ಕಲಬುರಗಿ(ವಿಶ್ವಕನ್ನಡಿಗ ನ್ಯೂಸ್): ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಕಲಬುರಗಿಯ ತಾಲೂಕ ಪಂಚಾಯತಿಯ ಎದುರುಗಡೆ ಪ್ರತಿಭಟನೆ ಮಾಡಲಾಯಿತು.
ಕಲಬುರಗಿ ತಾಲೂಕಿನ ತಾಜಸುಲ್ತಾನಪೂರ ಗ್ರಾಮದಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ನೋಡಿಲ್ಲ, ಕಂಬಕ್ಕೆ ವಿದ್ಯುತ್ ಇಲ್ಲ. ಸುಮಾರು ಎರಡು ವರ್ಷದಿಂದ ಗ್ರಾಮ ಪಂಚಾಯತಿಗೆ ಮನವಿ ಮಾಡುತ್ತಲೇ ಬಂದರೂ ಪಂಚಾಯತಿಯವರು ಗಮನಿಸುತ್ತಿಲ್ಲ. 20/2/2020 ರಂದು ಜಿಲ್ಲಾ ಪಂಚಾಯತ್ ಮೂಲಕ ಒತ್ತಾಯಿಸಿದರೂ ಕ್ಯಾರೆ ಅನ್ನದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಗ್ರಾಮಪಂಚಾಯತಿಗೆ ಅಲೆದು ಅಲೆದು ಚಪ್ಪಲಿ ಹರಿದರೂ ಬಜೆಟ್ ಇಲ್ಲ ಎಂಬ ಹಾರಿಕೆಯ ಹೇಳಿಕೆಗೆ ಬೇಸತ್ತು ಇಂದು ತಾಲೂಕ ಪಂಚಾಯತ್ ಮುಂದೆ ಪ್ರತಿಭಟನೆ ಹಮ್ಮಕೊಂಡಿದ್ದೇವು.
ತಾಲೂಕುಪಂಚಾಯತ್ ಕಾರ್ಯನಿರ್ವಹಾಧಿಕಾರಿ ಮಾನಪ್ಪ ಕಟ್ಟಿಮನಿಯವರು ನಮ್ಮ ಸಮಸ್ಯೆಗೆ ಸ್ಪಂದಿಸಿ ನಾಳೆ ತಾಜಸುಲ್ತಾನಪೂರಕ್ಕೆ ಬಂದು ಸಮಸ್ಯೆ ಬಗೆಹರಿಸುವದಾಗಿ ತಿಳಿಸಿದರು.
ನೀಲಾ ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷರು, ಅಶ್ವಿನಿ ಮದನಕರ, ಮಹಾನಂದ, ರೇಖಾ, ಶಶಿಕಲಾ, ಸುರೇಖಾ, ಮಹಾದೇವಿ ಮತ್ತು ಗ್ರಾಮದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.