ಎಸ್.ಎಸ್.ಎಲ್.ಸಿ. ಪರೀಕ್ಷೆಯ ಹಾಜರಾತಿ
ಮಂಗಳೂರು (www.vknews.com) : ಎಸ್.ಎಸ್.ಎಲ್.ಸಿ. ಪರೀಕ್ಷೆಗುರುವಾರಆರಂಭವಾಗಿದ್ದು, ಮೊದಲ ದಿನ ದ್ವಿತೀಯ ಭಾಷೆ ಪರೀಕ್ಷೆ ನಡೆಯಿತು. ಇಂದಿನ ಪರೀಕ್ಷೆಗೆ 29,032 ವಿದ್ಯಾರ್ಥಿಗಳು ನೊಂದಣಿಆಗಿದ್ದು, ಒಟ್ಟು27,374 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.1658 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆಎಂದುಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಮಾತೃವಂದನಾ ಯೋಜನೆಗೆ ಅರ್ಜಿ ಆಹ್ವಾನ
ಪ್ರಧಾನಮಂತ್ರಿ ಮಾತೃವಂದನಾ ಯೋಜನೆ 2018ರಿಂದ ಜಾರಿಗೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಟಾನ ಮಾಡಲಾಗರುತ್ತದೆ. ಮೊದಲ ಬಾರಿ ಗರ್ಭಿಣಿಯರಾಗುವ ಪತ್ತಿಯೊಬ್ಬರೂ ಇದರ ಪ್ರಯೋಜನ ಪಡೆಯಬಹುದು.ಸರಕಾರಿ ನೌಕರರಾಗಿರುವ ಮಹಿಳೆಯರು ಈ ಸೌಲಭಕ್ಕೆ ಅರ್ಹರಲ್ಲ.
ಅರ್ಹ ಫಲಾನುಭವಿ ಬ್ಯಾಂಕ್ ಖಾತೆಗೆ ರೂ 5 ಸಾವಿರ ಜಮಾ ಮಾಡಲಾಗುತ್ತದೆ.2018 ಜೂನ್ 1ರಿಂದ ಅರ್ಜಿ ಸಲ್ಲಿಸಲು ಬಾಕಿ ಇರುವವರು ಕೂಡ ಅರ್ಜಿ ಸಲ್ಲಿಸಬಹುದು.ಎಪಿಎಲ್ ಪಡಿತರ ಚೀಟಿ ಇರುವವರೂ ಕೂಡ ಪ್ರಯೋಜನ ಪಡೆಯಬಹುದು.ಆಧಾರ್ರ್ ಕಾರ್ಡ್ ಕಡ್ಡಾಯ, ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇರುವುದಿಲ್ಲ. ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳು ಸಮೀಪ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಅಥವಾ ದೂರವಾಣ ಸಂಖ್ಯೆ:0824-2432809,2263199ನ್ನು ಸಂಪರ್ಕಿಸಬಹುದು ಎಂದುಮಂಗಳೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆ ತಿಳಿಸಿದೆ.
ಮೀನುಗಾರಿಕೆ ಇಲಾಖೆ – ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಮೀನುಗಾರಿಕೆ ಇಲಾಖೆಯಿಂದ ಕಾಟ್ಲಾ, ರೋಹು, ಸಾಮಾನ್ಯಗೆಂಡೆ ಜಾತಿಯ ಮೀನುಮರಿಗಳನ್ನು ಜುಲೈ, ಅಗೋಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಸರಕಾರ ನಿಗದಿಪಡಿಸಿದ ದರದಂತೆ ವಿತರಿಸಲಾಗುವುದು. ಆಸಕ್ತ ಮೀನು ಕೃಷಿಕರು ಮೀನುಮರಿಗಳಿಗೆ ಬೇಡಿಕೆಯನ್ನು ಸಲ್ಲಿಸುವ ಜೊತೆಗೆ ಕೊಳದ ವಿವರ ವಿಸ್ತೀರ್ಣದ ವಿವರವನ್ನೂ ಕೂಡ ನೀಡುವಂತೆ ತಿಳಿಸಿದೆ.
ಇಲಾಖೆಯ ಜಿಲ್ಲಾ ಪಂಚಾಯತ್ ಯೋಜನೆಯಡಿ ಗ್ರಾಮಾಂತರ ಪ್ರದೇಶದ ಮೀನು ಮಾರಾಟ ವೃತ್ತಿಯಲ್ಲಿ ನಿರತರಾಗಿರುವವರಿಗೆ ಮೀನು ಸಾಗಾಟ ಮಾರಾಟಕ್ಕೆ ಮತ್ಸ್ಯವಾಹಿನಿ ಯೋಜನೆಯಡಿ ವಾಹನ ಖರೀದಿಗಾಗಿ ಸಹಾಯಧನ ನೀಡಲಾಗುವುದು. ಮೀನನ್ನು ಇಳಿದಾಣ ಕೇಂದ್ರಗಳಿಂದ ತಾಜಾ ಹಾಗೂ ಆರೋಗ್ಯಕರ ರೀತಿಯಲ್ಲಿ ಮಾರಾಟ ಸ್ಥಳಗಳಿಗೆ ತ್ವರಿತವಾಗಿ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ನಿರುದ್ಯೋಗಿ ಮೀನುಗಾರರು, ಮೀನುಗಾರ ಮಹಿಳೆಯರು, ಮೀನುಗಾರರ ಸಹಕಾರ ಸಂಘದ ಸದಸ್ಯರು ಅಥವಾ ಸ್ವಸಹಾಯ ಗುಂಪುಗಳು ಅಂದರೆ ಮೂರು ಅಥವಾ ನಾಲ್ಕು ಫಲಾನುಭವಿಗಳ ಗುಂಪಿಗೆ ತ್ರಿಚಕ್ರ, ನಾಲ್ಕುಚಕ್ರ ವಾಹನ ಖರೀದಿಗೆ ಸಹಾಯಧನ ನೀಡಲು ಅವಕಾಶವಿದೆ.
ಈ ಕಾರ್ಯಕ್ರಮದಡಿ ಒಂದು ಹೊಸ ತ್ರಿಚಕ್ರ ಮೀನು ಸಾಗಾಟ ವಾಹನವನ್ನು ಖರೀದಿಸಲು ಗರಿಷ್ಠ ರೂ.30 ಸಾವಿರ ಹಾಗೂ ನಾಲ್ಕು ಚಕ್ರದ ಮೀನು ಸಾಗಾಟ ವಾಹನವನ್ನು ಖರೀದಿಸಲು ಗರಿಷ್ಠ ರೂ.35 ಸಾವಿರ ಮಿತಿಯೊಳಗೆ ಸಹಾಯಧನ ನೀಡಲಾಗುವುದು.ಉಳಿದ ಮೊತ್ತವನ್ನು ಫಲಾನುಭವಿಯು ಬ್ಯಾಂಕ್ ಇಲ್ಲವೇ ಇತರ ಮೂಲಗಳಿಂದ ಭರಿಸಬೇಕು.
ಮೀನು ಕೃಷಿಕೊಳ ಹೊಂದಿದ್ದು, ಮೀನು ಕೃಷಿಯಲ್ಲಿ,ಮೀನುಗಾರಿಕೆಯಲ್ಲಿ ನಿರತರಾಗಿರುವ ಪರಿಶಿಷ್ಟ ಜಾತಿ ಮೀನುಗಾರರಿಗೆ ರೂ.10 ಸಾವಿರ ಮೌಲ್ಯದ ಮೀನು ಹಿಡಿಯುವ ಪರಿಕರಗಳನ್ನು ಖರೀದಿಸಿ ಕಿಟ್ರೂಪದಲ್ಲಿ ಉಚಿತವಾಗಿ ನೀಡುವ ಬಗ್ಗೆ ಅರ್ಜಿ ಆಹ್ವಾನಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-0824-2421680,9606313259, ಅಥವಾ ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಗ್ರೇಡ್-2), ಮಾಹಿತಿ ಕೇಂದ್ರ ಕಟ್ಟಡ, ಸೌತ್ ವಾರ್ಫ್, ಬಂದರು, ಮಂಗಳೂರು 575001 ಗೆ ಸಂಪರ್ಕಿಸಬಹುದು ಎಂದು ಮಂಗಳೂರು. ಮೀನುಗಾರಿಕೆ ಸಹಾಯಕ ನಿರ್ದೇಶಕರು,(ಗ್ರೇಡ್-1) ಪ್ರಕಟನೆ ತಿಳಿಸಿದೆ.
ಕ್ಷೌರಿಕರಿಗೆ ಮತ್ತು ಅಗಸರಿಗೆ ಪರಿಹಾರ ಧನಕ್ಕೆ ಅರ್ಜಿ ಆಹ್ವಾನ
ಕೋವಿಡ್-19 ಹಿನ್ನೆಲೆಯಲ್ಲಿ 18 ರಿಂದ 65 ವರ್ಷದೊಳಗಿನ ಕ್ಷೌರಿಕ ಮತ್ತು ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರವಾಗಿ ರೂ.5000ಗಳನ್ನು ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳು ತಾವು ಕೆಲಸ ನಿರ್ವಹಿಸುತ್ತಿರುವ ವ್ಯಾಪ್ತಿಯ ಸೇವಾಸಿಂಧು ಕೇಂದ್ರದ ಸೇವಾಸಿಂಧು ಪೋರ್ಟಲ್ ನಲ್ಲಿ ನಿಗಧಿತ ಅರ್ಜಿಯಲ್ಲಿ ಮಾಹಿತಿ ಭರ್ತಿ ಮಾಡಿ, ಬ್ಯಾಂಕ್ ಖಾತೆಯೊಂದಿಗೆ ಜೋಡನೆಯಾಗಿರುವ ಆಧಾರ್ ಕಾರ್ಡ್, ವಿಳಾಸ ದೃಢೀಕರಣದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಸ್ವಯಂ ಘೋಷಣಾ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ ತಮ್ಮ ಛಾಯಾ ಚಿತ್ರವನ್ನು ಅಪಲೋಡ್ ಮಾಡಬೇಕು.
ಕ್ಷೌರಿಕ, ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಕುರಿತು ಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರರು, ಉಪತಹಸೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ. ಕಾರ್ಮಿಕ ಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಯಾವುದಾದರೊಂದು ಅಧಿಕಾರಿಯಿಂದ ದೃಢೀಕರಿಸಿ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗಿರುತ್ತದೆ.ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನ ವೃತ್ತಿಯಲ್ಲಿ ತೊಡಗಿದ್ದಲ್ಲಿ ಒಬ್ಬರು ಮಾತ್ರ ಪರಿಹಾರ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 30 ಆಗಿರುತ್ತದೆ ಎಂದು ಕಾರ್ಮಿಕ ಅಧಿಕಾರಿ, ದ.ಕ ಉಪವಿಭಾಗ-1, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ಪದ್ಮಶ್ರೀ ಪ್ರಶಸ್ತಿ – ಅರ್ಜಿಆಹ್ವಾನ
ಕ್ರೀಡಾಕ್ಷೇತ್ರದಲ್ಲಿಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ, 2021ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ದಿನದ ಹಿಂದಿನ ದಿನಾಂಕದಂದುಕೇಂದ್ರ ಸರಕಾರದಿಂದ ಪ್ರಕಟಿಸಲಾಗುತ್ತದೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯುಅತ್ಯುತ್ತಮಗುಣಮಟ್ಟ ಹೊಂದಿರಬೇಕು.ಅಲ್ಲದೆ ಆ ವ್ಯಕ್ತಿಯುಜೀವನ ಪರ್ಯಂತ ಸಾಧಿಸಿರುವ ಪ್ರಗತಿಯನ್ನು ಹಾಗೂ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನುಗಮನದಲ್ಲಿಟ್ಟುಕೊಂಡು ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಅರ್ಹಅರ್ಜಿದಾರರು ನಿಗದಿತ ನಮೂನೆಯನ್ನುಕಚೇರಿಯಿಂದ ಪಡೆದು ವೈಯಕ್ತಿಕ ವಿವರಗಳನ್ನು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಬೇಕು. ಮತ್ತುಗರಿಷ್ಠ ಎರಡು ಪುಟಗಳೊಳಗಿನ ಅವರ ಸಾಧನೆಗಳ ಕುರಿತಾದ ವಿವರವನ್ನುಆಂಗ್ಲ ಮತ್ತುಕನ್ನಡ ಭಾಷೆಯಲ್ಲಿ ಪ್ರತ್ಯೇಕವಾಗಿ ಲಗತ್ತಿಸಿ ಜೂನ್ 25ರ ಒಳಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ದ.ಕ. ಜಿಲ್ಲೆ, ಮಂಗಳೂರು ಇವರಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದ.ಕ.ಜಿಲ್ಲೆಯಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಇ-ಮೇಲ್, ದೂರವಾಣಿ ಸಂಖ್ಯೆ 0824 2451264 ನ್ನು ಸಂಪರ್ಕಿಸಲುದ. ಕ.ಜಿಲ್ಲೆಯಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ತೆಂಗು ಫಸಲು-ಬಹಿರಂಗ ಹರಾಜುಪ್ರಕ್ರಿಯೆ
ದಕ್ಷಿಣಕನ್ನಡಜಿಲ್ಲೆಯ ವಿವಿಧತೋಟಗಾರಿಕೆ ಕ್ಷೇತ್ರಗಳಲ್ಲಿನ 2020-21ನೇ ಸಾಲಿನ ತೆಂಗು ಫಸಲನ್ನುಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಜುಲೈ 21ರಂದು ಬೆಳಿಗ್ಗೆ ಕಚೇರಿ ನರ್ಸರಿ ಬಂಟ್ವಾಳ, ಮಧ್ಯಾಹ್ನ ವಿಟ್ಲತೋಟಗಾರಿಕೆಕ್ಷೇತ್ರ, ಜುಲೈ22 ರಂದುಬೆಳಿಗ್ಗೆ ಕಚೇರಿ ನರ್ಸರಿ ಬೆಳ್ತಂಗಡಿ, ಮಧ್ಯಾಹ್ನಚಾರ್ಮಾಡಿತೋಟಗಾರಿಕೆಕ್ಷೇತ್ರ, ಜುಲೈ23 ರಂದು ಬೆಳಿಗ್ಗೆ ಕಬಕ ತೋಟಗಾರಿಕೆಕ್ಷೇತ್ರ, ಮಧ್ಯಾಹ್ನಕಚೇರಿ ನರ್ಸರಿ ಸುಳ್ಯ ಹಾಗೂ ಹೊಸಗದ್ದೆತೋಟಗಾರಿಕೆಕ್ಷೇತ್ರ ಸುಳ್ಯ, ಜುಲೈ24 ರಂದು ಬೆಳಿಗ್ಗೆ ಪಡೀಲ್ತೋಟಗಾರಿಕೆಕ್ಷೇತ್ರ, ಮಧ್ಯಾಹ್ನಜಿಲ್ಲಾ ಸಸ್ಯಗಾರ ಮಂಗಳೂರು ಇಲ್ಲಿನತೆಂಗು ಫಸಲನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ.
ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಬಹುದು.ವಿಲೇವಾರಿ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳಿಗೆ ರಾಜ್ಯ ವಲಯ, ಮಂಗಳೂರು ಹಿರಿಯತೋಟಗಾರಿಕೆ ನಿರ್ದೇಶಕರಕಚೇರಿ, ದೂರವಾಣಿ ಸಂಖ್ಯೆ 0824 2444298 ನ್ನು ಸಂಪರ್ಕಿಸಲುಮಂಗಳೂರು ಹಿರಿಯತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಪೆÇಲೀಸ್ ಇಲಾಖೆವಾಹನಗಳ ಬಿಡಿಭಾಗಗಳ ಹರಾಜು
ದಕ್ಷಿಣಕನ್ನಡಜಿಲ್ಲೆಯ ಪೊಲೀಸ್ ಇಲಾಖೆಗೆ ಸೇರಿದ ಮೋಟಾರು ವಾಹನ ವಿಭಾಗದ 2019-20ನೇ ಸಾಲಿನ ನಿಷ್ಕ್ರಿಯಗೊಳಿಸಲಾದ ಹಳೆಯ ಬಿಡಿಭಾಗಗಳು, ಹಳೆಯ ಟಯರುಟ್ಯೂಬುಗಳು ಹಾಗೂ ಹಳೆಯ ಮಡ್ಡ್ ಆಯಿಲ್ಗಳ ಬಹಿರಂಗ ಹರಾಜು ಮೂಲಕ ವಿಲೇವಾರಿಜುಲೈ 9 ರಂದು ಬೆಳಿಗ್ಗೆ 11ಗಂಟೆಗೆದಕ್ಷಿಣಕನ್ನಡಜಿಲ್ಲಾ ಸಶಸ್ತ್ರ ಮೀಸಲು ಪಡೆಯಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
ನಿರುಪಯುಕ್ತ ವಸ್ತುಗಳ ವಿವರ:- ಹಳೆಯ ನಿಷ್ಕ್ರಿಯಗೊಳಿಸಲಾದ ಬಿಡಿ ಭಾಗಗಳ ಸಂಖ್ಯೆ – 419, ನಿಗದಿಗೊಳಿಸಿದ ಮೊತ್ತರೂ 16 ಸಾವಿರ, ಹಳೆಯ ಟಯರ್ಟ್ಯೂಬ್ಗಳು(ದ್ವಿಚಕ್ರ 12+12, ಲಘುವಾಹನ 170+110), ಸಂಖ್ಯೆ – 182+122, ನಿಗದಿಗೊಳಿಸಿದ ಮೊತ್ತರೂ 22 ಸಾವಿರ, ಹಳೆಯ ಮಡ್ಡ್ಆಯಿಲ್ (ನಿರುಪಯುಕ್ತಆಯಿಲ್)360 ಲೀ, ನಿಗದಿಗೊಳಿಸಿದ ಮೊತ್ತರೂ 7.500 ಸಾವಿರಆಗಿದೆ.
ಟೆಂಡರ್ಅರ್ಜಿ ಸಲ್ಲಿಸಲುಜುಲೈ 8ರಂದು ಸಂಜೆ 5ಗಂಟೆಯಕೊನೆಯ ದಿನವಾಗಿದೆಹೆಚ್ಚಿನ ಮಾಹಿತಿಗಾಗಿದಕ್ಷಿಣಕನ್ನಡಜಿಲ್ಲೆ ಪೆÇಲೀಸು ಅಧೀಕ್ಷಕಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಮಂದಾರ ಕೇಶವ ಭಟ್ ಮನೆ ಉಳಿಸಲು ತುಳು ಅಕಾಡೆಮಿ ಅಧ್ಯಕ್ಷರ ಮನವಿ
ತುಳುವಿನ ಮಹಾಕವಿ, ತುಳು ವಾಲ್ಮೀಕಿಎಂದೇ ಪ್ರಸಿದ್ಧರಾದ, ತುಳುವಿಗೆ ಆಕರಗ್ರಂಥವನ್ನು ನೀಡಿದ “ಮಂದಾರರಾಮಾಯಣ” ಗ್ರಂಥದಕರ್ತೃ ಮಂದಾರ ಕೇಶವ ಭಟ್ರವರು ಹುಟ್ಟು ವಾಸಿಸಿದ ಪಾರಂಪರಿಕ ಮನೆಯು ಶತಮಾನಕಂಡು, ಇತ್ತೀಚೆಗೆ ಸಂಭವಿಸಿದ ಮಾನವ ನಿರ್ಮಿತತ್ಯಾಜ್ಯದುರಂತದಲ್ಲಿ ಸಂಪೂರ್ಣ ಹಾನಿಗೀಡಾಗಿದ್ದು ವಿನಾಶದಅಂಚಿನಲ್ಲಿದೆ.
ಮಂದಾರರಜನ್ಮಶತಮಾನೋತ್ಸವ ಸಂದರ್ಭದಲ್ಲಿಯೂ ಈ ದುರಂತ ಸಂಭವಿಸಿರುವುದು ತುಳುನಾಡಿಗೆ ಬಂದಂತಹಘೋರದುರಂತ. ಮುಂದಿನ ಪೀಳಿಗೆಗಾಗಿ ಈ ಮಹಾಕವಿಯ ವಾಸ್ತುವಿನ್ಯಾಸವುಳ್ಳ ಮನೆಯನ್ನು ಉಳಿಸಿ ಸುಂದರ ಸಾಂಸ್ಕøತಿಕ ವೈಭವವನ್ನುಎತ್ತಿ ಹಿಡಿದು, ತುಳು ಭಾಷೆ ಹಾಗೂ ಸಂಸ್ಕøತಿಯಅಧ್ಯಯನಕೇಂದ್ರವನ್ನಾಗಿ ಮಾಡಬೇಕು, ನಾಡುಕಂಡಂತಹಕೇಂದ್ರ ಭಾಷಾ ಸಮ್ಮಾನ್ ಪುರಸ್ಕಾರವನ್ನು ತುಳುವಿಗೆ ತಂದುಕೊಟ್ಟ, ತುಳು ಸಾಹಿತ್ಯಅಕಾಡೆಮಿಯ ಪ್ರಪ್ರಥಮ ಪ್ರಶಸ್ತಿ ಪುರಸ್ಕøತ, ರಾಜ್ಯಪ್ರಶಸ್ತಿ ವಿಜೇತ ಮಂದಾರ ಕೇಶವ ಭಟ್ಟರ ನೆನಪು ಅಜರಾಮರವಾಗಿರುವಂತೆ ಮಾಡುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ತುಳು ಸಾಹಿತ್ಯಅಕಾಡೆಮಿಯುತನ್ನ ವ್ಯಾಪ್ತಿಯಲ್ಲಿ ಸಂಪೂರ್ಣ ಸಹಕಾರ ನೀಡಲಿದೆ. ಈ ಮಹತ್ಕಾರ್ಯದಲ್ಲಿ ಜಿಲ್ಲಾಡಳಿತ, ಕ.ಸಾ.ಪ., ಮ.ನ.ಪಾ, ಜನ ಪ್ರತಿನಿಧಿಗಳು, ತುಳು ಸಂಘ ಸಂಸ್ಥೆಗಳು ಹಾಗೂ ತುಳು ಭಾಷಿಕರ ಸರ್ವ ಸಹಕಾರಅಗತ್ಯವಿದೆಯೆಂದುಕರ್ನಾಟಕ ತುಳು ಸಾಹಿತ್ಯಅಕಾಡೆಮಿಯಅಧ್ಯಕ್ಷದಯಾನಂದ ಜಿ. ಕತ್ತಲ್ಸಾರ್ ಪ್ರಕಟಣೆÂಯಲ್ಲಿ ವಿನಂತಿಸಿದ್ದಾರೆ.
ದ್ವಿಚಕ್ರ ವಾಹನ ಬಹಿರಂಗ ಹರಾಜು
ಸಂಚಾರಉತ್ತರ ಪೊಲೀಸ್ಠಾಣೆಯಆವರಣದಲ್ಲಿ ಇರಿಸಿರುವ ಅಪಘಾತ ಪ್ರಕರಣದಲ್ಲಿ ಸ್ವಾಧೀನಪಡಿಸಿಕೊಂಡ ಎರಡು ದ್ವಿಚಕ್ರ ವಾಹನಗಳನ್ನು ಜುಲೈ 1 ರಂದು ಬೆಳಿಗ್ಗೆ 10 ಗಂಟೆಗೆಬೈಕಂಪಾಡಿಸಂಚಾರಉತ್ತರಠಾಣಾಆವರಣದಲ್ಲಿ ಯಥಾಸ್ಥಿತಿಯಲ್ಲಿ ಬಹಿರಂಗ ಹರಾಜು ನಡೆಸಲು ಉದ್ದೇಶಿಸಿದ್ದು ಆಸಕ್ತರು ಸಂಚಾರಉತ್ತರಠಾಣಾಆವರಣದಲ್ಲಿ ಹಾಜರಾಗಬಹುದುಎಂದುಪ್ರಕಟಣೆ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.