ಬಂಟ್ವಾಳ (www.vknews.com) : ವಿಶ್ವದಾಧ್ಯಂತ ವ್ಯಾಪಿಸಿರುವ ಮಹಾ ಮಾರಿ ಕೋವಿಡ್-19 ಕೊರೋನ ವೈರಸ್ ನಿಂದಾಗಿ ದೇಶಾಧ್ಯಂತ ಲಾಕ್ ಡೌನ್ ಘೋಷನೆಯಾದಂದಿನಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಮದ್ರಸ ಅಧ್ಯಾಪಕರುಗಳ ಕುಟುಂಬಕ್ಕೆ ನೆರವಾಗಲು ಸರಕಾರ ಹಾಗೂ ಸಂಘ ಸಂಸ್ಥೆಗಳು ಮುಂದಾಗಬೇಕಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ ಮೆಂಟ್ ಫೋರಂ ಇದರ ರಾಜ್ಯ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜೀಪ ಆಗ್ರಹಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಇದೀಗ ಲಾಕ್ ಡೌನ್ ಸಡಿಲಿಕೆಯಿಂದಾಗಿ ಪರಿಸ್ಥಿತಿ ಸ್ವಲ್ಪ ಮಟ್ಟಿಗಾದರೂ ಸುದಾರಿಸುತ್ತಿವೆ,
ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ತಮ್ಮ ದೈನಂದಿನ ಸಂಪಾದನೆಯತ್ತ ಮರಳುತ್ತಿರುವುದರಿಂದ ತಮ್ಮ ದೈನಂದಿನ ಜೀವನವನ್ನು ಸುದಾರಿಸುತ್ತಿದ್ದಾರೆ, ಆದರೆ ಮದರಸ ಅಧ್ಯಾಪಕರುಗಳ ಗೋಳನ್ನು ಇಂದು ಕೇಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಜಮಾಅತ್ ಸಮಿತಿಗಳು ತಮ್ಮ ಮದ್ರಸ ಅಧ್ಯಾಪಕರುಗಳನ್ನು ಕೆಲಸದಿಂದ ವಜಾಮಾಡಿದೆ, ಇನ್ನುಳಿದ ಜಮಾಅತ್ ಸಮಿತಿಯವರು ತಮ್ಮ ಮದ್ರಸ ಅಧ್ಯಾಪಕರುಗಳಿಗೆ ಸರಿಯಾದ ಸಂಬಳವನ್ನೇ ನೀಡುತ್ತಿಲ್ಲ, ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಿಗಿಂತ ಕಡಿಮೆ ಸಂಬಳದಲ್ಲಿ ಇರುವಂತಹ ಒಂದು ಸಮೂಹವಿದ್ದರೆ ಅದು ಮದ್ರಸ ಅಧ್ಯಾಪಕರುಗಳು ಮಾತ್ರ, ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಮದ್ರಸ ಅಧ್ಯಾಪಕರುಗಳು ತಮಗೆ ಸಿಗುತ್ತಿರುವ ಅತ್ಯಲ್ಪ ವೇತನದಿಂದ ಅತ್ಯಂತ ಕಷ್ಟದಲ್ಲಿ ತಮ್ಮ ಸಂಸಾರವನ್ನು ಸಾಗಿಸುತ್ತಾ ತಮ್ಮ ಕುಟುಂಬದ ಔಷದೋಪಚಾರ, ಮಕ್ಕಳ ವಿಧ್ಯಾಭ್ಯಾಸ ಹಾಗೂ ಇನ್ನಿತರ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಿದ್ದರು, ಆದರೆ ಲಾಕ್ ಡೌನ್ ನಿಂದಾಗಿ ಹಲವಾರು ಮದ್ರಸ ಅಧ್ಯಾಪಕರುಗಳು ತಮ್ಮ ಕೆಲಸವನ್ನು ಕಳಕೊಂಡಿದ್ದಾರೆ, ಇನ್ನುಳಿದ ಮದ್ರಸ ಅಧ್ಯಾಪಕರುಗಳು ಮದ್ರಸಗಳು ಮುಚ್ಚಿರುವುದರಿಂದಾಗಿ ವೇತನವೂ ಇಲ್ಲದೇ ಕಂಗಾಲಾಗಿದ್ದಾರೆ, ಈ ಬಗ್ಗೆ ಕರ್ನಾಟಕ ಸರಕಾರ, ರಾಜ್ಯ ವಕ್ಫ್ ಮಂಡಳಿ ಕೂಡಲೇ ಎಚ್ಚೆತ್ತು ಮದ್ರಸ ಅಧ್ಯಾಪಕರುಗಳ ಕುಟುಂಬ ನಿರ್ವಹಣೆಗಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಸಂಘ ಸಂಸ್ಥೆಗಳೂ ಮದ್ರಸ ಅಧ್ಯಾಪಕರುಗಳಿಗೆ ಸಹಾಯ ಹಸ್ತವನ್ನು ನೀಡಬೇಕೆಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ರಾಜ್ಯ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.