ಸಕಲೇಶಪುರ (www.vknews.com) : ತಾಲ್ಲೂಕಿನಲ್ಲಿ ನಿರಂತರವಾಗಿ ಕೊರೋನ ಸೊಂಕು ತಡೆಗಟ್ಟಲು ಹಗಲು ರಾತ್ರಿ ಎನ್ನದೆ ತಾಲ್ಲೂಕಿನ ಜವಾಬ್ದಾರಿಯಿಂದ ಸೇವೆ ಸಲ್ಲಿಸಿದ ಅದಿಕಾರಿಗಳಿಗೆ ಸೋಮವಾರ ವಿವಿಧ ಸಂಘಟನೆ ಯ ಪದಾಧಿಕಾರಿಗಳು ಅಭಿನಂದಿಸಿದರು.
ಉಪವಿಭಾಗಧಿಕಾರಿ ಗಿರೀಶ್ ನಂದನ್,ತಹಸೀಲ್ದಾರ್ ಮಂಜುನಾಥ್, ವೈದ್ಯಾಧಿಕಾರಿ ಮಹೇಶ ಸೇರಿದಂತೆ ಅನೇಕರನ್ನು ಅಭಿನಂದಿಸಿದರು. ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಬೆಳಗೋಡು ಬಸವರಾಜ್,ನವಜ್ಯೋತಿ ಆದಿವಾಸಿ ಬುಡಕಟ್ಟು ಅಲೇಮಾರಿ ಸೇವಾ ಸಂಸ್ಥೆ ಮತ್ತು ಆದಿವಾಸಿ ಹಸಲರು ಸಂಘದ ಜಿಲ್ಲಾದಕ್ಷ ನವೀನ್ ಸದಾ,ಅಖಿಲ ಬಾರತ ಕೈಸ್ತ ಮಹಾಸಬಾ ಜಿಲ್ಲಾದಕ್ಷ ಜಾನ್ ಹೆನ್ರಿ ಕಾಕನ ಮನೆ ಇನ್ನಿತರರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.