ಮಂಗಳೂರು (www.vknews.com) ; ಸಮಾಜದ ಸ್ವಾಸ್ಥ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆ. ನಮ್ಮ ದೇಶದ ಉದ್ದಗಳಕ್ಕೂ ಸಾಮರಸ್ಯದ ಕೊಂಡಿ ಹರಡಿಕೊಂಡಿದೆ. ದೇಶದ ಸುಭದ್ರತೆ ಮತ್ತು ಅಖಂಡತೆ ಯು ಅಡಗಿರುವುದು ಪರಸ್ಪರ ಸೌಹಾರ್ದ ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ವಾಗಿರುತ್ತದೆ.
ಆದ್ದರಿಂದ ಯಾವುದೇ ಒಂದು ವ್ಯಕ್ತಿ ಅಥವಾ ಗುಂಪು ಮಾಡುವ ಅಪರಾಧಗಳನ್ನು ಆ ಗುಂಪು ಅಥವಾ ವ್ಯಕ್ತಿ ಪ್ರತಿನಿಧಿಸುವ ಧರ್ಮದ ನಾಯಕರು ಖಂಡಿಸುವುದರ ಮೂಲಕ ಪ್ರತಿಭಟಿಸಬೇಕು. ಮೊನ್ನೆ ಕೆಲ ದುಷ್ಕರ್ಮಿಗಳು ಕಾನೂನಾತ್ಮಕ ವಾಗಿ ವ್ಯಾಪಾರ ನಡೆಸುತ್ತಿದ್ದ ಮಾಂಸ ವ್ಯಾಪಾರಿಯ ಮೇಲೆ ಮತ್ತು ಜಾನುವಾರು ವ್ಯಾಪಾರಿಯ ಮೇಲೆ ಅನೈತಿಕ ವಾಗಿ ಹಲ್ಲೆ ಮಾಡಿರುತ್ತಾರೆ.
ಅದೇ ರೀತಿಯಲ್ಲಿ ಹಿಂದೂ ಬಾಂಧವರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಿರ್ಬಂಧಿತ ಜಾಗದಲ್ಲಿ ಮೀನು ಹಿಡಿಯುವುದು,ಪೂಜ್ಯ ಮೂರ್ತಿಗಳನ್ನು ಅವಮಾನಿಸುವುದು ಅಕ್ಷಮ್ಯ ಅಪರಾಧವೇ ಆಗಿದೆ.
ಆದ್ದರಿಂದ ಮುಸ್ಲಿಂ ಸಮುದಾಯದ ಜವಾಬ್ದಾರಿಯುತ ಸಂಘಟನೆಯಾಗಿ ರಾಜ್ಯ ದಾರಿಮಿ ಉಲಮಾ ಒಕ್ಕೂಟವು ಇಂತಹಾ ಲಜ್ಜೆಗೇಡಿನ ಪುಂಡಾಟಿಕೆಯ ನ್ನು ಶಕ್ತಿ ಯುತವಾಗಿ ಖಂಡಿಸುತ್ತದೆ . ಜೊತೆಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒಕ್ಕೂಟವು ಸರಕಾರವನ್ನು ಒತ್ತಾಯಿಸುತ್ತದೆ.
ಈ ಸಂಬಂಧ ವೀಡಿಯೋ ಕಾನ್ಫರೆನ್ಸ್ ಮೂಲಕ ಸುದೀರ್ಘ ಚರ್ಚೆ ನಡೆಸಿದ ಒಕ್ಕೂಟದ ಮುಖಂಡರು ಅಪರಾಧಿಗಳು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಜರಗಿಸುವ ಕಾರ್ಯದಲ್ಲಿ ಕೈ ಜೋಡಿಸಿ ನಿಂತು ಸೌಹಾರ್ದ ಸಮಾಜಕ್ಕೆ ಪ್ರೇರಣೆ ಯಾಗಬೇಕೆಂದು ಅಭಿಪ್ರಾಯ ಪಟ್ಟಿತು.
ಅದೇ ಸಂಧರ್ಭ ಇಂತಹ ಕಿಡಿಗೇಡಿತನವನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಬಳಸಿ ಸಮುದಾಯಗಳ ಮದ್ಯೆ ಕಂದಕ ಸೃಷ್ಟಿಸಿ ಕೋಮು ದ್ವೇಷ ಹರಡಲು ಪ್ರಯತ್ನಿಸುವವರನ್ನು ಕೂಡಾ ಕಾನೂನಿನ ವ್ಯಾಪ್ತಿಗೆ ಒಳಪಡಿಸಿ ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಾದುದು ಸರಕಾರಗಳ ಕರ್ತವ್ಯ ಕೂಡಾ ಆಗಿದೆ ಎಂದು ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಡಿದೆ.
ಸಭೆಯಲ್ಲಿ ಪಧಾದಿಕಾರಿಗಳಾದ ಹಾಜಿ ಎಸ್ ಬಿ ದಾರಿಮಿ,ಮೌಲಾನ ಚೊಕ್ಕಬೆಟ್ಟು ಉಸ್ತಾದ್,ಹಾಜಿ ತಬೂಕ್ ದಾರಿಮಿ,ಉಸ್ತಾದ್ ಕುಕ್ಕಿಲ ದಾರಿಮಿ ,ಒಮಾನ್ ಸಿದ್ದೀಖ್ ದಾರಿಮಿ,ಕೆ ಆರ್ ಹುಸೈನ್ ದಾರಿಮಿ,ಕೆ ಎಲ್ .ಉಮರ್ ದಾರಿಮಿ ,ಕೊಡುಂಗೈ ಕೆ ಬಿ ಉಸ್ತಾದ್, ಖಾಸಿಂ ದಾರಿಮಿ ಉಸ್ತಾದ್ ತೋಡಾರ್ ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.