(www.vknews.com) : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಲ್ಕಿ- ಮೂಡಬಿದ್ರೆ ಕ್ಷೇತ್ರ ಸಮಿತಿ ಹಾಗೂ ತೋಡಾರ್ ಮುಸ್ಲಿಂ ಯೂತ್ ಲೀಗ್ ಇದರ ಜಂಟೀ ಆಶ್ರಯದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ಸ್ವಚ್ಚತಾ ಅಭಿಯಾನದ ಬಾಗವಾಗಿ ದಿನಾಂಕ 4.5.6 ರವರೆಗೆ ಪರಿಸರ ಸ್ವಚ್ಛತೆಯ ಅರಿವು ಮೂಡಿಸುದಕ್ಕಾಗಿ ಯೂತ್ ಲೀಗ್ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕರ ಪತ್ರ ವಿತರಣೆ.
ಪ್ರತಿಯೊಂದು ಮನೆಯಲ್ಲೂ ಗಿಡ ನೆಡುವ ಯೋಜನೆ ಯೂತ್ ಲೀಗ್ ಕಾರ್ಯಕರ್ತರಿಂದ ಪರಿಸ ಸ್ವಚ್ಛತೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತಾ ಅಭಿಯಾನದ ಉದ್ಘಾಟನಾ ಸಭೆಯು ಇಂದು ತೋಡಾರ್ ಜಂಕ್ಷನ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತೋಡಾರ್ ತೆಂಕ ಮಿಜಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಅಬ್ದುಲ್ಲಾ ಸೂರಿಂಜೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಸನಬ್ಬ ಜೆ.ಕೆ. ಮುಸ್ಲಿಂ ಯೂತ್ ಲೀಗ್ ತೋಡಾರ್ ಅಧ್ಯಕ್ಷರಾದ ಹನೀಫ್ ಹೆಚ್.ಎಂ.ಟಿ. ಬದ್ರಿಯಾ ಜುಮಾ ಮಸೀದಿ ತೋಡಾರ್ ಪ್ರ.ಕಾರ್ಯದರ್ಶಿ ಇಕ್ಬಾಲ್, ಮುಸ್ಲಿಂ ಲೀಗ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಲೀಂ ಹಂಡೇಲ್, ತೋಡಾರ್ ಬೈತುರ್ರಹ್ಮಾ ಸಮಿತಿ ಉಪಾಧ್ಯಕ್ಷರಾದ ಅಶ್ರಫ್ ಹಿದಾಯತ್, ಮುಸ್ಲಿಂ ಯೂತ್ ಲೀಗ್ ತೋಡಾರ್ ಸಮಿತಿ ಪ್ರ.ಕಾರ್ಯದರ್ಶಿ ಝುಬೈರ್ ಕಲಾಯಿ, ಯೂತ್ ಲೀಗ್ ಜೊತೆ ಕಾರ್ಯದರ್ಶಿ ಅನೀಸ್ ತೋಡಾರ್, ಯೂತ್ ಲೀಗ್ ಕಾರ್ಯಕರ್ತರಾದ ಇಂತಿಯಾಝ್ ತೋಡಾರ್, ನೌಫಾಲ್ ಹೆಚ್.ಎಂ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.