ಉಪ್ಪಿನಂಗಡಿ (www.vknews.com) :-ಜಿಲ್ಲಾಧಿಕಾರಿಗಳ ಆದೇಶದ ಅಣುಗಣವಾಗಿ ಹಾಗೂ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರ ಆದೇಶದಂತೆ ಈ ಬಾರಿಯೂ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡವನ್ನು ಉಪ್ಪಿನಂಗಡಿಯಲ್ಲಿ ರಚಿಸಲಾಗಿದೆ ಕಾರ್ಯಚರಣೆ ಬಳಸುವ ರಬ್ಬರ್ ದೋಣಿ,,ಲೈಪ್ ಜಾಕೆಟ್, ಆಸ್ಕಲೈಟ್,ಮರಕತ್ತರಿಸುವ ಯಂತ್ರದೊಂದಿಗೆ ತಂಡ ಸಿದ್ದವಾಗಿದೆ ಜೂನ್ ತಿಂಗಳಿನಿಂದ ಸೆಪೈಂಬರ್ ತಿಂಗಳ ಅಂತ್ಯದವರೆಗೆ ಇ ತಂಡ ಕಾರ್ಯ ನಿರ್ವಹಿಸಲಿದೆ
ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಲ್ಲಿ ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.ನೇತೃತ್ವದಲ್ಲಿ ಪ್ರವಾಹರಕ್ಷಣಾ ತಂಡ ವನ್ನು ರಚಿಸಲಾಗಿದೆ 3 ಜನ ಗೃಹರಕ್ಷಕರನ್ನು ಒಳಗೊಂಡ ಇ ತಂಡದಲ್ಲಿ ಒರ್ವ ನುರಿತ ಈಜುಗಾರ,ಎಲೆಕ್ಟೀಷಿಯನ್,ಕಟ್ಟಡ ನಿರ್ಮಾಣ ಪರಿಣತ ಇದ್ದು ಪ್ರವಾಹರಕ್ಷಣಾ ತಂಡದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.,ಎ.ಎಸ್.ಎಲ್.ಜನಾರ್ಧನ ಆಚಾರ್ಯ, ವಸಂತ ಇದ್ದು ಇವರೆಲ್ಲರೂ ಪುತ್ತೂರು ತಹಶೀಲ್ದಾರ್, ಉಪ್ಪಿನಂಗಡಿ ಉಪ ತಹಶೀಲ್ದಾರ್ ನಿರ್ದೇಶದನ್ವಯ ಕಾರ್ಯನಿರ್ವಹಿಸಲ್ಲಿದ್ದಾರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.