ಬೆಂಗಳೂರು (www.vknews.com) ; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಗಳು ಐಶ್ವರ್ಯ ಮತ್ತು ಸಿದ್ದಾರ್ಥ್ ಹೆಗಡೆ ಪುತ್ರ, ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗ ಅಮರ್ತ್ಯ ಹೆಗಡೆ ಮದುವೆಯ ತಾಂಬೂಲ ಶಾಸ್ತ್ರ ಇಂದು ನೆರವೇರಿತು.
ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಎರಡೂ ಕುಟುಂಬಗಳು ಇಂದು ನಿಶ್ಚಿತಾರ್ಥ ಮೊದಲ ತಾಂಬೂಲ ಶಾಸ್ತ್ರ ಕಾರ್ಯ ನೆರವೇರಿಸಿದ್ದು, ಐಶ್ವರ್ಯ ಮತ್ತು ಅಮರ್ತ್ಯ ಹೆಗಡೆ ಪರಸ್ಪರ ಹಾರ ಬದಲಾಯಿಸಿಕೊಂಡರು
ಡಿಕೆ ಶಿವಕುಮಾರ್ ನಿವಾಸದ ಒಳಗಿನ ಸಮಾರಂಭದ ವಿಡಿಯೋ ವೈರಲ್ ಆಗಿದ್ದು, ಒಳಗಡೆ ನಡೆದಿದ್ದು ನಿಶ್ಚಿತಾರ್ಥವಲ್ಲ ಎಂಬ ಅಧಿಕೃತ ಮಾಹಿತಿ ಲಭಿಸಿದ್ದು, ತಾಂಬೂಲ ಶಾಸ್ತ್ರ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ವಿಡಿಯೋ ಹಾಗೂ ಚಿತ್ರಗಳು ಸ್ಪಷ್ಟವಾಗಿ ನಿಶ್ಚಿತಾರ್ಥ ನೆರವೇರಿದ್ದಕ್ಕೆ ಸಾಕ್ಷಿಯಾಗಿದ್ದು ಅದು ತಾಂಬೂಲ ಶಾಸ್ತ್ರ ಎಂದು ಮೂಲಗಳು ತಿಳಿಸಿವೆ. ಒಳ್ಳೆ ದಿನ ನೋಡಿ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.