ಕೋಲಾರ (www.vknews.com) : ತೆಲುಗು ಚಿತ್ರನಟ ನಂದಮೂರಿ ಬಾಲಕೃಷ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನಗರದ ಸಾಯಿಡಿಜಿಟಲ್ ಸಂಸ್ಥೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಿಸಿದರಲ್ಲದೇ ಮಾಸ್ಕ್ಗಳನ್ನು ವಿತರಿಸಲಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳ ಮುಖಂಡ ಬಾಲಾಜಿ, ಕಲೆಗೆ ಭಾಷೆ, ಜಾತಿ,ಧರ್ಮದ ಅಡ್ಡಿಯಿಲ್ಲ, ನಾವೆಲ್ಲಾ ಕನ್ನಡಿಗರು ಆದರೆ ಕಲೆ ವಿಷಯದಲ್ಲಿ ಮೊದಲಿನಿಂದಲೂ ಬಾಲಕೃಷ್ಣ ಅವರ ಪೌರಾಣಿಕ ಹಾಗೂ ಐತಿಹಾಸಿಕ,ಸಾಮಾಜಿಕ ಪಾತ್ರಗಳನ್ನು ಮೆಚ್ಚಿ ಅವರ ಅಭಿಮಾನಿಗಳಾಗಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿದ್ದಲ್ಲದೇ ಬಾಲಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಮಾಸ್ಕ್ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ವೆಂಕಟೇಶಬಾಬಾ, ನಗರಸಭೆ ಮಾಜಿ ಸದಸ್ಯ ರೌತ್ ಶಂಕರಪ್ಪ, ಮುನಿವೆಂಕಟಯಾದವ್, ಮಂಜು, ಆಂಜಿ, ಬುಜ್ಜಿ, ಕೃಷ್ಣಮೂರ್ತಿ,ಮಹೇಶ್ಕುಮಾರ್, ಸಾಯಿಕುಮಾರ್, ಸಾಹಿಸುಮನ್, ಸಾಹಿಮೌಳಿ, ಪೃಥ್ವಿ ಮತ್ತಿತರರಿದ್ದರು.
ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.