ಈಶ್ವರಮಂಗಳ (www.vknews.com) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಸ್.ಡಿ.ಪಿ.ಐ ಈಶ್ವರಮಂಗಳ ವಲಯ ಸಮಿತಿ ವತಿಯಿಂದ ಈಶ್ವರಮಂಗಳದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಈಶ್ವರಮಂಗಳ ವಲಯಾಧ್ಯಕ್ಷರಾದ ಉಮರ್ ಪಿಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂಶುದ್ದೀನ್ ರವರು ಎಸ್.ಡಿ.ಪಿ.ಐ ಯ ಧ್ಯೇಯ ವಾಕ್ಯದಂತೆ ರಾಜಕೀಯ ವೃತ್ತಿಗಾಗಿ ಅಲ್ಲ, ಬದಲಾಗಿ ಉದಾತ್ತ ಮೌಲ್ಯಗಳಿಗಾಗಿ ಎಂಬುದನ್ನು ಇತರ ರಾಜಕೀಯ ಪಕ್ಷಗಳಿಗೆ ಈ 11 ವರ್ಷಗಳಲ್ಲಿ ಪಕ್ಷವು ತೋರ್ಪಡಿಸಿದೆ. ಪಕ್ಷವು ಇಲ್ಲಿಯ ಮರ್ಧಿತರ, ದೀನ ದಲಿತರ, ಅಲ್ಪಸಂಖ್ಯಾತರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಮುಂದಿನ ಗುರಿ ಇಲ್ಲಿನ ಆಡಳಿತದಲ್ಲಿ ನಮ್ಮ ಗೆಲ್ಲುವಿಕೆಯಾಗಿದೆ, ಮುಂದೆ ಬರುವ ಪಂಚಾಯತ್ ಚುನಾವಣೆಯಲ್ಲಿ ಗ್ರಾಮದಲ್ಲಿ ಬಹುತೇಕ ವಾರ್ಡ್ ಗಳಲ್ಲಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಕಾರ್ಯಕರ್ತರು ಉತ್ಸಾಹದಲ್ಲಿ ಕೆಲಸ ಕಾರ್ಯ ನಡೆಸಬೇಕೆಂದು ಕರೆ ನೀಡಿದರು.
ನಂತರ ಮಾತನಾಡಿದ ಮುಖಂಡರಾದ ಇರ್ಷಾದ್ ಕಾವು ಈ 11 ವರ್ಷಗಳಲ್ಲಿ ಪಕ್ಷವು ಹಲವಾರು ಅಡೆ ತಡೆಗಳನ್ನು ಎದುರಿಸಿ ಫ್ಯಾಸಿಸ್ಟ್ ಸಕರಾರದ ಜನವಿರೋಧಿ ಧೋರಣೆಯ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ, ಇನ್ನೂ ಕೂಡ ಇದು ಮುಂದುವರೆಯುವುದು ಈ ವಿಷಯದಲ್ಲಿ ಯಾರೊಂದಿಗೂ ರಾಜಿಯಿಲ್ಲ ಎಂದು ಹೇಳಿದರು. ಭಾರತ ಚೀನಾ ಯುದ್ದದಲ್ಲಿ ಹುತಾತ್ಮರಾದ ಧೀರ ಯೋಧರಿಗೂ ಇದೇ ಸಂದರ್ಭದಲ್ಲಿ ಮೌನ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಬಡಗನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಜಾಬಿರ್ ಕೊಯಿಲ, ಕಾರ್ಯದರ್ಶಿ ಶಂಸುದ್ದೀನ್ ಪೆರಿಗೇರಿ, SDTU ಮುಖಂಡರಾದ ಇಮ್ತಿಯಾಜ್ ಕೊಟ್ಯಾಡಿ, ಈಶ್ವರಮಂಗಲ ವಲಯ ಕಾರ್ಯದರ್ಶಿ ಉಮರ್ ಬಿಸಿ ಉಪಸ್ಥಿತರಿದ್ದರು.ರಶೀದ್ ಇಂಡೋ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.