ಮಂಗಳೂರು (www.vknews.com) : ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯಎಲ್.ಕೆ.ಜಿ. ಮತ್ತುಯು.ಕೆ.ಜಿ. ವಿದ್ಯಾರ್ಥಿಗಳನ್ನು ಕೊವೀಡ್ -19ರ ಸಾಂಕ್ರಾಮಿಕರೋಗದ ಹಿನ್ನಲೆಯಲ್ಲಿಅವರನ್ನುತಮ್ಮ ಮನೆಯಲ್ಲಿಅಧ್ಯಯನ ನಡೆಸುವ ವಿನೂತನ ವಿಧಾನಕ್ಕೆ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ.ಕೆ.ಸಿ. ನಾೈಕ್ಇಂದು ಚಾಲನೆ ನೀಡಿದರು. ಅಧ್ಯಾಪಕರು ವಿದ್ಯಾರ್ಥಿಗಳನ್ನುಭಯ ಮುಕ್ತರನ್ನಾಗಿ ಸಿದ್ಧಗೊಳಿಸುವ ಯೋಜನೆಗೆಪೋಷಕರು ಶ್ಲಾಘನೆ ವ್ಯಕ್ತ ಪಡಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರಾದಡಾ.ಕೆ.ಸಿ. ನಾೈಕ್ ಮಾತನಾಡಿಇದೊಂದುಕ್ರಿಯಾತ್ಮಕವಾದ ವಿಧಾನವಾಗಿದೆ.
ವಿದ್ಯಾರ್ಥಿಗಳನ್ನು ವಿದ್ಯೆಯಜೊತೆಅವರಲ್ಲಿಅಡಗಿರುವ ಪ್ರತಿಭೆಯನ್ನುಗುರುತಿಸುವ ವರ್ಕ್ಶೀಟ್ ಮತ್ತುಇತರೆಕಲಿಕೆಯ ವಸ್ತುಗಳನ್ನು ವಿದ್ಯಾರ್ಥಿಗಳ ಮನೆಗೆ ತಲುಪಿಸುವ ಮೂಲಕ ಅವರನ್ನು ಸಿದ್ಧಗೊಳಿಸುವ ಯೋಜನೆಇದಾಗಿದೆಎಂದು ಹೇಳಿದರು.
ಪೋಷಕರ ಪ್ರೀತಿಯಿಂದ ಬೆಳೆದಿರುವ ಮಕ್ಕಳು ಶಾಲೆಯಲ್ಲಿ ಶಿಕ್ಷಕರ ಆತ್ಮೀಯತೆಯನ್ನು ಬಯಸುತ್ತಾರೆ. ಇಂತಹಕೊವೀಡ್ ಕೊವೀಡ್-19ರ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರು ವಿನೂತನವಾದಯೋಜನೆಯನ್ನುತಯಾರುಮಾಡಿ ಮಕ್ಕಳಿಗೆ ಯಾವುದೇ ತರದ ತೊಂದರೆಯಾಗಬಾರದು ಎಂಬ ಉದ್ದೇಶದೊಂದಿಗೆಅವರಆತ್ಮಸ್ಥೆರ್ಯ ಹೆಚ್ಚಿಸುವಕೌಶಲ್ಯಆಧಾರಿತ ವಿಧಾನವನ್ನು ಪರಿಚಯಿಸಿದರು. ಇದು ಮಕ್ಕಳ ಬೆಳವಣಿಗೆಗೆ ಪೂರಕವಾಗುವುದರ ಜೊತೆ ಮಕ್ಕಳು ಮನೆಯಿಂದ ಹೊರಗಡೆ ಬಾರದ ಹಾಗೆ ನೋಡಿಕೊಳ್ಳಲು ಉಪಯುಕ್ತವಾಗಲಿದೆಎಂದು ಸಂಸ್ಥೆಯ ಸಂಚಾಲಕಿ ನೀಮಾ ಸಕ್ಸೇನಾಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಪ್ರಧಾನ ಸಲಹೆಗಾರರಮೇಶ್ ಕೆ, ಅಭಿವೃದ್ಧಿಅಧಿಕಾರಿ ಪ್ರಖ್ಯಾತ್ರೈ, ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮಾತ್, ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಪ್ರಭಾಕರಜಿ.ಎಸ್, ಮತ್ತು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.