ಪೊಲೀಸರೆಂದರೆ ಅವರು ಆತ್ಮೀಯರಾಗಲು ಸಾಧ್ಯವಿಲ್ಲ ಎಂಬ ಅಲರ್ಜಿ ಆವಾಹಿಸಿಕೊಂಡಿರುವ ಮಂದಿಗೆ ಅಪವಾದವೆನಿಸುವಂತೆ ಸರಳ ಸಜ್ಜನತೆಯನ್ನು ಮೈಗೂಡಿಸಿಕೊಂಡಿರುವ ವಿಟ್ಲ ಠಾಣಾಧಿಕಾರಿ ಶ್ರೀ ವಿನೋದ ರೆಡ್ಡಿಯವರು ಪ್ರಾಥ: ಸ್ಮರಣೀಯರು
ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯಲ್ಲಿ ವಿಟ್ಲದ ದಕ್ಷ ಎಸ್ ಐ ವಿನೋದ್ ರೆಡ್ಡಿಗೆ ಸರಿಸಾಟಿಯೇ ಇಲ್ಲ
(www.vknews.com) : ವಿಟ್ಲ ಪೋಲಿಸ್ ಠಾಣೆಗೆ ಕರ್ತವ್ಯಕ್ಕೆ ಅಗಮಿಸಿದಂದಿನಿಂದ ಠಾಣಾ ವ್ಯಾಪ್ತಿಯಲ್ಲಿ ಸದಾ ಒಂದಲ್ಲೊಂದು ಹೊಸ,ಹೊಸ ಕಾನೂನು ಪ್ರಯೋಗಗಳ ಮೂಲಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ, ನ್ಯಾಯ,ನಿಷ್ಠ,ನಿಷ್ಪಕ್ಷಪಾತ,ದಕ್ಷ,ಪ್ರಾಮಾಣಿಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಾನ್ಯ ಎಸ್,ಐ ವಿನೋದ್ ರೆಡ್ಡಿ ಯವರಿಗೆ ಅಭಿಮಾನಿಗಳ ಕಾಟವೇ ಅಧಿಕವಾಗಿದೆ.ತನ್ನ ವ್ಯಾಪ್ತಿಯುದ್ದಕ್ಕೂ ಸಾರ್ವಜನಿಕ ರೊಂದಿಗೆ ಪ್ರೀತಿಯಿಂದ ಬೆರೆತು,ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜನಸ್ನೇಹಿ ಪೋಲಿಸ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ ಏಕೈಕ ಪೊಲೀಸ್ ಅಧಿಕಾರಿ ಅಂತ ಹೇಳಿದರೂ ತಪ್ಪಗಲಾರದು.
ಒಬ್ಬ ವ್ಯಕ್ತಿ ತಪ್ಪು ಮಾಡಿಯೇ ಇಲ್ಲವೆಂದಾದರೇ,ಅತನ ಬಳಿ ನ್ಯಾಯವಿದ್ದರೇ,ಅ ನ್ಯಾಯವನ್ನು ಕೇಳಲು ಎಸ್ ಐ ವಿನೋದ್ ರೆಡ್ಡಿಯ ಮುಂದೆ ಹೋಗಲು,ಯಾವ ರಾಜಕೀಯ ವ್ಯಕ್ತಿಗೆ ಅಂಗಲಾಚುವ ಅವಶ್ಯಕತೆಯೇ ಇರುವುದಿಲ್ಲ.ವಿನೋದ್ ರೆಡ್ಡಿಯವರ ವಿಶಾಲವಾದ ಮಾನವೀಯ ಹೃದಯದ ಬಾಗಿಲು,ದಿನದ 24 ಗಂಟೆಯೂ ತೆರೆದಿರುತ್ತದೆ,ತೆರೆದ ಬಾಗಿಲನು ಪ್ರವೇಶಿಸಿದರೇ ಸಾಕು.ತಾನೇ ಸ್ವಾಗತಗಾರನಾಗಿ,ಪ್ರೀತಿಯಿಂದ ಸ್ವಾಗತಿಸಿ,ಮೃದು ಧ್ವನಿಯಿಂದ ಕಷ್ಟ-ಸುಖಗಳ ಮಾತನಾಡಿಸಿ,ನಮ್ಮ ಸಮಸ್ಯೆಯನ್ನು ತಾಳ್ಮೆಯಿಂದ ಕೇಳುತ್ತಾ,ಸಮಾಧಾನಕಾರವಾಗಿ ಅಲಿಸಿ,ಸಮಸ್ಯೆಗಳಿಗೆ ಪರಿಹಾರ ನೀಡಿ,ದುಃಖಿತನಿಗೆ ಧೈರ್ಯ ತುಂಬಿ,ಅಸಹಯಕನಾದರೇ ಸ್ವಂತ ಕೈಯಿಂದಲೇ ನೆರವು ನೀಡಿ,ಅತ್ಯಂತ ಸರಳ ಸಂಸ್ಕೃತಿಯಲ್ಲಿ ವ್ಯವಹಾರಿಸಿ,ನ್ಯಾಯ ಒದಗಿಸಿ ಕೊಡುವ ಮಾನವೀಯ ಗುಣವಂತ,ಸರಳ ಸಜ್ಜನಿಕೆಯ ಅಧಿಕಾರಿ ಎಸ್ ಐ ವಿನೋದ್ ರೆಡ್ಡಿಗೆ ಸರಿಸಾಟಿಯಾದ ಇನ್ನೊಬ್ಬ ಅಧಿಕಾರಿಯಿಲ್ಲ!!.
ತನ್ನ ಕರ್ತವ್ಯ ಎಷ್ಟಿದೆ?,ಅಷ್ಟನ್ನು ಮಾತ್ರ ನಿರ್ವಹಿಸಿ ಸುಮ್ಮನಾಗದೇ,ತನ್ನ ವ್ಯಾಪ್ತಿ,ಅಂತರ,ಸಮಯದ ಮೀತಿ ಎಲ್ಲಕ್ಕಿಂತಲೂ ಮಾನವೀಯ ಸೇವೆಯೇ ಮಿಗಿಲೆಂದು ನಂಬಿ,ಕರ್ತವ್ಯ ನಿರ್ವಹಿಸುವ ಹಾಗೂ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಕಾರ್ಯವ್ಯಾಪ್ತಿಗಿಂತ ದುಪ್ಪಟ್ಟಾಗಿ,ದಿನದ 24 ಗಂಟೆಗಳ ಸಮಯವನ್ನು ಬಿಡುವಿಲ್ಲದೇ,ತನ್ನ ಜೀವದ ಹಂಗು ಸಾರ್ವಜನಿಕ ಸೇವೆಗೆ ಮೀಸಲಿಟ್ಟು,ದಿನವೊಂದಕ್ಕೆ ಕನಿಷ್ಠ 250 ಕಿಲೋಮೀಟರ್ ವರೆಗೂ ತನ್ನ ಠಾಣಾ ವ್ಯಾಪ್ತಿಯಲ್ಲಿ ಗಸ್ತು ನಿರತರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನಾವು ಒಂದೆರಡು ಪ್ರಕರಣವಲ್ಲ,ಹಲವಾರು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದೇವು.ಎಲ್ಲಾ ಪ್ರಕರಣಗಳಲ್ಲೂ ನಿಷ್ಪಕ್ಷಪಾತವಾದ ರೀತಿಯಲ್ಲಿ ತನಿಖೆ ನಡೆದಿರುತ್ತದೆ.ಇನ್ನೂ ಸಾಮಾಜಿಕ ಬದ್ದತೆ ಇರುವ ಹಲವರು ಸಂಘಸಂಸ್ಥೆಗಳ,ಧಾರ್ಮಿಕ ಮುಖಂಡರುಗಳ,ರಾಜಕೀಯ ನೇತರಾರ ಒಕ್ಕೊರಲಿನ ಏಕ ಅಭಿಪ್ರಾಯವೂ ಇದೇ ರೀತಿಯಾಗಿರುತ್ತದೆ..ಒಂದು ಠಾಣಾ ಅಧಿಕಾರಿಯ ಬಗ್ಗೆ ಎಲ್ಲಾ ಧರ್ಮದ ಜನರು,ಎಲ್ಲಾ ರಾಜಕೀಯ ಪಕ್ಷದ ನಾಯಕರು, ಎಲ್ಲಾ ಸಂಘಸಂಸ್ಥೆಗಳ ಮುಖಂಡರುಗಳೆಲ್ಲರೂ, ಏಕ ಅಭಿಪ್ರಾಯ ವ್ಯಕ್ತಪಡಿಸುವಂತಹ ಒಬ್ಬ ಸಮರ್ಥ ಅಧಿಕಾರಿಯ ಬಗ್ಗೆ ನಾವು ಇದುವರೆಗೂ ಕಂಡೆ ಇಲ್ಲ.ಪೋಲಿಸ್ ಠಾಣೆಗಳಿಂದ ನ್ಯಾಯ ಮರೀಚಿಕೆ ಎಂಬ ಅರೋಪವನ್ನು ಎಲ್ಲಾ ಸ್ಪಷ್ಟ ಸಾಕ್ಷ್ಯ ದಾರಗಳ ಸಹಿತ ಅರಬ್ಬಿ ಸಮುದ್ರಕ್ಕೆ ಎಸೆಯುವಲ್ಲಿ ರೆಡ್ಡಿ ಸಫಲರಾಗಿದ್ದಾರೆ.ರೆಡ್ಡಿಯ ಮುಂದೆ ಸಮಾನವಾದ ನ್ಯಾಯ-ನೀತಿಯೇ ಮುಖ್ಯ.ತಪ್ಪು ನಡೆದಾಗ ಅತನಿರಲಿ,ಅತನ ಹಿಂಬಗಿಲ ಬೆಂಬಲ ಎಷ್ಟೇ ಪ್ರಭಾವಿಯಾಗಿರಲಿ,ತಪ್ಪು ನಡೆಸಿದವನ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ,ಅರೋಪಿ ಯಾವುದೇ ನಿರ್ಜನ ಪ್ರದೇಶದಲ್ಲಿ ಅಡಗಿ ಕುಳಿತರು, ಪ್ರಕರಣ ದಾಖಲಿಸಿದ ಕೆಲವೇ ಗಂಟೆಗಳ ಒಳಗಡೆ ಎಡೆಮುರಿ ಕಟ್ಟಿ,ಕಾನೂನಿಕ ಕಟಕಟೆಯಲ್ಲಿ ನಿಲ್ಲಿಸುವ ಒಬ್ಬ ಸಮರ್ಥ ಅಧಿಕಾರಿಯೇ ಎಸ್ ಐ ವಿನೋದ್ ರೆಡ್ಡಿ.ಅಕ್ರಮ-ಅವ್ಯಾವಹಾರಗಳ ಮುಂದೆ ರಾಜಿಯೇ ಇಲ್ಲ,ಹಣದ ಆಸೆಗೆ ಬಗ್ಗುವುದಿಲ್ಲ,ಯಾವುದೇ ರಾಜಕೀಯ ಒತ್ತಡಗಳ ಮುಂದೆ ಕಡ್ಡಿ ಮುರಿದಂತೆ ಖಡಕ್ ಉತ್ತರ ನೀಡುವುದರಿಂದಲೇ ರೆಡ್ಡಿ ಎಲ್ಲಾ ಜನರಿಗೂ ಅತೀ ಹೆಚ್ಚು ಪ್ರಿಯರಾಗಿ,ತನ್ನ ಕರ್ತವ್ಯದ ಅತೀ ಸಣ್ಣ ಅವಧಿಯಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿ,ವಿಟ್ಲದ ಸಿಂಗಂ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ.
ಇದು ಪ್ರತಿಯೊಬ್ಬರಿಗೂ ತಿಳಿಸಬೇಕಾಗಿದೆ. ಅಂದರೇ ಇದು ಪ್ರಚಾರವಲ್ಲ??. ರಾಜ್ಯದ ಪ್ರತಿಯೊಂದು ಪೋಲಿಸ್ ಠಾಣೆಯ ಅಧಿಕಾರಿಗಳಿಗೂ ಇದು ಮಾರ್ಗದರ್ಶನವೂ,ಪಾಠವೂ ಅಗಿರುತ್ತದೆ.ಜನಸ್ನೇಹಿ ಪೋಲಿಸ್ ವ್ಯವಸ್ಥೆ ಎಂದರೇನು,ಪೋಲಿಸ್ ಇಲಾಖೆಯಲ್ಲಿ ನಿಷ್ಪಕ್ಷಪಾತ,ಸರಳತೆ,ಮಾನವೀಯತೆ ಎಂಬುವುದು ವಿಟ್ಲ ಪೋಲಿಸ್ ಠಾಣೆಯಿಂದಲೇ ಅರಂಭವಾಗಲಿ.
ಬಿಗ್ ಸೆಲ್ಯೂಟ್ ವಿಟ್ಲದ ಸಿಂಗಂ ಮಾನ್ಯ ಎಸ್ ಐ ವಿನೋದ್ ರೆಡ್ಡಿ ಸಾರ್.
ಲೇಖಕರು: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.