(www.vknews.com) : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸವಿತಾ S ರವರ ನೇತೃತ್ವದಲ್ಲಿ ಸುಮಾರು 60ರಷ್ಟು ಗಿಡಗಳನ್ನು SKSSF ಮಾಡನ್ನೂರು ಕ್ಲಸ್ಟರ್ ವಿಖಾಯ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕ ರವರಿಗೆ ಹಸ್ತಾಂತರಿಸಿದ್ದು, ಅದನ್ನು ಮಾಡನ್ನೂರು ಕ್ಲಸ್ಟರ್ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ನೆಟ್ಟು ಇಂದು ಅಮ್ಚಿನಡ್ಕ ಬದ್ರಿಯಾ ಜುಮಾ ಮಸೀದಿಯ ಮುಂಬಾಗದಲ್ಲಿ ನೆಡುವ ಮೂಲಕ ಸಮಾರೋಪ ಗೈದರು.
ಈ ಸಂದರ್ಭದಲ್ಲಿ ಅಮ್ಚಿನಡ್ಕ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಅರಿಯಡ್ಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮ ಕುಮಾರಿ, ಸ್ಥಳೀಯ ಪಂಚಾಯತ್ ಸದಸ್ಯರಾದ ದಿವ್ಯನಾಥ ಶೆಟ್ಟಿ, ಸಲ್ಮಾ ಅಮ್ಚಿನಡ್ಕ, ಪಂಚಾಯತ್ ಸಿಬ್ಬಂದಿ ಶಶಿ, ಮಾಡನ್ನೂರು ಕ್ಲಸ್ಟರ್ ಕಾರ್ಯದರ್ಶಿ ಮನ್ಸೂರ್ ಮೌಲವಿ ಅಮ್ಚಿನಡ್ಕ, ಪ್ರಶಾಂತ, ಬಾತಿಷ ಅಮ್ಚಿನಡ್ಕ, ರಪೀಕ್ ಅಮ್ಚಿನಡ್ಕ, ಮಸೂದ್ ಅಬ್ದುಲ್ಲಾ, ಲತೀಫ್ ಬದಿಯಡ್ಕ, ಆಸಿಫ್ A M ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.