(www.vknews.com) : ಸುಮಾರು 20 ವರ್ಷಗಳ ಹಿಂದೆ ಕೊಡಗಿನ ಅನಿವಾಸಿ ಭಾರತೀಯರು ಯು.ಎ ಇ ಯಲ್ಲಿ ತನ್ನ ಕುಟುಂಬದ ಸದಸ್ಯರ ಜವಾಬ್ದಾರಿ ಯನ್ನು ಹೆಗಲ ಮೇಲೆ ಏರಿಸಿಕೊಂಡು ಪ್ರವಾಸಿ ಜೀವನ ಸಾಗುತ್ತಿರುವ ಸಂದರ್ಭದಲ್ಲಿ ಹಲವಾರು ಕೊಡಗಿನ ಯುವ ಜನಾಂಗ ಮತ್ತು ಸುನ್ನತ್ ಜಮಾಯತಿನ ಪಂಡಿತರು ಹಾಗೂ ಹಿರಿಯ ನಾಯಕರು ಗಳು ಸೇರಿ ಕೊಡಗು ಜಿಲ್ಲೆಯ ಬಡ ಕುಟುಂಬದ ಸದಸ್ಯರಿಗೆ ಬೇಕಾದ ರೀತಿಯಲ್ಲಿ ತಮ್ಮ ಕೈಯಲ್ಲಿ ಆಗುವ ಸಹಾಯ ಹಸ್ತವನ್ನು ನೀಡಲು ಒಂದು ವೇದಿಕೆ ಯನ್ನು ಹುಟ್ಟು ಹಾಕಿದರು ಅದುವೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್.
ಇದರ ಅಧೀನದಲ್ಲಿ ಇದುವರೆಗೆ ಹಲವಾರು ರೀತಿಯ ಬಡ ಕುಟುಂಬದ ಕಣ್ಣೀರನ್ನು ಒರೆಸಲು ಸಾಧ್ಯವಾಗಿದೆ ಅಲ್ಲ್ ಹಂದುಲಿಲ್ಲಾ, ಕಳೆದ ವರುಷ ಅಂದರೆ 2018.19.ರಲ್ಲಿ ಮಹರ್ ಕಾರ್ಯಕ್ರಮ ನಿರೂಪಿಸಿ ಅದರ ಮೂಲಕ 6 ಜೋಡಿ ಬಡ ಹೆಣ್ಣು ಮಕ್ಕಳ ಮದುವೆ ನಿಕಹ್ ನೆರೆವೇರಿಸಿದರು. ತದನಂತರ ಆ ಒಂದು ಸಂಘಟನೆಯ ನಾಯಕರು ಹಗಲು ಹೀರುಳು ಎನ್ನದೆ ಶ್ರಮ ಪಟ್ಟು ಇ ವರುಷವು ಸಹ 7 ಏಳು ಜೋಡಿ ಬಡ ಹೆಣ್ಣು ಮಕ್ಕಳ ಕಣ್ಣೀರನ್ನು ಒರೆಸಿ ಮದುವೆ ನಿಕಹ್ ಮಾಡಿಕೊಡುವಲ್ಲಿ ಸಫಲರಾದರು. ಹಲ್ಲ್ ಹಂದುಲಿಲ್ಲಾ ಅದು ಅಲ್ಲದೆ ಕೊಡಗಿನ ಬಡ ರೋಗಿಗಳಿಗೆ ಉಚಿತವಾಗಿ (ನಿಯಮಾದ ಅಡಿಯಲ್ಲಿ) ಆಂಬುಲೆನ್ಸ್ ವ್ಯವಸ್ಥೆ ಯನ್ನು ಕೊಡಗಿಗೆ ನೀಡಲಾಗಿದೆ ಮತ್ತು ಸಂಘಟನೆಯ ಪ್ರದಾನ ಕಚೇರಿ ನಾಪೋಕ್ಲುವಿನಲ್ಲಿ ಕಾರ್ಯಚರಿಸುತ್ತಿದೆ ಹಾಗೂ ವಿದ್ಯಾಭ್ಯಾಸ ದಲ್ಲಿ ಮುಂದುವರಿಯುವ ವಿದ್ಯಾವಂತ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಹಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯ ನೀಡುತ್ತಾ ಬಂದಿದ್ದಾರೆ ಹಾಗೂ ಹಲವಾರು ರೀತಿಯಲ್ಲಿ ಅಂದರೆ ಪ್ರಕ್ರತಿ ವಿಕೋಪದ ಸಮಯದಲ್ಲೂ ಸಹ ತಮ್ಮ ಯು. ಎ. ಇ ಘಟಕವು ಮುಂದೆ ಬಂದು ಸಹಾಯ ಹಸ್ತವನ್ನು ನೀಡಿರುತ್ತಾರೆ.
20 ನೆ ವರುಷ ಆಚರಣೆ ಸಂಬಂಧಿಸಿದಂತೆ 20 ವಿವಿಧ ಬಗೆಯ ಕಾರುಣ್ಯ ಸೇವೆಗೆ ಅಂತಿಮವಾಗಿ ಸಭೆ ಸೇರಿ ನಿರ್ಣಾಯಕ ವಾದ ತೀರ್ಮಾನವನ್ನು ಕೈ ಗೊಳ್ಳಲಿರುವುದು ಆಗಿ ತಿಳಿಯಲಾಯಿತು. ಇನ್ನು ಮುಂದಕ್ಕೂ ನಿಮ್ಮ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ. ಇ ಸಂಘಟನೆಯ ಪಂಡಿತ ಉಲಮ ಉಮಾರಕಳಿಗೂ ಬಡ ಕುಟುಂಬದ ಸೇವೆ ಮಾಡಲು ತೌಫಿಕ್ ನೀಡಿ ಅನುಗ್ರಹಿಸಲಿ ಆಮೀನ್.
ಯು. ಎ. ಇ. ಯಲ್ಲಿ ಹುಟ್ಟು ಹಾಕಿ ಇದೀಗ 5 ಗಲ್ಫ್ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಸಮಿತಿ ರಚನೆ ಗೊಂಡು ಅಂತಾರಾಷ್ಟ್ರೀಯ ಸಮಿತಿಯು ರಚನೆಗೊಂಡು ಕಾರ್ಯಾಚರಿಸುತ್ತಿದೆ. ಉಳಿದ ಗಲ್ಫ್ ರಾಷ್ಟ್ರಗಳ ಘಟಕವು ಯು.ಎ. ಇ. ಯ ಕಾರ್ಯವ್ಯಕಿರಿಯನ್ನು ಮನಗಂಡು ಅವರ ಒಂದು ಶ್ರಮದoತೆ ನಾವುಗಳು ಸಹ ಶ್ರಮ ವಹಿಸಿ ಸಂಘಟನೆಯನ್ನು ಬೆಳೆಸಲು ಎಲ್ಲರೂ ಜೋಡಿಸಿ ಸಹಕರಿಸಿ
✒️ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಾಷ್ಟ್ರೀಯ ಸಮಿತಿ ಕುವೈತ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.