(www.vknews.com) : ಪರಿಸರ ನಾಶ ಮಾಡಿ ಕಾಂಕ್ರೀಟ್ ಕಾಡನ್ನು ಬೆಳೆಸುವುದರಿಂದ ಕಾಡುಗಳಲ್ಲಿ ಹಾಯಾಗಿದ್ದ ವೈರಾಣುಗಳು ಮತ್ತು ಇತರ ಜೀವಿಗಳು ನಾಡಿಗೆ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಪರಿಸರ ರಕ್ಷಿಸಿ, ಗಿಡ, ಮರ ನೆಟ್ಟು ಪೋಷಿಸಿದಲ್ಲಿ ಮಾತ್ರ ಸಾಂಕ್ರಾಮಿಕ ರೋಗ ಬರದಂತೆ ತಡೆಗಟ್ಟಬಹುದು ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲಿ ಮೋಹನ ಚೂಂತಾರು ಅವರು ಅಭಿಪ್ರಾಯಪಟ್ಟರು.
ದಿನಾಂಕ:28-06-2020 ನೇ ಭಾನುವಾರದಂದು ಮೂಡಬಿದಿರೆಯ ಕಡಲಕೆರೆ ಸಮೀಪದ ಸೈಂಟ್ ಇಗ್ನೀಷಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಡಲಕೆರೆ ಇಲ್ಲಿ ಪ್ರೇರಣಾ ಟ್ರಸ್ಟ್, ಮೂಡಬಿದಿರೆ ಗೃಹರಕ್ಷಕ ದಳ ಮತ್ತು ಶಾಲಾಭಿವೃದ್ಧಿ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ|| ಚೂಂತಾರು ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇರಣಾ ಟ್ರಸ್ಟ್ ಇದರ ಅಧ್ಯಕ್ಷರಾದ ಪ್ರೊ. ಯಮ್. ವಾಸುದೇವ ಭಟ್ ವಹಿಸಿದ್ದರು.
ಪ್ರಾಸ್ತಾವಿಕವಾಗಿ ವನಮಹೋತ್ಸವದ ಪ್ರಾಮುಖ್ಯತೆ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಶ್ರೀ ಮಾತಾಜಿ ವತ್ಸಲಾ ಅವರು ಮಾತನಾಡಿದರು. ಘಟಕಾಧಿಕಾರಿ ಶ್ರೀ ಪಾಂಡಿರಾಜ್ ವಂದನಾರ್ಪಣೆ ಮಾಡಿದರು. ಗೃಹರಕ್ಷಕಿ ವಿನುತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸುಮಾರು 50 ಮಂದಿ ಗೃಹರಕ್ಷಕರಿಗೆ ಸಸಿ ವಿತರಣೆ ಮಾಡಲಾಯಿತು ಮತ್ತು ಆಯುಷ್ ಇಲಾಖೆಯಿಂದ ನೀಡಿದ ಅರ್ಸೆನಿಕಮ್ ಅಲ್ಬಮ್-30 ಎಂಬ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ಎಲ್ಲಾ ಗೃಹರಕ್ಷಕರಿಗೆ ಉಚಿತವಾಗಿ ಹಂಚಲಾಯಿತು. ಪ್ರೇರಣಾ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ ಮತ್ತು ಟ್ರಸ್ಟ್ನ ಕಾರ್ಯದರ್ಶಿಯಾದ ಶ್ರೀ ಕೇಶವ ಹೆಗ್ಡೆ ಮತ್ತು ಸದಸ್ಯರುಗಳಾದ ಶ್ರೀ ರಾಜೇಶ ಬಂಗೇರಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 20 ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು. ಪ್ರತಿ ಗೃಹರಕ್ಷಕರಿಗೆ ಒಂದರಂತೆ ಎಲ್ಲಾ 50 ಗೃಹರಕ್ಷಕರಿಗೆ ಗಿಡ ವಿತರಣೆ ಮಾಡಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.