(www.vknews.com) : ಆದಿ ಮಾನವನಾಗಿದ್ದ ಮನುಜ ಯುಗ ಯುಗಗಳ ಕಳೆದು ಅಂದರೆ ಶಿಲಾಯುಗ, ನವಶಿಲಾಯುಗ ಹಾಗೂ ಕಂಪ್ಯೂಟರ್ ಯುಗ ಕಳೆದಂತೆ ಕ್ರಮೇಣವಾಗಿ ಮನುಷ್ಯ ಎಂಬ ಬುದ್ದಿ ಜೀವಿಗೆ ಭುವಿಯಾಳುವ ಆಸೆ ಮೊಳಕೆಯೊಡೆಯಿತು.ಕಾಲಗತಿಸಿದಂತೆ ಅರಿಷಡ್ವರ್ಗಗಳ ಮೈದಾಳಿಸಿಕೊಂಡ ಮನುಜ ಸಕಲ ಜಲಾಚರ ಜೀವಿಗಳ ಮೇಲೂ ತನ್ನ ಹಿಡಿತ ಸಾಧಿಸಲು ಪ್ರಾರಂಭಿಸಿದ ಬೆತ್ತಲೆಯಾಗಿ ಹುಟ್ಟಿದ ಮನುಕುಲ ಬರೀ ಹೊಟ್ಟೆಗಾಗಿ ಗೆಡ್ಡೆ ಗೆಣಸುಗಳ ತಿನ್ನುತ್ತಾ ಹಸಿ ಮಾಂಸವ ಭಕ್ಷಿಸುತ ಕಾಲಕಳೆಯತೊಡಗಿದ ಅಗ್ನಿದೇವನ ಅಚಾನಕ್ ದರುಶನದಿಂದಾಗ ಮನುಜನಿಗೆ ಬೆಂದ ಮಾಂಸದ ರುಚಿಯ ಪರಿಚಯವಾಗಿ ಕಲ್ಲು,ಭರ್ಚಿ,ಕತ್ತಿ, ಗುರಾಣಿಗಳ ಹಿಡಿದು ಪ್ರಾಣಿಗಳ ಹಿಡಿದು ಬಡಿದು ಕೊಂದು ಬೆಂಕಿಯಲ್ಲಿ ಬೇಯಿಸಿ ತಿನ್ನುವ ಪರಿಪಾಠವ ಕಲಿತ ಶಿಲಾಯುಗವೂ ಮುಗಿಯಿತು ನವಶಿಲಾಯುಗವೂ ಮುಗಿತು ಕಂಪ್ಯೂಟರ್ ಯುಗಕ್ಕೆ ಕಾಲಿಟ್ಟ ನೋಡಿ ಮನುಜ ಇಲ್ಲಿಂದ ಶುರುವಾಯಿತು ನೋಡಿ ಮನುಜನ ಮರ್ಕಟ ಆಸೆಗಳು ದುರಾಸೆಗಳು ಸುಮ್ಮನಿದ್ದ ಗಿಡವನ್ನಾದರು ಅಲುಗಾಡಿಸಿ ಬರುವ ಪ್ರವೃತ್ತಿಯನ್ನು ಮನುಷ್ಯ ರೂಢಿಸಿಕೊಂಡ ಇಲ್ಲಿಂದ ಶುರುವಾಯಿತು ನೋಡಿ ಹುಚ್ಚು ಸಾಹಸಗಳು ಆಸೆಗೂ ಮೀರಿದ ಜೀವನಾವಶ್ಯಕತೆಗೂ ಮೀರಿದ ಅನ್ವೇಷಣೆಗಳು ಅಬ್ಬಾ! ಒಂದಾ ಎರಡಾ.?
” ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಬಲ್ಲ, ಸಮುದ್ರದೊಳಗೆ ಮೀನಿನಂತೆ ಈಜಬಲ್ಲ ಭೂತಳವ ತಲುಪಿ ಅನ್ವೇಷಿಸಬಲ್ಲ” ನೋಡಿ ಈ ರೀತಿಯ ಅತಿಯಾದ ಆತ್ಮವಿಶ್ವಾಸ ಮತ್ತು ಇವನ ಅನ್ವೇಶಣಾತ್ಮಕ ಮನೋಭಾವ ಬಹುತೇಕವಾಗಿ ಪ್ರಕೃತಿಯ ಮೇಲೆಯೇ ಪ್ರಯೋಗಿಸಲ್ಪಟ್ಟಿದ್ದು ಇಂದು ಮಾನವರ ಅಸಹಾಯಕ ಸ್ಥಿತಿಗೆ ಕಾರಣವಾಗಿದೆ. ಏಕೆಂದರೆ ನಮ್ಮ ಪ್ರಕೃತಿಯಲ್ಲಿಯೇ ಸಾಕಷ್ಟು ಚಿಕಿತ್ಸಾತ್ಮಕ ಗುಣಗಳಿವೆ ಇಂತಹ ಗುಣ ಹೊಂದಿದ ಪ್ರಕೃತಿಯನ್ನೇ ನಾಶಪಡಿಸಿದರೆ ಪರಿಚಯವೇ ಕಾಯಿಲೆಗಳು ವೈರಾಣುಗಳು ಉತ್ಪತ್ತಿಯಾಗುತ್ತವೆ. ಚಿಕಿತ್ಸಾತ್ಮಕ ಗುಣಗಳೊಂದಿದ ಈ ನಿಸರ್ಗವನ್ನೇ ನಾಶಪಡಿಸಿದಾಗ ಸಹಜವಾಗಿಯೇ ಈ ಕಾಯಿಲೆಗಳಿಗೆ ಕೃತಕ ಔಷಧಿಗಳ ಮೊರೆ ಹೋಗುವ ಪರಿಸ್ಥಿತಿ ಇಂದು ನಮಗೆ ಎದುರಾಗಿದೆ ಈ ಕೃತಕಗಳೆಲ್ಲವೂ ನಿರರ್ಥಕವಾಗಿವೆ ಎಂಬುದಕ್ಕೆ ಈ ಕೊರೋನಾ ವೈರಸ್ ಎಂಬ ಜೀವಂತ ನಿದರ್ಶನವೇ ಜೀವಂತ ಸಾಕ್ಷಿ .
ಈ ಭುವಿಯೆಂಬ ಉದರದೊಳಗೆ ಬೀಜವ ಬಿತ್ತಿ ಫಲವ ಪಡೆದು ಹಸಿರಿನ ಮಡಿಲಲ್ಲಿ ನೆಮ್ಮದಿಯಾಗಿ ನಿದ್ರಿಸುವ ಬದಲು ಭೂಮಿಯ ಮೇಲೆ ಚೆಂದವಾಗಿ ಬೆಳೆದಿರುವ ಮರಗಳ ಕುಡಿದು ಬುಡಮೇಲು ಮಾಡಿ ದುಡ್ಡಿನ ದಾಸನಾದ ಇಷ್ಟಕ್ಕೆ ನಿಲ್ಲಲಿಲ್ಲ ನಮ್ಮಗಳ ಹುಚ್ಚಾಟ ಗಣಿಗಾರಿಕೆಗೆ ಗಂಟುಬಿದ್ದು ಭೂಮಿಯ ಉದರದಲ್ಲಿದ್ದ ಕಲ್ಲಗಳ ಪುಡಿಮಾಡಿ ಮಲೆತು ನಿಂತ ಬೆಟ್ಟಗಳನ್ನೆ ಸಿಡಿಗುಂಡುಗಳನಿಟ್ಟು ಉಡಾಯಿಸಿ ಪುಡಿ ಪುಡಿಮಾಡಿದ ಇನ್ನೆಷ್ಟು ಸಹಿಸ್ಯಾಳು ಭೂತಾಯಿ ಸ್ವಲ್ಪ ದಿನ ಮನುಷ್ಯನಿಗೆ ಅರ್ಥಮಾಡಿಸಲು ಪ್ರತಿಭಟಿಸಿದಳು, ಕೆಲವೊಮ್ಮೆ ಪ್ರವಾಹದಂತಹ ರಕ್ಕಸ ಒಡೆತಗಳ ಕೊಟ್ಟು ಅರಿವು ಮೂಡಿಸುವ ಪ್ರಯತ್ನವ ಮಾಡಿದಳು ಆಗ ಮನುಜನ ಆಕ್ರಂದನ ಮುಗಿಲು ಮುಟ್ಟಿದಾಗ ಭೂ ತಾಯಿಯೇ ಮನಕರಗಿ ಶಾಂತವಾಗಿದ್ದಾಳೆ ಕೆಲವೊಮ್ಮೆ ಮೌನವಾಗಿಯೇ ಪ್ರತಿಭಟಿಸಿದ್ದಾಳೆ ಇದೆಲ್ಲವನ್ನೂ ಅರಿತರೂ ಮನುಷ್ಯ ಏನು ತಿಳಿಯದವನಂತೆ ಹುಟ್ಟು ಗುಣ ಸುಟ್ಟರೂ ಹೋಗದು ಎನ್ನುವಂತೆ ತನ್ನ ಹುಚ್ಚು ಸಾಹಸಗಳನ್ನು ಅವಶ್ಯಕತೆಗಿಂತಲೂ ಮೀರಿದ ಜೀವನಾವಶ್ಯಕತೆಗೂ ಮೀರಿದ ಅನ್ವೇಷಣೆಗಳನ್ನು ಮಾಡುವಲ್ಲಿ ನಿರತನಾದ.
ಬಹುಶಃ ಮನುಜ ತೀವ್ರಗತಿಯಲ್ಲಿ ಬೆಳೆಯಬೇಕು ಎಲ್ಲಾ ಗ್ರಹಳಿಗೂ ತಲುಪಿ ನೆಲೆಯೂರಬೇಕು ಈ ಸೃಷ್ಟಿಯನ್ನೇ ತನ್ನ ಮುಷ್ಟಿಯೊಳಗಡೆ ಹುದುಗಿಸಿಟ್ಟುಕೊಳ್ಳಬೇಕೇಂಬ ಕೃತಕ ಯಂತ್ರೋಪಕರಣಗಳ ಬಳಕೆಯ ಪರಿಣಾಮವೇ ಈ ದಿನದ ನಮ್ಮಗಳ ಸ್ಥಿತಿಗೆ ಕಾರಣವಾಗಿದೆ ಎಂಬುದು ನನ್ನ ಭಾವನೆ. ಭೂಮಿ ಗ್ರಹದಲ್ಲಿ ಮನುಷ್ಯನಿಗೆ ಜೀವಿಸಲು ಸಕಲ ಸವಲತ್ತುಗಳನ್ನು ಈ ವಾತಾವರಣ ಕಲ್ಪಿಸಿಕೊಟ್ಟರೂ ಮನುಷ್ಯ ತನ್ನ ಅತಿಯಾದ ಆತ್ಮವಿಶ್ವಾಸ ಹಾಗೂ ದುರಾಸೆಯಿಂದ ಚಂದ್ರ ಗ್ರಹಕ್ಕೆ ಮಂಗಳ ಗ್ರಹಕ್ಕೆ ಕಾಲಿಟ್ಟು ಅಲ್ಲಿ ವಾಸಿಸಲು ಯೋಗ್ಯವೇ ಎಂಬುದನ್ನು ಇಂದಿಗೂ ಸಹ ಸಾಕಷ್ಟು ಯಾನಗಳನ್ನು ಯಂತ್ರೋಪಕರಣಗಳ ಸಹಾಯದಿಂದ ಕೈಗೊಂಡು ಭೂಮಿ ಗ್ರಹವನ್ನು ಹಾಳುಗೆಡವಿದ್ದಲ್ಲದೇ ಈಗ ನವ ಗ್ರಹಗಳನ್ನು ಹಾಳು ಮಾಡುವ ಹುಚ್ಚು ಪ್ರಯತ್ನದಲ್ಲಿದ್ದಾನೆ ಮಾನವ. ಈಗಲಾದರೂ ಅರ್ಥ ಮಾಡಿಕೊಳ್ಳಬೇಕಿದು ನಾವುಗಳು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ ಗಾದೆ ಮಾತನ್ನು, ಮರದಲ್ಲಿ ಮಾಗಿದ ಹಣ್ಣು ಕಳಚಿ ಕೆಳಗೆ ಬೀಳುವಂತೆ ಭೂ ಗರ್ಭದಲ್ಲಿ ಹುದುಗಿರುವ ಸಂಪತ್ತು ಹೆಚ್ಚಾಗಿ ತಾನೆ ಹೊರ ಬರುತ್ತದೆ” ಇದನ್ನು ಬಿಟ್ಟು ದಿಢೀರ್ ಶ್ರೀಮಂತಿಕೆಗೆ ಜೋತು ಬಿದ್ದ ಈ ಅತೀ ಬುದ್ದಿವಂತ ಮನುಜ ಭೂಮಿಯ ಉದರಕ್ಕೆ ಕೈ ಹಾಕಿ ಗುಂಡಿ ತೋಡಿ ತಾನು ತೋಡಿದ ಗುಂಡಿಯಲ್ಲಿಯೇ ಮುಚ್ಚಿಹೋಗುವುದಂತೂ ಸತ್ಯ.!!!
ಮನುಷ್ಯನ ದೃಷ್ಟಿಕೋನವೇ ನನಗೆ ಅರ್ಥವಾಗದು ನಿಸರ್ಗವನ್ನೆಲ್ಲಾ ಸಂಪತ್ತೆಂದೇ ಭಾವಿಸಿ ಮರದ ರೆಂಬೆಯ ಮೇಲೆ ಕಳಿತು ತಾ ಕುಳಿತಿರುವ ರೆಂಬೆಯನ್ನೇ ಕಡಿಯುವ ಮೂರ್ಖತನದ ಪ್ರಯತ್ನ ಮಾಡುತ್ತಿದ್ದಾನೆ. ಈ ಪ್ರಕೃತಿಯನ್ನು ನಿರಂತರವಾಗಿ ಬಲತ್ಕಾರಗೈದು ಮರಗಳ ಕಡಿದು ಮಳೆ ಬಾರದೆ ಹೋದರೆ ಮೋಡ ಬಿತ್ತನೆ ಮಾಡಿ ಮಳೆಯನ್ನು ಬರಿಸುವ ಮೂರ್ಖ ಮನುಜನಿಗೇಕೆ ಮರ ಕಡಿಯುವ ಬದಲು ಗಿಡ ನೆಟ್ಟು ಪ್ರಕೃತಿ ಪೋಷಿಸಿ ಮಳೆ ಬೆಳೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಪ್ರಯತ್ನವನ್ನೇಕೆ ಈ ಬುದ್ದಿ ಜೀವಿ ಮಾಡುತ್ತಿಲ್ಲ ಎಂಬುದು ನನ್ನ ಮಾರ್ಮಿಕ ಪ್ರಶ್ನೆಯಾಗಿದೆ.
ಆಕಾಶದಲ್ಲಿ ಹಾರಿದರೇನು ಸಮುದ್ರದಲ್ಲಿ ಈಜಿದರೇನು ಏನೇಲ್ಲವುಗಳ ಅನ್ವೇಷಣೆಗಳ ಮಾಡಿದ್ದರೇನು??? ಕೊರೋನಾವೆಂಬ ಕಾಣದ ವೈರಾಣುವಿಗೆ ಲಸಿಕೆ ಕಂಡು ಹಿಡಿಯಲಿಕ್ಕಾಗುತ್ತಿಲ್ಲ ಎಂದರೆ ಅರ್ಥ ಮಾಡಿಕೊಳ್ಳಬೇಕಿದೆ ಮಾನವನ ಕೃತಕ ಅನ್ವೇಷಣೆಗಳು ಪ್ರಕೃತಿಯ ಮುಂದೆ ಮಂಡಿಯೂರಿವೆ ಪ್ರಕೃತಿಯಲ್ಲಿಯೇ ಆಮ್ಲಜನಕದ ಸತ್ವವಿಲ್ಲವಾಗಿದೆ ಇನ್ನೂ ಮನುಜನಿಗೆಲ್ಲಿಂದ ಪ್ರಕೃತಿ ನೀಡಲು ಸಾಧ್ಯ.??? ಕೃತಕಗಳೆಲ್ಲವೂ ನಿರರ್ಥಕವಾಗಿದೆ ಇದು ಕಟು ಸತ್ಯ ಇನ್ನಾದರೂ ಸಾವಯವ ಕೃಷಿಯತ್ತ ಮುಖ ಮಾಡಿ ಕಾಡುಗಳ ಬೆಳೆಸಿ ಜೀವನಾವಶ್ಯಕತೆಗೂ ಮೀರಿದ ಅನ್ವೇಷಣೆಗಳ ನಿಲ್ಲಿಸಿ ಯಂತ್ರೋಪಕರಣಗಳ ಬಳಕೆ ಕಡಿಮೆ ಮಾಡಿ ಶ್ರಮಜೀವಿಯಾಗಿ ನಿಸರ್ಗದೊಂದಿಗೆ ಬೆರೆತು ಈ ಕೊರೋನಾದಂತಹ ವೈರಾಣುಗಳು ಜಗತ್ತಿಗೆ ಬಾರದಂತೆ ಪ್ರಕೃತಿಯ ಚಿಕಿತ್ಸಾತ್ಮಕ ಗುಣಗಳ ಮೊರೆ ಹೋಗಬೇಕಾಗಿದೆ ಈ ಕೊರೋನಾ ಎಂಬ ಹೆಮ್ಮಾರಿ ಮನುಷ್ಯನ ಅಸ್ತಿತ್ವವನ್ನೇ ಪ್ರಶ್ನಿಸಿ ಜಾತಿ,ಮಾತು,ಪಂಥ ತಾರತಮ್ಯ ಅಸ್ಪ್ರಶ್ಯತೆ ಆಚರಿಸಿದ ಮನುಜನಿಗೆ ಸಾಮಾಜಿಕ ಅಂತರದ ಮೂಲಕ ಎಲ್ಲವನ್ನೂ ಅರ್ಥ ಮಾಡಿಸಿದೆ ಪ್ರಕೃತಿಯನ್ನು ಮೀರಿ ಮನುಷ್ಯ ಬದುಕುತ್ತಾನೆ ಎಂಬುದು ಬರೀ ಭ್ರಮೆಯಷ್ಟೇ ಮನುಷ್ಯ ಏನೇ ಅನ್ವೇಷಿಸಿದರೂ ಅವುಗಳೆಲ್ಲವೂ ಕ್ಷಣಭಂಗುರಗಳಷ್ಟೇ ಪ್ರಕೃತಿಯ ಜೊತೆ ಸಂಯೋಜನೆ ಮಾಡಿಕೊಳ್ಳುವುದೊದಂದೆ ನಮಗುಳಿದಿರುವ ದಾರಿ.
ಲೇಖಕರು : ಕೆ.ಶ್ರೀಧರ್ (ಕೆ.ಸಿರಿ) ಗ್ರಾಮ ಲೆಕ್ಕಾಧಿಕಾರಿಗಳು, ಚಾಮರಾಜನಗರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.