(www.vknews.com) : ಮೂಲ್ಕಿಯ ಕಾರ್ನಾಡು ಬಳಿ ಇರುವ ಮೈಮುನಾ ಫೌಂಡೇಶನ್ ( ರಿ), ಆಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಷನ್ ಸೆಂಟರ್’ ಆಶ್ರಮದಲ್ಲಿ ಉದ್ಯಮಿಯೊಬ್ಬರು ತನ್ನ 65ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಮಾದರಿ ಎನಿಸಿದ ಘಟನೆ ಮುಲ್ಕಿಯಲ್ಲಿ ನಡೆದಿದೆ.
ಸಂಸ್ಥೆಯಲ್ಲಿ ಆಶ್ರಯಿಸಿದ ಅತಿಥಿಗಳ ಜೊತೆ, ಹುಟ್ಟಿದ ಹಬ್ಬದ ಸಂಭ್ರಮವನ್ನು ಹಂಚಿಕೊಂಡ ಅಖಿಲ ಭಾರತ ವಿಮಾ ಪ್ರತಿನಿಧಿ ಸಂಘಟನೆ’ ಇದರ ರಾಜ್ಯಾಧ್ಯಕ್ಷರಾದ ರಮೇಶ್ ಕುಮಾರ್ ಎಂಬುವವರು, ದೇವನ ಅನುಗ್ರಹದಿಂದ ಇಲ್ಲಿ ಆಶ್ರಯಿಸಿರುವ ನಿರ್ಗತಿಕರ ಆಶೀರ್ವಾದದಿಂದ ನನಗೆ ಚಿರಕಾಲ ಬಾಳುವ ಯೋಗ ಭಾಗ್ಯವನ್ನು ಆ ದೇವನು ನೀಡಲಿ ಎಂದು ವಿಶೇಷ ಅತಿಥಿಗಳೊಂದಿಗೆ ಪ್ರಾರ್ಥನೆ ಮಾಡಿದರು. ಮಾತ್ರವಲ್ಲದೆ ಅವರ ಬಾಲ್ಯ ಜೀವನ ನೆನಪಾಗುವಂತೆ, ವಿಶೇಷ ಅತಿಥಿಗಳೊಂದಿಗೆ ಕೆಲವೊಂದು ಸ್ಪರ್ಧೆಯನ್ನು ಕೂಡ ಏರ್ಪಡಿಸಿ ನಿರ್ಗತಿಕರ ಮುಖದಲ್ಲಿ ನಗು ಮೂಡಿಸಿದರು.
ಅತಿಥಿಗಳಿಗೆ ಮದ್ಯಾಹ್ನದ ವಿಶೇಷ ಭೋಜನದ ವ್ಯವಸ್ಥೆಯ ನಂತರ, ಎಲ್.ಐ.ಸಿ. ಮಹಿಳಾ ವಿಭಾಗದ ಸದಸ್ಯೆ ಖ್ಯಾತ ಗಾಯಕಿ ಶ್ರೀಮತಿ ಗುಲಾಬಿ ಸುರೇಂದ್ರ’ ಇವರು, ಆಶ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು,
ಕಾರ್ಯಕ್ರಮದಲ್ಲಿ LICAOI ಮುಲ್ಕಿ ಘಟಕ ಇದರ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಸಾಲಿಯಾನ್, ಘಟಕದ ಎಲ್ಲಾ ಪದಾಧಿಕಾರಿಗಳು, ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮೈಮುನಾ ಫೌಂಡೇಶನ್ ಇದರ ಅಧ್ಯಕ್ಷ ಜನಾಬ್ ಮೊಹಮ್ಮದ್ ಆಶಿಫ್’ ರವರು ಅತಿಥಿಗಳನ್ನು ಸ್ವಾಗತಿಸಿ, ಆಶ್ರಮದ ಮುಖ್ಯಸ್ಥ ಆಪತ್ಭಾಂಧವ ಆಶಿಫ್’ ತಮ್ಮ ಆಶ್ರಮಕ್ಕೆ ಬಂದು ಬಹಳ ಸರಳ ರೀತಿಯಲ್ಲಿ ಆಶ್ರಮದ ಅತಿಥಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿದ ರಮೇಶ್ ಕುಮಾರ್ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.