ಮಂಗಳೂರು (www.vknews.com) : ಬ್ಲಡ್ ಡೋನರ್ಸ್ ಮಂಗಳೂರು ರಿ ಇದರ ವತಿಯಿಂದ ಬಡ ಕುಟುಂಬಕ್ಕೆ ಮುಡಿಪುವಿನಲ್ಲಿ ನಿರ್ಮಿಸಲಾಗಿದ್ದ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವು ಇವತ್ತು 11.30 ಗೆ ಸರಿಯಾಗಿ ಮುಡಿಪುವಿನಲ್ಲಿ ಜರಗಿತು.
ಮುಡಿಪು ಸಮೀಪ ಮನೆಯಿಲ್ಲದ ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದಾಗಿ ತಂಡವು ಈ ಮೊದಲು ತೀರ್ಮಾನಿಸಲಾಗಿತ್ತು. ತೀರ್ಮಾನದಂತೆ ಕೈಗೊಂಡ ಈ ಕಾರ್ಯಕ್ರಮವು ಇವತ್ತು ಯಶಸ್ವಿಯಾಗಿ ಪೂರ್ಣಗೊಂಡಿತು.
ಆಸಿಫ್ ಸಖಾಪಿ ಅಲ್ ಅಝ್ಹರಿ, ಗೌಸಿಯಾ ಜುಮಾ ಮಸೀದಿ ಮುಡಿಪು. ಇವರು ದುಃಆದೊಂದಿಗೆ ಉದ್ಘಾಟಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ರಿ ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಬ್ದುಲ್ಲಾ ಬವಾನಿ ಗ್ರಾನೈಟ್ ಕಲ್ಲಾಪು, ಅಸ್ಗರ್ ಮುಡಿಪು ನ್ಯಾಯವಾದಿ, ಬಶೀರ್ ಮುಡಿಸು ಗ್ರಾಮ ಪಂಚಾಯತ್ ಸದಸ್ಯರು ಮುಡಿಪು, ಖಲಂದರ್ ಹಾಜಿ ಯುವ ಉದ್ಯಮಿ, ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ರಿ ತಂಡದ ಪದಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕರು ಭಾಗವಹಿಸಿದ್ದರು.
ಮನೆಯ ಕೀಲಿ ಕೈಯನ್ನು ಬ್ಲಡ್ ಡೋನರ್ಸ್ ಮಂಗಳೂರು ರಿ ಇದರ ಮಹಿಳಾ ವಿಭಾಗದ ಅಧ್ಯಕ್ಷೆ ಆಯಿಷಾ ಉಳ್ಳಾಲ, ಸೆಕ್ರೆಟರಿ ಮುಫಿದಾ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ರಿ ಇದರ ಸದಸ್ಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.