(www.vknews.com) : ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಬೆಂಗಳೂರು ನಗರ ಚಾಲಕರ ಒಕ್ಕೂಟದ ವತಿಯಿಂದ ಮಾರತ್ ಹಳ್ಳಿ ಮುನೇಕೊಳಲು ನಗರದ ಬಸ್ ನಿಲ್ದಾಣದಲ್ಲಿ VKF ಬೆಂಗಳೂರು ನಗರ ಘಟಕದ ಉದ್ಘಾಟನೆ, ವಿಶ್ವರಕ್ತದಾನಿಗಳ ದಿನಾಚರಣೆ, ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುನೇಕೊಳಲು ಭಾಗದ ಸಮಾಜ ಸೇವಕರು, ಯುವ ಮುಖಂಡರಾದ ಶ್ರೀಶಶಿಧರ್ ರೆಡ್ಡಿ ರವರು ಮಾತನಾಡುತ್ತಾ “”ರಕ್ತದಾನ ಬಹಳ ಪವಿತ್ರದಾನಗಳಲ್ಲಿ ಮಹತ್ತರವಾದದ್ದು, ನೀವು ನೀಡುವ ಒಂದು ಯೂನಿಟ್ ರಕ್ತ ಮೂರು ಜೀವಗಳಿಗೆ ಸಂಜಿವೀನಿ ಎಲ್ಲಾರೂ ರಕ್ತದಾನ ಮಾಡಿ ಜೀವ ಉಳಿಸಿ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ 149 ನೇ ವಾರ್ಡ್ ನ ಸದಸ್ಯರಾದ ಶ್ರೀಮತಿ ಪುಷ್ಪ ಮಂಜುನಾಥ್ ರವರು ಮಾತನಾಡುತ್ತಾ “ರಕ್ತದಾನ ಮಾಡಲು ಜಾತಿ, ಧರ್ಮ, ಭಾಷೆ, ಶ್ರೀಮಂತ-ಬಡವ ಎಂಬ ಭೇದವಿಲ್ಲದೇ ಜೀವ ಉಳಿಸುವ ಕಾರ್ಯಕ್ಕೆ ಪ್ರತಿಯೋಬ್ಬರು ಸ್ಪಂದಿಸಿ, ರಕ್ತದ ಅವಶ್ಯಕತೆ ಇದ್ದಾಗ ರಕ್ತ ನೀಡಿದಾಗ ರೋಗಿ ಸದಾ ರಕ್ತದಾನಿಯನ್ನು ಅಮರವಾಗಿ ನೆನಪಿಸುತ್ತೆ ಎಂದರು.
ಕಾರ್ಯಕ್ರಮದ ಪ್ರಾಸ್ತವಿಕ ಮಾತುಗಳನ್ನು VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ ನಾಗರಾಜ್ ಮಾತನಾಡಿ “ರಾಜ್ಯದಲ್ಲಿ ಯಾವುದೇ ರೋಗಿಗೆ ಯಾವುದೇ ಆಸ್ಪತ್ರೆಗೆ ರಕ್ತದ ಅವಶ್ಯಕತೆ ಇದ್ದಾಗ ರಕ್ತದಾನಿಯನ್ನು ನೇರವಾಗಿ ಆಸ್ಪತ್ರೆಗೆ ಕಳುಹಿಸಿ ಜೀವ ಉಳಿಸುವ ಕೆಲಸವನ್ನು VKF ಮಾಡುತ್ತಿದೆ. ಹಾಗೂ ರಾಜ್ಯವ್ಯಾಪಿ 3786 ಜನರ ರೋಗಿಗಳ ಜೀವ ಉಳಿಸಿದ ಕೀರ್ತಿ ಯುವ ಉತ್ಸಾಹಿಗಳಿಗೆ ಸಲ್ಲುತ್ತದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ವರ್ತೂರು ಭಾಗದ ಅಧ್ಯಕ್ಷರಾದ ವೆಂಕಟೇಶ್ ಸರ್ ಮಾತನಾಡಿ “ವಿಶ್ವರಕ್ತದಾನಿಗಳ ದಿನದಲ್ಲಿ ಎಲ್ಲಾರೂ ರಕ್ತದಾನ ಮಾಡಿ ಜೀವ ಉಳಿಸಿ ಎಂದರು.
life care blood bank, jayanagara ರವರಿಗೆ ರಕ್ತವನ್ನು ನೀಡಲಾಯಿತು..
ಕಾರ್ಯಕ್ರಮದಲ್ಲಿ VKF ರಾಜ್ಯ ಚಾಲಕರ ಒಕ್ಕೂಟದ ಅಧ್ಯಕ್ಷ ಆದರ್ಶ. ಕೋಲಾರ ಜಿಲ್ಲಾ ಉಪಾಧ್ಯಕ್ಷ ಶಿವ.ಎಸ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಉಪ್ಪರಪಲ್ಲಿ ಹರೀಶ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಕಾರ್ತಿಕ್, ಉಪಾಧ್ಯಕ್ಷ ಶಶಿಕುಮಾರ್, ಸಂಚಾಲಕ ರಾಜು, ರಾಯಭಾರಿ ಮಂಜೇಶ್,ಸಹ ಕಾರ್ಯದರ್ಶಿ ಮುನಿರಾಜ್, ಪ್ರಧಾನ ಕಾರ್ಯದರ್ಶಿ ವಿಮಲ್, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಡಿ, ಕ್ರೀಡಾ ಕಾರ್ಯದರ್ಶಿ ಭರತ್ ಬಾಲಾಜಿ, ಗೋವಿಂದ ರಾಜು.ಕೆ ಖಜಾಂಜಿ, ಸುರೇಶ್ ಆರ್ ಸಹ ಕಾರ್ಯದರ್ಶಿ, ಸತ್ಯಸ್ವರ್ಣ ನಿರ್ದೇಶಕರು, ಇತರರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.