ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರಿಯರೇ ಇದೊಂದು ಸಂಗತಿ ನೀವು ಕೇಳಲೇಬೇಕು. ನಮ್ಮ ಸುತ್ತಲೂ ಅದೆಷ್ಟೋ ಶ್ರೀಮಂತರ ಮನೆಯ ಕೆಲವು ಮಕ್ಕಳು ಓಡಾಡಿಕೊಂಡಿರುತ್ತಾರೆ.ಅವರನ್ನು ನೋಡಿದಾಕ್ಷಣ ಅವರು ಧರಿಸುವ ಬಟ್ಟೆ,ಕೈಯಲ್ಲಿರುವ ಮೊಬೈಲ್, ಓಡಾಡುವ ಕಾರು ಬೈಕ್ ಎಲ್ಲವೂ ವೆರೈಟಿ ಯಾಗಿರುತ್ತದೆ.
ಅವರದ್ದೇ ಆದ ಯುವಕರ ಟೀಮ್ ಅವರೊಂದಿಗೆ ಇರುತ್ತದೆ. ಬೀಚು, ಮೋಜು,ಪಾರ್ಟಿ ಎಲ್ಲಾ ಕಾಮನ್ .ಈ ಬಗ್ಗೆ ಅವರ ಹೆತ್ತವರಿಗೆ ಟೆನ್ಷನೋ ಟೆನ್ಷನ್ ಕೇಳಿದ್ದು ಕೊಡಬೇಕಾದ ಪರಿಸ್ಥಿತಿ.
ಆದರೆ ನಾನು ನಿಮಗೆ ಪರಿಚಯಿಸುವ ಇಬ್ಬರು ಶ್ರೀಮಂತರ ಮಕ್ಕಳಿಬ್ಬರ ಮೋಜು ಏನೆಂದು ನೀವು ತಿಳಿದಿದ್ದೀರಾ?
ಸದ್ದು ಗದ್ದಲವಿಲ್ಲದೇ ಅವರು ಮಹತ್ಸಾದನೆಯನ್ನು ಮಾಡಿ ತೋರಿಸಿದ್ದಾರೆ. ತಮ್ಮ ತಂದೆಯರನ್ನೇ ಮೀರಿಸುವ ಕಾರ್ಯ ವನ್ನು ಯಾರಿಗೂ ಗೊತ್ತಿಲ್ಲದೇ ಮಾಡಿದ್ದಾರೆ.
ಅದೇನಪ್ಪಾ ಅಂತ ನಿಮಗೆ ಅಚ್ಚರಿ ಇರಬಹುದು.
ಫ್ಯಾಕ್ಟರಿ ಯಲ್ಲಿ ಏನೋ ಚಿಲ್ಲರೆ ಕೆಲಸ ಮಾಡುವುದರ ಬಗ್ಗೆ ಪಾಕೇಟ್ ಮನಿಯಾಗಿ ಕೊಟ್ಟ ಹಣವನ್ನು ಸೇವ್ ಮಾಡಿ ಇಡುತ್ತಾ ಬಂದಿದ್ದರು.ನೋಡಿದಾಗ ಅದು ಸುಮಾರು ಏಳು ಲಕ್ಷ ತಲುಪಿತ್ತು.ಇಂಟರೆಸ್ಟ್ ವಿಷಯ ಏನೆಂದರೆ ಆ ಇಬ್ಬರು ಸಹೋದರರ ಮಕ್ಕಳಾದ ಸಹೋದರರು ಆ ಹಣವನ್ನು ಏನು ಮಾಡಿದರು ಎನ್ನುವುದಾಗಿದೆ.
ಆಸರೆಯಾಗಿ ಯಾರೂ ಇಲ್ಲದ,ದೈಹಿಕವಾಗಿ ಅಸಮರ್ಥ ರೂ ಆದ ಬಡ ಕುಟುಂಬಕ್ಕೆ ಒಂದು ಸುಂದರವಾದ ಮನೆಯನ್ನು ಕಟ್ಟಿ ಕೊಟ್ಟಿದ್ದಾರೆ.ಇದು ಶ್ರೀಮಂತ ರಿಗೂ ಅವರ ಮಕ್ಕಳಿಗೂ ಮಾದರಿಯಗುವ ಕಾರ್ಯ ವಾಗಿದೆ.ಅವರು ಬೇರೆ ಯಾರೂ ಅಲ್ಲ ಡೆಕ್ಕನ್ ಪ್ಲಾಸ್ಟಿಕ್ ಸಂಸ್ಥೆ ಯ ಮಾಲಕರಾದ ಅಸ್ಗರ್ ಬಾಯಿ ಮತ್ತು ಬಶೀರ್ ಬಾಯಿ ರವರ ಅನುಗ್ರಹಿತ ಮಕ್ಕಳು.ಅವ್ಸಾಫ್ ಹುಸೈನ್ ಮತ್ತು ಬಾಸಿತ್ ಹುಸೈನ್.ಅಲ್ಲಾಹನು ಅವರಿಗೆ ಸಕಲ ಸಮೃದ್ಧಿ ಸೌಭಾಗ್ಯ ದ ಬಾಗಿಲನ್ನು ತೆರೆಯಲಿ ಅವರ ಹೆತ್ತವರು ಮಕ್ಕಳ ಬಗ್ಗೆ ಕಣ್ತುಂಬ ಸಂತೋಷ ಪಡಲು ಸರ್ವ ಶಕ್ತ ನಾದ ಅಲ್ಲಾಹನು ಅನುಗ್ರಹಿಸಲಿ ಆಮೀನ್.
ಯು ಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.