ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಅವಧಿ ಮೀರಿದ ಇಖಾಮ ಹೊಂದಿರುವವರು, ಹುರೂಬ್ ಇರುವವರು, ದಂಡ ಕಟ್ಟಲಾಗದೇ ಬಾಕಿಯಾಗಿರುವವರು ಹಾಗೂ ಮತ್ಲೂಬ್ ಆಗಿರುವ ಭಾರತೀಯರಿಗೆ ತಾಯ್ನಾಡಿಗೆ ತೆರಳುವ ಸದಾವಕಾಶ ಒದಗಿ ಬಂದಿದೆ. ಇಂತವರು ಭಾರತದ ದೂತವಾಸ ಕಚೇರಿಯ ವೆಬ್ ಸೈಟ್ ಮೂಲಕ ತಮ್ಮ ಹೆಸರು ನೋಂದಣಿ ಮಾಡವಂತೆ ಕೋರಲಾಗಿದೆ. ವೆಬ್ ಸೈಟಿನಲ್ಲಿ ತಮ್ಮ ಹೆಸರು, ಇಖಾಮ ಸಂಖ್ಯೆ, ಮೊಬೈಲ್ ಸಂಖ್ಯೆ , ಸ್ಪೋನ್ಸರ್ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗಿರುತ್ತದೆ. ನೋಂದಣಿ ಮಾಡಿದ ನಂತರ ದೂತವಾಸ ಕಚೇರಿಯ ಅಧಿಕಾರಿಗಳು ಇಂತವರನ್ನು ಸಂಪರ್ಕಿಸಿ ಪ್ರಯಾಣಕ್ಕೆ ಅಗತ್ಯವಿರುವ ದಾಖಲೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಇಂಡಿಯನ್ ಅಂಬಾಸಿ ಕಚೇರಿಯ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.