(www.vknews.com) : ಉಪ್ಪಿನಂಗಡಿ , ಪೆರಿಯಡ್ಕ , ಕೆಮ್ಮಾರ , ಕೊಯಿಲ ಆಸುಪಾಸಿನ ಪ್ರದೇಶದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ & ಅಧಿಕ ವಿದ್ಯುತ್ ಬಿಲ್ ಬಗ್ಗೆ AIMDF ಪುತ್ತೂರು ತಾಲೂಕು ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ ಕೆಮ್ಮಾರ ಇದರ ಸಂಯೋಗದೊಂದಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ನಿ ) ಇದರ ಉಪ್ಪಿನಂಗಡಿ ಶಾಖೆಗೆ ಮನವಿ ಮಾಡಲಾಯಿತು.
ಕೆಮ್ಮಾರ ಪರಿಸರದಲ್ಲಿ ಸುಮಾರು ನಾಲ್ಕೈದು ಟ್ರಾನ್ಸ್ಫಾರ್ಮರ್ಸ್ಗಳಿದ್ದು ಈ ಪ್ರದೇಶದಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು , ಮಳೆ ಬಂದರೆ ನಾಲ್ಕೈದು ದಿನಗಳವರೆಗೆ ಕಡಿತವಾಗುತ್ತದೆ ಅದೂ ಅಲ್ಲದೆ ಸ್ಥಳೀಯ ಮೆಸ್ಕಾಂ ಸಿಬ್ಬಂದಿಗಳು ದೂರು ನೀಡಿದರೂ ಸಮರ್ಪಕವಾಗಿ ಸ್ಪಂದನೆ ನೀಡುತ್ತಿಲ್ಲ ಹಾಗೂ ಈ ಬಾರಿ ಜನ ಲಾಕ್ ಡೌನ್ ನಿಂದ ತತ್ತರಿಸಿದ್ದರೂ ಗಾಯದ ಮೇಲೆ ಬರೆ ಹಾಕುವ ರೀತಿ ವಿದ್ಯುತ್ ಇಲಾಖೆ ದುಪ್ಪಟ್ಟು ವಿದ್ಯುತ್ ಬಿಲ್ ಕೊಡುತ್ತಿದೆ. ದುಡಿಮೆ ಇಲ್ಲದೆ ಕಂಗಾಲಾಗಿರುವ ಜನರಿಗೆ ಇದನ್ನು ಭರಿಸಲು ಸಾಧ್ಯವಿಲ್ಲ ಹಾಗಾಗಿ ಇದರ ಬಗ್ಗೆ ತನಿಖೆ ನಡೆಸಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಹೊಸ ವಿದ್ಯುತ್ ಬಿಲ್ ಹೊರಡಿಸುವಂತೆ ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಸಹಾಯಕ ಅಭಿಯಂತರರಾದ ರಾಜೇಶ್ ಅವರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ AIMDFಪುತ್ತೂರು ತಾಲೂಕು ಅದ್ಯಕ್ಷರಾದ ಅಝೀಝ್ ಬಿ.ಕೆ , ನೌಫಲ್ ಕೆಮ್ಮಾರ , ನಿಝಾಮ್ , ಅಬ್ದುಲ್ ಗಫ್ಫಾರ್ ಕೆಮ್ಮಾರ , ವಕೀಲರಾದ ಕಬೀರ್ ಕೆಮ್ಮಾರ ,ರವೂಫ್ ಬಡಿಲ, ಅಬೂ ತಾಹಿರ್ , ಹಕೀಮ್ ಕೆಮ್ಮಾರ , ಸನಾವುಲ್ಲಾ ಕೆ.ಪಿ ಹಾಗೂ ಖಲಂದರ್ ಎಸ್.ಪಿ ,ಭಾಷಿತ್ ಕೆಮ್ಮಾರ ಮುಂತಾದವರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.