ಪ್ರವಾದಿ ನಬಿ ಮುಹಮ್ಮದ್ ಮುಸ್ತಫಾ(ಸ.ಅ)ರು ಜನಾಂಗೀಯ ತಾರತಮ್ಯ ವಿರೋಧಿಸಿ, ಧ್ವನಿ ಎತ್ತಿದ ಪ್ರಸಂಗ…!
(www.vknews.com) : ಬಿಲಾಲ್ ಎಲ್ಲಿದ್ದಾರೆ!? ಪವಿತ್ರ ಕಾಬಾದ ಶುಚೀಕರಣ ಮುಗಿದ ಕೂಡಲೇ ಪುಣ್ಯ ನೆಬಿಯವರು ಕೇಳುತ್ತಾರೆ ಹೌದು ಎಲ್ಲರೂ ಬಿಲಾಲ್ ಕಡೆ ನೋಡುತ್ತಾರೆ. ನೀಗ್ರೋ ವಂಶದ ಕರ್ರಗಿನ ಕಪ್ಪಾದ ಗುಂಗುರು ಕೂದಲಿನ ಸ್ವಹಾಬಿಯಾದ ಬಿಲಾಲ್ (ರ) ಅತ್ಯಂತ ವಿನಯಾನ್ವಿತರಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮುಂದೆ ಬಂದು ನಿಲ್ಲುತ್ತಾರೆ. ಕೂಡಲೇ ಪುಣ್ಯ ರಸೂಲರ ಆಜ್ಞೆ ಬರುತ್ತದೆ. “ಓ ಬಿಲಾಲ್ ಪವಿತ್ರ ಕಾಬಾದ ಮೇಲೆ ಹತ್ತಿ ತಾವು ಅಝಾನ್ ಕೊಡಬೇಕು!” ಬಿಲಾಲ್ (ರ) ಸ್ವಲ್ಪ ಹಿಂಜರಿಕೆ ಪ್ರಕಟಿಸಿದರೂ ಪ್ರವಾದಿಯವರ ಆಜ್ಞೆ ತಾನೆ,ಅನುಸರಿಸಲೇ ಬೇಕು.ಬಿಲಾಲ್(ರ) ಅಝಾನ್ ಕೊಡಲು ಸಿದ್ಧರಾದರು. ಸುಮಾರು ಹತ್ತು ಸಾವಿರ ಸಹಾಬಿಗಳು ಈ ಸುಂದರ ಮಹೂರ್ತವನ್ನು ಅಸ್ವಾದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆವಾಗಲೇ ಯಾರೋ ಒಂದಿಬ್ಬರು, ” ಪವಿತ್ರ ಕಾಬಾದ ಮೇಲೆ ಹತ್ತಿ ಅಝಾನ್ ಕೊಡಲು ಈ ಕಪ್ಪಗಿನ ಯುವಕನಲ್ಲದೆ ಬೇರೆ ಯಾರೂ ನೆಬಿಯವರಿಗೆ ಸಿಗಲಿಲ್ಲವೇ!?” ಆ ಅಪಸ್ವರ ನೆಬಿಯವರು ಕೇಳುತ್ತಾರೆ. ಇದನ್ನು ಆಲಿಸಿದ ನೆಬಿಯವರು,ವರ್ಣಭೇದದ ಬೇರನ್ನೇ ಕಿತ್ತೆಸೆಯುವ ರೀತಿಯಲ್ಲಿ ತಾಕೀತು ನೀಡುತ್ತಾರೆ,(ಹದೀಸ್)… “ಅರಬರಿಗೆ ಅರಬರು ಅಲ್ಲದವರಿಗಿಂತ ಮಹತ್ವ ಇಲ್ಲ,ಕಪ್ಪಗಿನ ಮನುಷ್ಯನಿಗಿಂತ ಬಿಳಿ ಮನುಷ್ಯನಿಗೆ ಮೇಲ್ಮೈ ಇಲ್ಲ.ಬಿಳಿಯನಿಗಿಂತ ಕರಿಯನಿಗೂ ಮಹಾತ್ಮೆ ಇಲ್ಲ” (ವರ್ಣ,ವಂಶ ಬೇಧವಿಲ್ಲದೆ ಎಲ್ಲರೂ ಸಮಾನರು!) ಪುಣ್ಯ ಪ್ರವಾದಿಯವರ ಈ ಸಂದೇಶ ವರ್ಣಭೇದದ ಬೇರನ್ನೇ ಕಿತ್ತೆಸೆಯುವಷ್ಟು ಗಟ್ಟಿಯಾಗಿತ್ತು!
ಮತ್ತೊಂದು ಘಟನೆ ಗಮನಿಸಿ, ಅಬೂದರ್ರ್ ಗಿಫಾರಿ ಮತ್ತು ಬಿಲಾಲ್ (ರ) ರವರ ಮದ್ಯೆ ಸಣ್ಣ ವೈಮನಸ್ಸುಂಟಾಯಿತು ಮಾತಿನ ಮದ್ಯೆ ಅಬೂದರ್ರ್ (ರ) ಬಿಲಾಲ್ (ರ) ರವರನ್ನು ಕಪ್ಪು ಚರ್ಮದ ಹೆಣ್ಣಿಗೆ ಹುಟ್ಟಿದವರೆಂಬ ರೀತಿಯಲ್ಲಿ ಸಂಭೋಧಿಸಿದರು.ಇದರಿಂದ ಬಿಲಾಲ್ ರವರ ಮನಸ್ಸಿಗೆ ನೋವಾಯಿತು.ಈ ವಿಷಯ ಹೇಗೋ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ತಲುಪಿತು.ಕೂಡಲೇ ಅಬೂದರ್ರ್ (ರ) ರವರನ್ನು ತನ್ನ ಬಳಿ ಕರೆಸಿಕೊಂಡ ಪ್ರವಾದಿಯವರು ಗಂಭೀರವಾಗಿ ಕೇಳಿದರು,(ಹದೀಸ್)… “ಓ,ಅಭೂದರ್ರ್,ತಮ್ಮ ಮನಸ್ಸಿನಲ್ಲಿ ಜಾಹಿಲಿಯ್ಯ ಕಾಲದ ವರ್ಣಭೇದದ ಅಂಶ ಈಗಲೂ ಬಾಕಿ ಇದೆಯಾ!?” ಅನಿರೀಕ್ಷಿತವಾಗಿ ತೂರಿ ಬಂದ ಪ್ರವಾದಿಯವರ ಈ ಪ್ರಶ್ನೆಗೆ ಉತ್ತರಿಸಲು ಸಾದ್ಯವಾಗದೆ ಅಬೂದರ್ರ್ ತಬ್ಬಿಬ್ಬಾದರು. ಕೂಡಲೇ ಅಬೂದರ್ರ್ (ರ) ಬಿಲಾಲ್ (ರ) ರವರ ಕ್ಷಮಾಪಣೆ ಕೇಳಿದರು! ವರ್ಣಬೇಧದ ಸಣ್ಣ ಅಂಶ ಮನಸ್ಸಲ್ಲಿಟ್ಟು ನಡೆಯುವವರೆಗೂ, ಮುತ್ತು ನೆಬಿಯವರ ಆ ಮಾತು ಗಂಭೀರ ತಾಕೀತಾಗಿತ್ತು! ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಇಂತಹ ಮಾದರಿಯುತ ನಡೆತೆಯಿಂದಾಗಿ ಅಲ್ಲಲ್ಲಿ ಇದ್ದಂತಹ ವರ್ಣಭೇದ ಸಂಸ್ಕೃತಿಯನ್ನು ತೊಡೆದು ಹಾಕಲು ಸಾದ್ಯವಾಯಿತು. ಹಾಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸಹ 1893ರಲ್ಲಿ ಜನಾಂಗೀಯ ತಾರತಮ್ಯದಿಂದಾಗಿ ರೈಲಿನಿಂದ ಹೊರದಬ್ಬಲ್ಪಟ್ಟಿದ್ದರು. ಇದು ಗಾಂಧಿಜಿಯವರಿಗೆ ಜನಾಂಗಿಯದ ವಿರುದ್ದದ ಹೋರಾಟಕ್ಕೆ ಪ್ರೇರಣೆ ಕೊಟ್ಟಂತಾಯಿತು. ಹಾಗೆ ಇದು ಗಾಂಧೀಜಿಯವರ ಮೊದಲ ಸಮರವಾಗಿತ್ತು.
ಅದೆಷ್ಟೋ ವರ್ಷಗಳಿಂದ ಅಮೇರಿಕಾ ಹಾಗೂ ಆಫ್ರೀಕಾದಂತಹ ಹಲವು ರಾಷ್ಟ್ರಗಳು ಕಪ್ಪು ವರ್ಗದವರೊಂದಿಗೆ ಇಂತಹ ತಾರತಮ್ಯ ಅನುಸರಿಸುತ್ತಾ ಬರುತ್ತಿದ್ದು,ಈಗಲೂ ಮುಂದುವರೆಸುತ್ತಿದ್ದಾರೆ ಇತ್ತೀಚೆಗೆ ಅಮೇರಿಕಾದ ಪೊಲೀಸ್ ಒಬ್ಬಾತ ಕಪ್ಪು ವಂಶಜನ ಕತ್ತಿನ ಮೇಲೆ ಮೊಣಕಾಲೂರಿ ಉಸಿರುಗಟ್ಟಿಸಿ ಕೊಂದದ್ದು ತಾಜಾ ಉದಾಹರಣೆಯಾಗಿದೆ.
ಜಗತ್ಪ್ರಸಿದ್ಧ ಬಾಕ್ಸಿಂಗ್ ಪಟು ಮುಹಮ್ಮದಾಲಿಯವರ ಇಸ್ಲಾಂ ಧರ್ಮ ಸ್ವೀಕರಣೆಯು ಸಹ ಇದೇ ತಾರತಮ್ಯದ ಕಾರಣದಿಂದಾಗಿತ್ತು. ವರ್ಣಭೇದದ ಬುಡವನ್ನೇ ಕಿತ್ತೆಸೆದು ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿದ ಇಸ್ಲಾಂ, ಇತರ ಧರ್ಮಗಳಿಂದ ವ್ಯತಿರಿಕ್ತವಾಗಿ ಎಲ್ಲರನ್ನು ಆಕರ್ಷಿಸಲು ಇರುವ ಕಾರಣಗಳಲ್ಲಿ ಒಂದಾಗಿದೆ. ಇಸ್ಲಾಮಿನಲ್ಲಿ ವರ್ಣಬೇಧ ಅತೀತವಾಗಿ ಹೃದಯಶುದ್ದಿ ಮತ್ತು ತಖ್ವಾಗೆ ಮಹತ್ತರ ಸ್ಥಾನವಿದೆ. ಹಾಗಾಗಿಯೇ ಇಸ್ಲಾಮಿನ ಮೊಟ್ಟಮೊದಲ ಮುಅಝ್ಝಿನ್ ನೀಗ್ರೋ ವಂಶದ ಬಿಲಾಲ್ (ರ) ಆಗಿದ್ದಾರೆ. ಪವಿತ್ರ ಕುರ್’ಆನಿನಲ್ಲಿ ಸೂರತ್ ಲುಕ್’ಮಾನ್ ಎಂಬ ಅಧ್ಯಾಯದ ಲುಕ್’ಮಾನುಲ್ ಹಕೀಮ್ (ರ) ಕೂಡಾ ಕಪ್ಪು ವಂಶಜನಾಗಿದ್ದರು!. ಪ್ರವಾದಿಯವರು ಬಳಸಿದ ನುಡಿಮುತ್ತಿಗೆ ವರ್ಣಭೇದ ಅಳಿಸುವ ತಾಕತ್ತಿತ್ತು.ಇಸ್ಲಾಂನ ನಮಾಜ಼್ ಪದ್ಧತಿಯು ವರ್ಣಭೇದ ಹಾಗೂ ಬಡವ, ಕುಬೇರ ಎಂಬ ಭಾವನೆಯನ್ನು ನೀಗಿಸುವ ಬಹು ದೊಡ್ಡ ಉದಾಹರಣೆಯಾಗಿದೆ.
ಕೊಡಗು ಜಿಸಿಸಿ ಎಸ್.ಕೆ.ಎಸ್.ಎಸ್.ಎಫ್
– ಬಶೀರ್, ಚೇರಂಭಾಣೆ
ಇಂತಹ ವರ್ಣಭೇದ ಹಾಗೂ ಜನಾಂಗೀಯ ನಿಂದನೆ ಎಂಬ ಪಿಡುಗನ್ನು ವಿರೋಧಿಸುವುದಾಗಿಯೂ ಇಂತಹ ಸಾಮಾಜಿಕ ಪಿಡುಗನ್ನು ಜನಸಾಮಾನ್ಯರ ಹೃದಯದಿಂದ ಕಿತ್ತೆಸೆಯಬೇಕೆಂದು ಮನವಿ ಮಾಡುತ್ತೇವೆ. ಹಾಗೆ ಸರ್ಕಾರಗಳು ಜನಾಂಗೀಯ ನಿಂದನೆ ಹಾಗೂ ವರ್ಣಭೇದವನ್ನು ತೊಲಗಿಸಲು ಸಕರಾತ್ಮಕವಾದ ಕಾನೂನನ್ನು ಜಾರಿಗೊಳಿಸಬೇಕಾಗಿದೆ..
✍ ಬಶೀರ್, ಚೇರಂಭಾಣೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.