ಬೆಂಗಳೂರು (www.vknews.com) : ದೀರ್ಘಾವಧಿ ಲಾಕ್ಡೌನ್ ಪರಿಣಾಮ ಗ್ರಾಮೀಣ ಜನರ ಬದುಕು ನಲುಗಿಹೋಗಿದೆ. ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಪರಿಸ್ಥಿತಿ ಒದಗಿ ಬಂದಿದೆ.ಆದ್ದರಿಂದ ಉದ್ಯೋಗ ಖಾತ್ರಿಯಲ್ಲಿ ಕನಿಷ್ಟ 200 ರಿಂದ 250 ದಿನ ಕೆಲಸ ನೀಡಲೇ ಬೇಕು ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಲಾಕ್ಡೌನಿಂದಾಗಿ ನಗರಗಳಲ್ಲಿ ದುಡಿಯುತ್ತಿದ್ದ ಗ್ರಾಮೀಣ ಜನರು ಊರಿಗೆ ಮರಳಿದ್ದಾರೆ. ಇದರಿಂದ ಸ್ಥಳೀಯರಿಗೂ ಕನಿಷ್ಠ ಉದ್ಯೋಗ ಸಿಗುತ್ತಿಲ್ಲ. ದಿನಗೂಲಿ ನೌಕರರ ಮತ್ತು ಕೃಷಿ ಕಾರ್ಮಿಕರ ಜೀವನ ಹೇಳತೀರದು.ಅವರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ಆದರೆ ಸರಕಾರ ಇದ್ಯಾವುದರ ಬಗ್ಗಯೂ ತಲೆಕೆಡಿಸಿಕೊಳ್ಳದೆ ಗಪ್ ಚುಪ್ ಆಗಿದೆ. ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕು.
ಸದ್ಯಕ್ಕೆ 100 ದಿನ ಕೆಲಸ ಕೊಡುವುದಾಗಿ ಹೇಳಿ ಎಷ್ಟೋ ಕಾಮಗಾರಿಗಳನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ. ಮಳೆಯಾದ ಕಾರಣ 15 ದಿನದಲ್ಲೇ ಕೆಲಸ ಬಿಡಿಸಿದ್ದಾರೆ. ಇದನ್ನು ಮುಂದುವರಿಸುವ ಜತೆಗೆ, ದಿನಗೂಲಿ ದರವನ್ನೂ ಹೆಚ್ಚಿಸಲೇಬೇಕು,ಮತ್ತು ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ಕೂಡಾ ನೀಡಬೇಕು ಎಂದರು.
ಬರಪೀಡಿತ ಜಿಲ್ಲೆ ಎಂದು ಪರಿಗಣಿಸಿದ ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ 150 ದಿನಗಳವರೆಗೆ ಕೆಲಸ ನೀಡಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ನರೇಗಾ ಯೋಜನೆಯನ್ನು 22 ಜಿಲ್ಲೆಗಳಲ್ಲಿ 103 ತಾಲ್ಲೂಕುಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ನಿಬಂಧನೆ ಸಡಿಲಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಎಲ್ಲಾ ತಾಲೂಕುಗಳಿಗೂ 200 ರಿಂದ 250 ದಿನಗಳವರೆಗೆ ಕೆಲಸ ಕಡ್ಡಾಯವಾಗಿ ನೀಡಬೇಕು ಎಂದು ಅವರು ಸರಕಾರಕ್ಕೆ ಒತ್ತಯಿಸಿದರು.
ನರೇಗಾ ಫಲಾನುಭವಿಗಳಿಗೆ ಎಲ್ಲಾ ತರಹದ ಸರಕಾರ ಸೌಲಭ್ಯ ಗಳನ್ನು ಸತಾಯಿಸದೇ ನೀಡಬೇಕು.ಅಲ್ಲದೇ ಇವರಿಗೆ ಸರಕಾರ ವಿಮಾ ಹಣ ಭರಿಸಿ ಜೀವರಕ್ಷಣೆ ವಿಮೆ ಮಾಡಿಸಬೇಕು ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.