ಕಾಪು (www.vknews.com) : ಕಾಪು ತಾಲೂಕು, ಮಲ್ಲಾರ್ ಗ್ರಾಮದ ಕೊಂಬಗುಡ್ಡೆ ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ನಲ್ಲಿ ಲಾಕ್ ಡೌನ್ ವಿಧಿಸಿದ ಹನ್ನೊಂದು ಶುಕ್ರವಾರ ದ ಬಳಿಕ, ಸರಕಾರದ ಮತ್ತು ಉಲೇಮಾಗಳ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಇಂದು ಜುಮಾ ನಮಾಜ್ ಗಾಗಿ ಮಸ್ಜಿದ್ ತೆರೆಯಲಾಯಿತು.
ಮುಸಲ್ಲಿಗಳಿಗೆ ತಿಳಿಸಿದ ಪ್ರಕಾರ ಮನೆಯಿಂದಲೇ ಅಂಗಾಸ್ನಾನ ಮಾಡಿ, ಮುಖ ಗವಸುಗಳನ್ನು ಧರಿಸಿ , ನಮಾಜ್ ನ ಚಾಪೆಯೊಂದಿಗೆ ಬಂದರು. ಬಂದವರನ್ನು ಸ್ಯಾನಿಟಿರೈಸರ್ ನಿಂದ ಕೈ ತೊಳೆಸಿ , ಉಷ್ಣಾಂಶ ಪರೀಕ್ಷಿಸಿ ಒಳಗೆ ಬಿಡಲಾಯಿತು. ಜುಮಾ ಖುತ್ಬಾ ಗಿಂದ ಮೊದಲು ಎಲ್ಲಾ ಮುಸಲ್ಲಿ ಗಳು ಹಾಜರಿದ್ದರು. ಖುತ್ಬಾ ಪ್ರಾರಂಭ ಆಗುವಾಗ ಮುಖ್ಯ ದ್ವಾರ ಮುಚ್ಚಲಾಯಿತು.
ಧರ್ಮ ಗುರುಗಳಾದ ಮೌಲಾನಾ ಪರ್ವೇಜ್ ಆಲಂ ನದ್ವಿ ಯವರು ಖುತ್ಬಾ ಗಿಂತ ಮೊದಲು , ಮಸೀದಿಗೆ ಬರುವಾಗ ಮತ್ತು ನಮಾಜ್ ನಿರ್ವಹಿಸಿದ ನಂತರ ಏನೇನು ಮಾಡಬೇಕು ಎಂದು ಸಲಹೆ ಸೂಚನೆ ನೀಡಿದರು. ದೇವರು ನಮಗೆ ಒದಗಿಸಿದ ಅವಕಾಶವನ್ನು ನಾವು ಉತ್ತಮ ರೀತಿಯಿಂದ ಬಳಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷರಾದ ಶಬಿಹ್ ಅಹಮದ್ ಕಾಝಿಯವರು, ದಿನದಿಂದ ದಿನಕ್ಕೆ ಕೊರೊನ ವೈರಸ್ ಹೆಚ್ಚುತ್ತಿದ್ದು , ನಾವು ಈ ಬಗ್ಗೆ ಗರಿಷ್ಠ ಎಚ್ಚರಿಕೆ ವಹಿಸಬೇಕೆಂದು ವಿನಂತಿಸಿದರು.
ಜುಮಾ ನಮಾಜ್ ನಿರ್ವಹಿಸಿದ ನಂತರ ಮನಸ್ಸು ಪ್ರಫುಲ್ಲ ಆಯಿತು, ಅಲ್ಲಾಹನ ಅನುಗ್ರಹ ನಮಗೊದಗಿತು ಎಂದು ಮುಸಲ್ಲಿ ಗಳು ಉದ್ಗರಿಸಿದರು. ಉಪಾಧ್ಯಕ್ಷ ಅಷ್ಪಾಕ್ ಅಬ್ದುಲ್ ಅಲಿ , ಪ್ರಧಾನ ಕಾರ್ಯದರ್ಶಿ ಅನ್ವರ್ ಅಲಿ ಕಾಪು , ಕೋಶಾಧಿಕಾರಿ ಮುಹಮ್ಮದ್ ಇಕ್ಬಾಲ್ ಸಾಹೇಬ್ , ಸ. ಸದಸ್ಯ ಆಸೀಫ್ ಶೇಖ್ ರವರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.