(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿದ ಸಮಯವನ್ನು ಪೋಲು ಮಾಡದೇ, ಪ್ರೊ. ಎಂ. ಅಬೂಬಕರ್ ತುಂಬೆ ಅವರು ಹಲವಾರು ಪ್ರಮುಖ ಹದೀಸ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.
ಹದೀಸ್ ಗಳ ಕನ್ನಡ ಅನುವಾದಗಳನ್ನು ವಿಶ್ವ ಕನ್ನಡಿಗ ನ್ಯೂಸ್ ತಮ್ಮ ಓದುಗರಿಗಾಗಿ “ಹದೀಸ್ ದರ್ಶನ” ಎಂಬ ತಲೆಬರಹದಲ್ಲಿ “ಪ್ರತಿ ಬುಧವಾರ” ಪ್ರಕಟಿಸುತ್ತಿದೆ… ತಪ್ಪದೆ ಓದಿ…
حَدَّثَنَا أَبُو مَعْمَرٍ، قَالَ حَدَّثَنَا عَبْدُ الْوَارِثِ، قَالَ حَدَّثَنَا خَالِدٌ، عَنْ عِكْرِمَةَ، عَنِ ابْنِ عَبَّاسٍ، قَالَ ضَمَّنِي رَسُولُ اللَّهِ صلى الله عليه وسلم وَقَالَ ” اللَّهُمَّ عَلِّمْهُ الْكِتَابَ ”
9.ಇಬ್ನ್ ಅಬ್ಬಾಸ್ (ರ) ರವರಿಂದ ಉಲ್ಲೇಖ: ಒಮ್ಮೆ ಪ್ರವಾದಿ (ﷺ) ನನ್ನನ್ನು ಅಪ್ಪಿಕೊಂಡು, “ಓ ಅಲ್ಲಾ! ಇವರಿಗೆ ಜ್ಞಾನವನ್ನು (ಕುರಾನ್) ನೀಡಿ ಕರುಣಿಸು” ಎಂದು ಹೇಳಿದರು. ಎಂತಹ ಸಂತೋಷದ ಸಂದರ್ಭ, ಕಾರುಣ್ಯದ ಕಡಲಾಗಿರುವ ಪ್ರವಾದಿಯವರ ಈ ಪ್ರಾರ್ಥನೆ ಇಬ್ನ್ ಅಬ್ಬಾಸ್(ರ) ರವರಿಗೆ ಒಂದು ಮಹಾ ವರದಾನವೇ ಆಗಿತ್ತು. ಪವಿತ್ರ ಕುರಾನಿನ ಅಧ್ಯಯನ ನಡೆಸುದರೊಂದಿಗೆ ಅದನ್ನು ಇನ್ನಿತರರಿಗೆ ಬೋಧನೆಯನ್ನು ಮಾಡುವ ಸದಾವಕಾಸ ಲಭ್ಯವಾಯಿತು ಮಾತ್ರವಲ್ಲ ಅದರಿಂದಾಗಿ ಅವರು ಸ್ವರ್ಗದ ವಾರೀಸುದಾರರಲ್ಲಿ ಒಳಗೊಂಡರು.
حَدَّثَنِي أَبُو كَامِلٍ الْجَحْدَرِيُّ، حَدَّثَنَا عَبْدُ الْوَاحِدِ، حَدَّثَنَا الأَعْمَشُ، ح قَالَ وَحَدَّثَنَا أَبُو بَكْرِ بْنُ أَبِي شَيْبَةَ، وَأَبُو كُرَيْبٍ قَالاَ حَدَّثَنَا أَبُو مُعَاوِيَةَ، عَنِ الأَعْمَشِ، عَنْ إِبْرَاهِيمَ التَّيْمِيِّ، عَنْ أَبِيهِ، عَنْ أَبِي ذَرٍّ، قَالَ قُلْتُ يَا رَسُولَ اللَّهِ أَىُّ مَسْجِدٍ وُضِعَ فِي الأَرْضِ أَوَّلُ قَالَ ” الْمَسْجِدُ الْحَرَامُ ” . قُلْتُ ثُمَّ أَىٌّ قَالَ ” الْمَسْجِدُ الأَقْصَى ” . قُلْتُ كَمْ بَيْنَهُمَا قَالَ ” أَرْبَعُونَ سَنَةً وَأَيْنَمَا أَدْرَكَتْكَ الصَّلاَةُ فَصَلِّ فَهُوَ مَسْجِدٌ ” . وَفِي حَدِيثِ أَبِي كَامِلٍ ” ثُمَّ حَيْثُمَا أَدْرَكَتْكَ الصَّلاَةُ فَصَلِّهْ فَإِنَّهُ مَسْجِدٌ ” .
10.ಅಬು ಧರ್ (ರ) ವರದಿ. ನಾನು ಹೇಳಿದೆ: ಅಲ್ಲಾಹುವಿನ ಪ್ರವಾದಿಯವರೇ, ಭೂಮಿಯ ಮೇಲೆ ಮೊದಲು ಯಾವ ಮಸೀದಿಯನ್ನು ಸ್ಥಾಪಿಸಲಾಯಿತು? ಅವರು ಹೇಳಿದರು: ಪವಿತ್ರವಾದ ಅಲ್ಮಸ್ಜಿದುಲ್ ಅಲ್-ಹರಾಮ್. ನಾನು (ಮತ್ತೆ) ಕೇಳಿದೆ: ನಂತರ ಮುಂದಿನದು ಯಾವುದು? ಆಗ ಅವರು ಹೇಳಿದರು: ಅದು ಅಲ್ಮಸ್ಜಿದುಲ್ ಅಕ್ಸಾ. ನಾನು (ಮತ್ತೆ) ಕೇಳಿದೆ: ಅವುಗಳ ಸ್ಥಾಪನೆಯ ನಡುವೆ ಅಂತರ ಎಷ್ಟು ಸಮಯ/ವರ್ಷ? ಪ್ರವಾದಿ (ಸ) ಹೇಳಿದರು: ಅದು ನಲವತ್ತು ವರ್ಷಗಳಾಗಿವೆ. ಮತ್ತು ನಮಾಜಿನ ಸಮಯ ಬಂದಾಗಲೆಲ್ಲಾ ಅಲ್ಲಿ ನಮಾಜನ್ನು ನಿರ್ವಹಿಸಿರಿ,ಎಂದು ಹೇಳಿದರು, ಏಕೆಂದರೆ ಅದು ಮಸೀದಿಯಾಗಿದೆ; ಮತ್ತು ಅಬು ಕಾಮಿಲ್ (ರ) ವರದಿಯ ಹದೀಸ್ನಲ್ಲಿ (ಪದಗಳು ಹೀಗಿವೆ): “ನಮಾಜಿನ ಸಮಯ ಬಂದಾಗಲೆಲ್ಲಾ ನಮಾಜನ್ನು ನಿರ್ವಹಿಸಿರಿ,ಏಕೆಂದರೆ ಅದು ಮಸೀದಿಯಾಗಿದೆ (ನಿಮಗಾಗಿ).
ಕನ್ನಡಕ್ಕೆ ಅನುವಾದ : ಪ್ರೊ. ಎಂ. ಅಬೂಬಕರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.