ಜೆದ್ದಾ(www.vknews.in): ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಸುಮಾರು ಮೂರು ತಿಂಗಳಿನಿಂದ ಸಾರ್ವಜನಿಕರಿಗೆ ವಿಧಿಸಿದ್ಧ ಮಸ್ಜಿದುಲ್ ಹರಂ ಪ್ರವೇಶ ನಿಷೇಧವನ್ನು ಹಿಂಪಡೆದು ವಿಶ್ವಾಸಿಗಳಿಗೆ ಉಮ್ರಾಕ್ಕೆ ಅವಕಾಶವನ್ನು ಕಲ್ಪಿಸುವ ಸಿದ್ಧತೆಗಳು ನಡೆಯುತ್ತಿದೆ. ಮಕ್ಕಾ ಹಾಗೂ ಮದೀನಾ ಮೇಲ್ವಿಚಾರಣಾ ಸಮಿತಿ ಈ ಕುರಿತು ಮಾಹಿತಿ ನೀಡಿದ್ದು, ಕೊವಿಡ್ ಸುರಕ್ಷತಾ ಕ್ರಮಗಳು ಹಾಗೂ ಸಾಮಾಜಿಕ ಅಂತರವನ್ನು ಪಾಲಿಸುವುದರ ಮೂಲಕ ಹಿಂದಿನ ಶೇಖಡಾ 40 ರಷ್ಟು ಜನರಿಗೆ ಮಾತ್ರ ಉಮ್ರಾ ನಿರ್ವಹಣೆಗೆ ಅವಕಾಶ ಕಲ್ಪಿಸಲು ಮುಂದಾಗಿದೆ.
ಮತಾಫ್ ನಲ್ಲಿ ಬ್ಯಾರಿಕೇಡ್ ಗಳನ್ನು ಸ್ಥಾಪಿಸುವ ಮೂಲಕ ಮೂರು ಸಾಲುಗಳಲ್ಲಿ ವಿಶ್ವಾಸಿಗಳು ತವಾಫ್ ನಿರ್ವಹಿಸಲು ಅನುಮತಿಸುವುದು, ಮಕ್ಕಳು ಹಾಗೂ ಹಿರಿಯರಿಗೆ ಎರಡನೇ ಅಂತಸ್ತಿನಲ್ಲಿ ಉಮ್ರಾ ನಿರ್ವಹಣೆಗೆ ಅವಕಾಶ, ಎರಡು ಮೀಟರ್ ಸಾಮಾಜಿಕ ಅಂತರವನ್ನು ಪಾಲಿಸುವುದು, ಸಫಾ ಮರ್ವಾದಲ್ಲಿ ಜನದಟ್ಟಣೆಯಿರದಂತೆ ನೋಡಿಕೊಳ್ಳುವುದು, ಮಾಸ್ಕ್ ಧರಿಸುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಲಾಗಿದೆ.ಮಸ್ಜಿದುಲ್ ಹರಂನ ಪ್ರವೇಶ ದ್ವಾರಗಳಲ್ಲಿ ಸ್ವಯಂಚಾಲಿತ ದೇಹದ ಉಷ್ಣಾಂಶ ಪತ್ತೆಹಚ್ಚುವ ಯಂತ್ರ ಅಳವಡಿಸಿದ್ದು, 38’ ಕ್ಕಿಂತ ಅಧಿಕ ದೇಹ ತಾಪಮಾನವಿರುವವರಿಗೆ ಹಾಗೂ ಕೊವಿಡ್ ಸೋಂಕಿತರೊಂದಿಗೆ ಸಂಪರ್ಕವಿರುವವರಿಗೆ ಹರಂ ಪ್ರವೇಶವನ್ನು ನಿಷೇಧಿಸಲಾಗಿದೆ. ಹರಂ ಪ್ರವೇಶಿಸುವ ಪ್ರತಿಯೊಬ್ಬರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗುವುದು. ಉಮ್ರಾ ನಿರ್ವಹಿಸಿದ ನಂತರ ಮತಾಫ್ ಅಥವಾ ಸಫಾ ಮರ್ವಾದಲ್ಲಿ ತಂಗಲು ಅವಕಾಶವಿರುವುದಿಲ್ಲ. ಮೇಲಿನ ಈ ಎಲ್ಲಾ ಕ್ರಮಗಳನ್ನು ಪಾಲಿಸುವ ಮೂಲಕ ವಿಶ್ವಾಸಿಗಳಿಗೆ ಶೀಘ್ರವೇ ಉಮ್ರಾ ನಿರ್ವಹಣೆಗೆ ಅನುಮತಿಸಲಾಗುವುದೆಂದು ಮಸ್ಜಿದುಲ್ ಹರಂ ಮೇಲ್ವಿಚಾರಣಾ ಸಮಿತಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.