ದೋಹಾ, ಕತಾರ್ (www.vknews.com) : ಕರೋನಾ ಮಹಾಮಾರಿಯ ದಿಷ್ಪರಿಣಾಮ ಪ್ರಪಂಚದೆಲ್ಲೆಡೆ ಹರಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಕೊಲ್ಲಿ ದೇಶದಲ್ಲೊಂದಾದ ಕತಾರಿನಲ್ಲಿ ವಾಸಿಸುತ್ತಿರುವ ನೂರಾರು ಕನ್ನಡಿಗರು ಕೆಲಸ ಕಳೆದುಕೊಂಡು ಮಾತ್ರುಭೂಮಿಗೆ ಹಿಂದುರುಗಲು ಹವಣಿಸುತ್ತಿದ್ದರು. ಭಾರತ ಸರಕಾರದ ನೆರವಿನಿಂದ ’ವಂದೇ ಭಾರತ ಆಯೋಗ’ ದಿಂದ, ದಿನಾಂಕ 22-ಮೇ-2020 ರಂದು ಮೊದಲ ವಿಮಾನದಲ್ಲಿ 177 ಜನರನ್ನು ಬೆಂಗಳೂರಿಗೆ ಕರೆತರಲಾಗಿತ್ತು. ದಿನಾಂಕ 15-ಜೂನ್-2020 ರಂದು, ಪ್ರತ್ಯೇಕ ಖಾಸಗಿ ಸೇವೆಯ ವಿಮಾನದಲ್ಲಿ 185 ಜನರನ್ನು ಹಿಂದಿರುಗಲು ಅವಕಾಶಮಾಡಲಾಗಿತ್ತು.
ಇಂದು, ದಿನಾಂಕ 30-ಜೂನ್-2020, ಹೊರಡಲಿರುವ ವಿಮಾನ ಕತಾರಿನ ಹಮಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟೀಯ ವಿಮಾನ ನಿಲ್ದಾಣಕ್ಕೆ 180 ಜನರನ್ನು ಕರೆತರಲಿದೆ. ವೃದ್ಧರು, ಹಸುಕೂಸುಗಳು, ಗರ್ಭಿಣಿಯರು, ಅತೀವ ಅನಾರೊಗ್ಯದಿಂದ ನರಳುತ್ತಿರುವವರು ಮತ್ತು ಕೆಲಸ ಕಳೆದುಕೊಂಡು ಜೀವನೋಪಾಯವಿಲ್ಲದೆ ಮಾತ್ರೂಭೂಮಿಗೆ ಮರಳುತ್ತಿರುವವರು ಈ ಮೂರನೆ ವಿಮಾನದಲ್ಲಿ ಸಂಚರಿಸುತ್ತಿದ್ದಾರೆ.
ಈ ವಿಮಾನವನ್ನು ಕತಾರಿನ ದೂತಾವಸದಡಿಯಲ್ಲಿ, ಐ.ಸಿ.ಬಿ.ಎಫ಼್ (ಭಾರತೀಯ ಸಮುದಾಯ ಹಿತೈಷಿ ವೇದಿಕೆ)ಯ ನೇತೃತ್ವದಲ್ಲಿ, ’ಕರ್ನಾಟಕ ಸಂಘ ಕತಾರ್’ ಅಯೋಜಿಸಿರುವುದು ಗಮನಾರ್ಹ ವೈಶಿಷ್ಟ್ಯತೆ. ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ಕತಾರಿನ ಕರ್ನಾಟಕ ಸಂಘ ಜನರ ದುಃಖ ಅಂತರಾಳವನ್ನರಿತು ಪ್ರತಿಸ್ಪಂದಿಸುತ್ತಿರುವುದು ಹೆಮ್ಮೆಯ ವಿಚಾರ, ಪ್ರಶಂಸಾರ್ಹ.
5 ಜನ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುತ್ತಿರುವುದು ಸಂಘದ ಉದಾರತೆಯನ್ನು ಪ್ರತಿಬಿಂಬಿಸುತ್ತದೆ. ಖಾಸಗಿ ವಿಮಾನ ಸೇವೆಯಾದರೂ, ’ವಂದೇ ಭಾರತ ನಿಯೋಗ’ ದ ವಿಮಾನದಷ್ಟೆ ಶುಲ್ಕವನ್ನು ಪ್ರಯಾಣಿಕರಿಂದ ಪಡೆಯುತ್ತಿರುವುದು ಮತ್ತೊಂದು ವಿಶೇಷ. ಈ ವಿಮಾನವು ಕೇವಲ ಸಹಾಯಕ್ಕೆ, ನಿರಾಶ್ರೀತರ ನೆರವಿಗಾಗಿಯೇ ಹೊರತು, ವಾಣಿಜ್ಯ ವ್ಯವಹಾರ ಮಾಡಿ ಲಾಭ ಪಡೆಯುವುದಕ್ಕಲ್ಲವೆಂದು ಸಾರಿ ಹೇಳುತ್ತಿದೆ ’ಕತಾರಿನ ಕರ್ನಾಟಕ ಸಂಘ’.
ಬೆಂಗಳೂರಿನಲ್ಲಿ, ಬಂದಿಳಿದ ನಂತರ ಪಾಲಿಸಬೇಕಾದ ಸಕಲ ಸೂಚನೆಗಳನ್ನು, ನಿಯಮಾನುಸಾರ ಪ್ರಯಾಣಿಕರಿಗೆ ತಿಳಿಹೇಳಿ ವಿವರಿಸಲಾಗಿದೆ. ಆಗಮನದ ನಂತರ ಪ್ರಯಾಣೀಕರ ನಿಗದಿತ ತಂಗುದಾಣದಲ್ಲಿ ಸೀಮಿತ ಅವಧಿಗೆ ಇರಬೇಕಾಗುತ್ತದೆ, ತಂಗುದಾಣದ ಖರ್ಚು-ವೆಚ್ಚವನ್ನು ಪ್ರಯಾಣಿಕರೇ ಹೊರಲಿದ್ದಾರೆ ಎಂದು ಕತಾರಿನ ಮೂಲಗಳು ತಿಳಿಸಿವೆ.
ಕತಾರಿನಲ್ಲಿ ನೆಲೆಸಿರುವ ಈ ಕೆಳಕಂಡ ಮಹನೀಯರ ಪರಿಶ್ರಮ, ಸಾಹಸ ಹಾಗು ನಿಸ್ವಾರ್ಥ ಸೇವಾಮನೋಭಾವದಿಂದಾಗಿ ಬೆಂಗಳೂರಿಗೆ ತೃತೀಯ ವಿಮಾನ ಸೇವೆ ಕಲ್ಪಿಸಲು ಸಾಧ್ಯವಾಯಿತು,
> ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಜಂಟಿ ಕಾರ್ಯದರ್ಶಿ, ಐ.ಸಿ.ಬಿ.ಎಫ಼್ ಕತಾರ್ > ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಕತಾರ್ > ಶ್ರೀ ನಾಗೇಶ್ ರಾವ್, ಅಧ್ಯಕ್ಷರು, ಕರ್ನಾಟಕ ಸಂಘ ಕತಾರ್, > ಶ್ರೀ ಮುರಳೀಧರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘ ಕತಾರ್, > ಶ್ರೀ ಸಂದೀಪ್ ರೆಡ್ಡಿ, ಮಾಜಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘ ಕತಾರ್ ಮತ್ತು > ಕತಾರ್ ಕರ್ನಾಟಕ ಸಂಘದ ಪದಾಧಿಕಾರಿಗಳು
ಈ ವಿಶೇಷ ವಿಮಾನವನ್ನು ನನಸಾಗಿಸಲು ತಮ್ಮ ಅಮೂಲ್ಯವಾದ ಸಮಯ, ಪರಿಶ್ರಮ ಹಾಗೂ ಬೆಲೆಕಟ್ಟಲಾಗದ ಕೊಡುಗೆಯನ್ನು ನೀಡಿರುವವರನ್ನು ಈ ಮೂಲಕ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳಲಾಗುತ್ತಿದೆ,
> ಶ್ರೀ ಸದಾನಂದಗೌಡ, ಕೇಂದ್ರ ಮಂತ್ರಿಗಳು – ರಾಸಾಯನ ಹಾಗು ಗೊಬ್ಬರ ಮಂತ್ರಾಲಯ, > ಶ್ರೀ ಗೋವರ್ಧನ್, ಶ್ರೀ ಸದಾನಂದಗೌಡರ ಆಪ್ತ ಕಾರ್ಯದರ್ಶಿಗಳು, > ಶ್ರೀ ರವಿಕುಮಾರ್, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, > ಶ್ರೀ ಕಾರ್ತಿಕ್. ಕೆ.ಆರ್. ವಿಶೇಷ ಅಧಿಕಾರಿ, ಕರ್ನಾಟಕ ರಾಜ್ಯ ಸರಕಾರ > ಶ್ರೀಮತಿ ಮೀನಾ ನಾಗರಾಜ್, ಐ.ಎ.ಎಸ್ ಅಧಿಕಾರಿ, ಪ್ರತ್ಯಾವರ್ತನ ಚಟುವಟಿಕೆಗಳ ನೋಡಲ್ ಅಧಿಕಾರಿಣಿ, > ನಿರ್ದೇಶಕರು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ,
ಮತ್ತು ಇವರುಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಗುತ್ತಿದೆ,
> ಮಾನ್ಯ ಶ್ರೀ ಪಿ. ಕುಮರನ್, ಕತಾರ್ ದೇಶಕ್ಕೆ ಭಾರತೀಯ ರಾಯಭಾರಿಗಳು > ಶ್ರೀ ಬಾಬುರಾಜನ್, ಅಧ್ಯಕ್ಷರು, ಐ.ಸಿ.ಬಿ.ಎಫ಼್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.