ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 3.95 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಸೋಮವಾರ ಚಾಲನೆ ನೀಡಿದರು.
1.75 ಕೋಟಿ ವೆಚ್ಚದ ಶೇಡಿಗುರಿ-ಮುಂಡೆಜೋರ ರಸ್ತೆ, 80 ಲಕ್ಷದ ರೂಪಾಯಿ ವೆಚ್ಚದ ಮದಕ-ಕೇದಿಗೆ ರಸ್ತೆ, 69 ಲಕ್ಷ ರೂಪಾಯಿ ವೆಚ್ಚದ ಮೊಗರ್ನಾಡು-ಪುಳಿಕುಕ್ಕು ರಸ್ತೆ, 6 ಲಕ್ಷ ರೂಪಾಯಿ ವೆಚ್ಚದ ಅಂತರ ಬೈಲು ರಸ್ತೆ, 5 ಲಕ್ಷ ರೂಪಾಯಿ ವೆಚ್ಚದ ಭಾಗೀರಥಿಕೋಡಿ-ಗಡಂಗಿನಗುಡ್ಡೆ ರಸ್ತೆ, 15 ಲಕ್ಷ ರೂಪಾಯಿ ವೆಚ್ಚದ ನಾಯಿಲ-ಕಾಪಿಕಾಡು-ಬೋರುಗುಡ್ಡೆ ರಸ್ತೆ , 5 ಲಕ್ಷ ರೂಪಾಯಿ ವೆಚ್ಚದ ನರಿಕೊಂಬು ಹಿಂದೂ ರುದ್ರಭೂಮಿ ರಸ್ತೆಯನ್ನು ಶಾಸಕ ರಾಜೇಶ್ ನಾಯಕ್ ಉದ್ಘಾಟಿಸಿದರು.
30 ಲಕ್ಷ ರೂಪಾಯಿ ವೆಚ್ಚದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ತಡೆಗೋಡೆ, 10 ಲಕ್ಷ ರೂಪಾಯಿ ವೆಚ್ಚದ ಬೋರುಗುಡ್ಡೆ ರಸ್ತೆ ಬದಿ ತಡೆಗೋಡೆ ಪ್ರಗತಿಯನ್ನು ಶಾಸಕರು ಇದೇ ವೇಳೆ ವೀಕ್ಷಿಸಿದರು.
ಈ ಸಂದರ್ಭ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸದಸ್ಯರಾದ ರಂಜಿತ್ ಕೆದ್ದೇಲು, ವಸಂತ ಭೀಮಗದ್ದೆ, ಜಯರಾಜ್ ಶಂಭೂರು, ಕಿಶೋರ್ ಶೆಟ್ಟಿ ಅಂತರ, ಉದಯ ಶಾಂತಿಲ, ಪ್ರಮುಖರಾದ ರಘು ಸಪಲ್ಯ, ಕೃಷ್ಣಾನಂದ ಮಾಣಿಮಜಲು, ರಮಾನಾಥ ರಾಯಿ, ಸುರೇಶ್ ಕೋಟ್ಯಾನ್, ಆನಂದ ಎ. ಶಂಭೂರು , ನಾರಾಯಣ ಪೂಜಾರಿ ದರ್ಖಾಸು ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.