ಮೀಂಜ(ವಿಶ್ವಕನ್ನಡಿಗ ನ್ಯೂಸ್): ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮೀಂಜ ಪಂಚಾಯತ್ ಸಮಿತಿ ವತಿಯಿಂದ ಉಪಯೋಗಶೂನ್ಯವಾಗಿ ಶೋಚನೀಯಾವಸ್ಥೆಯಲ್ಲಿದ್ದ ಸಾರ್ವಜನಿಕ ಶೌಚಾಲಯ ಮತ್ತು ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಹಲವಾರು ವ್ಯಾಪಾರ ಮಳಿಗೆಗಳೂ, ಶಾಲೆಯೂ ನೆಲೆನಿಂತಿರುವ ಮೀಂಜ ಪಂಚಾಯತಿನ ಹೃದಯಭಾಗವಾದ ಮೀಯಪದವು ಟೌನಿನಲ್ಲಿ ಕೊಳಕು ಮತ್ತು ಮಾಲಿನ್ಯಗಳ ನಿಕ್ಷೇಪದಿಂದ ಕಾರಣದಿಂದ ಗಬ್ಬುನಾತ ಬೀರುತ್ತಿದ್ದ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವ ಸ್ಥಿತಿಯಲ್ಲಿತ್ತು ಶೌಚಾಲಯ ಮತ್ತು ಪರಿಸರ ಪ್ರಧೇಶ. ದಿನನಿತ್ಯ ಪಂಚಾಯತ್ ಕಛೇರಿ, ಕೃಷಿ ಭವನ, ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದ ಹಲವಾರು ಮಂದಿ ಇದೇ ಶೌಚಾಲಯವನ್ನೇ ಉಪಯೋಗಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ಹಲವಾರು ಬಾರಿ ತರಲಾಗಿತ್ತಾದರೂ ಯಾವುದೇ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳದ ಕಾರಣ ಎಸ್.ಡಿ.ಪಿ.ಐ ಮೀಂಜ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಶುಚೀಕರಣ ನಡೆಸಲಾಯಿತು.
ಎಸ್.ಡಿ.ಪಿ.ಐ ಯ ಈ ನಡೆಗೆ ಪ್ರದೇಶವಾಸಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಎಸ್.ಡಿ.ಪಿ.ಐ ಮೀಂಜ ಪಂಚಾಯತ್ ಅಧ್ಯಕ್ಷರಾದ ಲತೀಫ್ ಚಿಗುರುಪಾದೆ, ಕಾರ್ಯಧರ್ಶಿ ನೌಫಲ್ ಚಿಗುರುಪಾದೆ ನೇತೃತ್ವ ವಹಿಸಿದ ಪ್ರಸ್ತುತ ಶುಚೀಕರಣ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಮೀಂಜ, ಬಾಳಿಯೂರು ವಾರ್ಡಿನ ಕಾರ್ಯಕರ್ತರು ಮತ್ತು ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.