(www.vknews.com) : ದಿನಾಂಕ 14ರಂದು ಉಡುಪಿಯ ಲಿಗಾಡೊ ಹೋಟೆಲ್ ನಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಕುರಾನ್ ಪಠಣ ದೊಂದಿಗೆ ಆರಂಭವಾದ ಸಭೆಯನ್ನು ಜನಾಬ್ ಸುಭಾನ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಕಾರ್ಯದರ್ಶಿ ಶೌಕತ್ ಅಲಿ ಸ್ವಾಗತಿಸಿದರೆ, ಹಿರಿಯ ಉಪಾಧ್ಯಕ್ಷ ಜನಾಬ್ ಅಬೂಬಕ್ಕರ್ ಸಜೀಪಾ ಆಹಭಾರಮನ್ನಿಸಿದರು.
ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಜನಾಬ್ ಶಕೀಲ ಹಸನ್, ರಾಜ್ಯಾಧ್ಯಕ್ಷ ಜನಾಬ್ ನಸೀರ್ ಅಹಮ್ಮದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜನಾಬ್ ಶಾಹನವಾಜ ಮುಲ್ಲಾ ಹಾಗೂ ಅತಿಥಿಯಾಗಿ ಉಡುಪಿ ಜಿಲ್ಲಾ ವಕ್ಫ್ ಅಧ್ಯಕ್ಷರಾದ ಜನಾಬ್ ಇಬ್ರಾಹಿಂ, ಬೆಂಗಳೂರಿನ ಸಮಾಜ ಸೇವಕರಾದ ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ನಜೀರ್ ಮುಲ್ಲಾ, ಅಮ್ಜದ್ ತುಮಕೂರು, ದಾನಿಷ್ ಮಂಗಳೂರು ಇವರು ಸಂಘಟನೆಯ ಬಗ್ಗೆ ಅನಿಸಿಕೆಗಳನ್ನು ತಿಳಿಸಿದರು.
ಇದೆ ವೇಳೆ ಎರಡನೆಯ ಅವಧಿಗೆ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ರಾಷ್ಟ್ರ ಗೀತೆ ಯೊಂದಿಗೆ ಸಭೆಯು ಮುಕ್ತಾಯ ಗೊಂಡಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.