವರ್ಕರ್ ನ ಹೆಸರಿನ ಬ್ಯಾನರ್ ಅಳವಡಿಸುವುದರ ಮೂಲಕ ಜಿಲ್ಲೆಯ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಯಾವ ರೀತಿಯಲ್ಲಿ ಸಾವರ್ಕರ್ ಬ್ರಿಟಿಷರೊಂದಿಗೆ ಕೈಜೋಡಿಸಿ ಹೇಡಿ ತನದ ಕೆಲಸ ಮಾಡಿದ್ದಾನೋ ಅದೇ ರೀತಿಯಲ್ಲಿ ಇಂದು ಸಂಘಪರಿವಾರಿಗಳು ರಾತ್ರೋರಾತ್ರಿ ಈ ರೀತಿಯಲ್ಲಿ ಹೇಡಿತನದ ಕೆಲಸಗಳನ್ನು ಜಿಲ್ಲೆಯಲ್ಲಿ ನಡೆಸುತ್ತಿರುವುದು ಖಂಡನಾರ್ಹವಾಗಿದೆ.
ಯಾವುದೇ ಕಾರಣಕ್ಕು ಪಂಪ್ವೆಲ್ ಮೇಲ್ಸೋತುವೆಗೆ ದೇಶದ್ರೋಹಿ ಸಾವರ್ಕರ್ ನ ಹೆಸರಿಡಲು ಜಿಲ್ಲೆಯ ಮತ್ತು ರಾಜ್ಯದ ಜನತೆ ಬಿಡುವುದಿಲ್ಲ. ಆದ್ದರಿಂದ ದೇಶದ್ರೋಹಿಯ ಬ್ಯಾನರ್ ಅಳವಡಿಸಿ ಸಮಾಜದ ಸ್ವಾಸ್ಥ್ಯ ಕದಡಲು ಪ್ರಯತ್ನ ಪಡುತ್ತಿರುವ ಸಂಘಪರಿವಾರದ ಕಿಡಿಗೇಡಿಗಳ ವಿರುದ್ಧ ಪೋಲಿಸ್ ಇಲಾಖೆ ಮೃದು ಧೋರಣೆ ತಾಳದೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಹಾಗೆಯೇ ಕಿಡಿಗೇಡಿಗಳಿಗೆ ಬ್ಯಾನರ್ ಮುದ್ರಣ ಮಾಡಿದ ಸಂಸ್ಥೆಯ ಮೇಲೂ ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.