(www.vknews.com) : ಹಿರಿಯ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ . ಬಿಂಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ಒಂದೇ ದಿನದಲ್ಲಿ ನಡೆಯುತ್ತದೆ ಅವರ ಸ್ಮರಣಾರ್ಥವಾಗಿ ಹಾಗೂ ಅವರನ್ನು ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು..
ಆರೋಗ್ಯ ಸರಿಯಾಗಿ ಇರುವವರೆಗೂ ವೈದ್ಯರ ಮಹತ್ವ ಅರ್ಥ ಆಗುವುದಿಲ್ಲ ಆರೋಗ್ಯ ಕೆಟ್ಟಗ ವೈದ್ಯರ ಮಹತ್ವ ಅರ್ಥ ಆಗುತ್ತೆ . ವೈದ್ಯರ ಒಂದು ಸ್ವಾತಂತ್ವದ ಮಾತು ದೈರ್ಯ ತುಂಬುತ್ತದೆ..
ವೈದ್ಯೋ ನಾರಾಯಣ ಹರಿಃ ಎನ್ನುವ ಮಾತಿದೆ ವೈದ್ಯರಿಲ್ಲದ ಜಗತ್ತನ್ನು ಎಣಿಸಲೂ ಯಾರಿಂದಲೂ ಸಾಧ್ಯವಿಲ್ಲ ನಮ್ಮ ಜೀವ ಉಳಿಸುವ ಅಪತ್ಬಂದವನಂತೆ ಕಾಪಾಡುವ ವೈದ್ಯರಿಗೆ ಶುಭ ಹಾರೈಸೋಣ..
ಸಮಾಜಕ್ಕೆ ಹಾಗೂ ಜನರಿಗೆ ವೈದ್ಯರ ಪಾತ್ರ ಅವರ ಪ್ರಾಮುಖ್ಯತೆ ಮತ್ತು ಜವಾಬ್ದಾರಿಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡಿರುತ್ತದೆ.. ವೈದ್ಯರ ಕೆಲಸ ಪ್ರವೃತ್ತಿ ಜವಾಬ್ದಾರಿ ಹಾಗೂ ಪ್ರಮುಖ್ಯತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯವಿದೆ .. ಈ ಉದ್ದೇಶದಿಂದಲೇ ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಪ್ರತಿ ವರ್ಷ ಜುಲೈ 01 ರಂದು ಆಚರಿಸಲಾಗುತ್ತದೆ..
ವೈದ್ಯರು ರೋಗಿಯ ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೇ ಸಮಜದ ಆರೋಗ್ಯವನ್ನು ಕಾಪಾಡುತ್ತಾರೆ , ರೋಗಿಯ ಜೀವ ಉಳಿಸುವುದಕ್ಕಾಗಿ ವೈದ್ಯರು ಕೊನೆ ಕ್ಷಣದವರೆಗೂ ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ.. ಆಸ್ಪತ್ರೆಗೆ ಕರೆತಂದ ಎಲ್ಲಾ ರೋಗಿಗಳನ್ನು ಬದುಕಿಸಲು ವೈದ್ಯರೇನು ಆಯುಷ್ಯ ಕೊಡುವ ದೇವರಲ್ಲ ರೋಗಕ್ಕೆ ಮದ್ದುಂಟೇ ವಿನಃ ಆಯುಷ್ಯಕ್ಕೆ ಮದ್ದಿಲ್ಲ ಹಾಗೆಂದು ವೈದ್ಯರಿಂದ ತಪ್ಪುಗಳು ಆಗುವುದಿಲ್ಲ ಎಂದೇನಿಲ್ಲ ವೈದ್ಯರ ನಿರ್ಲಕ್ಯದಿಂದ ಬೇಕಾದಷ್ಟು ಅನಾಹುತಗಳು ಆಗಿವೆ.. ಸಾಕಷ್ಟು ಮೃತ ಪಟ್ಟಿರುವ ಉದಾಹರಣೆಳಿವೆ ಆದರೆ ಈಗೀಗ ವೈದ್ಯ ಕ್ಷೇತ್ರವೂ ವ್ಯಾಪರೀಕರಣ ಆಗಿದೆ .. ವೈದ್ಯರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಸಂಯಮ, ತಾಳ್ಮೆ , ಸಹನೆಯಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಬೇಕು..
ವೈದ್ಯರು ದಿನದ 24 ಗಂಟೆಯೂ ಸೈನಿಕರಂತೆ ರೋಗಿಗಳ ಸೇವೆ ಮಾಡುತ್ತಾರೆ ಕಷ್ಟ ಬಂದಾಗ ವೆಂಕಟರಮಣ ಅಂತ ಆರೋಗ್ಯ ಕೆಟ್ಟಗ ವೈದ್ಯರಲ್ಲಿಗೆ ಹೋಗಿ ಹೇಗಾದರೂ ಮಾಡಿ ಖಾಯಿಲೆ ವಾಸಿ ಮಾಡಿ ಎಂದು ಬೇಡುತ್ತೇವೆ ವೈದ್ಯರು ಸಹ ತಮ್ಮೆಲ್ಲಾ ಶ್ರಮ ಅನುಭವದಿಂದ ರೋಗಿಯನ್ನು ಉಳಿಸುವ ಪ್ರಯತ್ನ ಮಾಡುತ್ತಾರೆ ಆದರೆ ರೋಗಿಯ ಆಯುಷ್ಯ ಯಾರಿಂದಲೂ ಹೆಚ್ಚಿಸಲು ಸಾಧ್ಯವಿಲ್ಲ ಅಂತ ಸಂದರ್ಭದಲ್ಲಿ ರೋಗಿಯ ಸಾವಿನ ಜೊತೆಗೆ ವೈದ್ಯರು ನೈತಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುತ್ತಾರೆ ತಮ್ಮ ಸೇವೆಯ ಬಗ್ಗೆ ಶಪಿಸಿಕೊಳ್ಳುತ್ತಾರೆ ಅಥವಾ ತಮ್ಮ ಸೇವೆಯಿಂದ ಹಿಂದೇಟು ಹಾಕಿದ ಹಲವಾರು ನಿದರ್ಶನಗಳು ಇವೆ ..
ಇಂತಹ ಸಂದರ್ಭದಲ್ಲಿ ವೈದ್ಯರಿಗೂ ಮಾನಸಿಕ ಸ್ಥೈರ್ಯವನ್ನು ಕೂಡ ತುಂಬ ಬೇಕಾಗಿರುವುದು ಜನ ಸಾಮಾನ್ಯರ ಕರ್ತವ್ಯ ಕೂಡ ಆಗಿರುತ್ತದೆ .. ವೈದ್ಯರ ಕೆಲಸಕ್ಕೆ ಕೊರತೆ ಇಲ್ಲ ಸಮಾಜಕ್ಕೆ ವೈದ್ಯರ ಕೊರತೆ ಇದೆ.. ಪ್ರತಿಯೊಂದು ವೃತ್ತಿಗಳಲ್ಲಿಯೂ ಮಾನವನ ಜೀವ ಉಳಿಸುವುದು ನೋವಿಗೆ ಪರಿಹಾರ ಒದಗಿಸುವುದನ್ನು ಮಾಡುತ್ತಾರೆ..! ಆದರೆ ಅತ್ಯಂತ ಕ್ಲಿಷ್ಟವಾದ ಅನಿವಾರ್ಯ ಅಪಾಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ಸೇವೆಯ ಅಗತ್ಯ ಬೀಳುತ್ತದೆ ದುರದೃಷ್ಟ ವೆಂದರೆ ಜನರು ಅವರನ್ನೇ ಬೇಗ ಮರೆಯುತ್ತಾರೆ ..
ಇಂಜಿನಿಯರ್ ಕೆಟ್ಟು ಹೋಗಿರುವ ಮೇಷನ್ ರಿಪೇರಿ ಮಾಡಿದರೆ ವೈದ್ಯರು ಚಾಲನೆಯಲ್ಲೇ ಇರುವ ಮಾನವನ ಮೆಷಿನ್ ಅನ್ನು ರಿಪೇರಿ ಮಾಡುತ್ತಾರೆ ಇಂಥ ಪ್ರತಿಭೆ ಇರುವ ವೈದ್ಯರು ನಮ್ಮ ದೇಶದಲ್ಲಿ ಅದೆಷ್ಟೋ ಇದ್ದಾರೆ ಹಾಗೆ ನಮ್ಮ ದೇಶದ ವೈದ್ಯರುಗಳು ವಿದೇಶಲ್ಲಿ ಉತ್ತಮ ಸ್ಪೆಷಾಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಇದು ನಿಜಕ್ಕೂ ವೈದ್ಯಕೀಯ ರಂಗದ ವಿಷಧಾನಿಯ ಸಂಗತಿಯು ಹೌದು ನಮ್ಮ ದೇಶದಲ್ಲೂ ವೈದ್ಯಕೀಯ ಪ್ರತಿಭೆಗಳಿಗೆ ಉತ್ತಮ ಮನ್ನಣೆ ದೊರಯಬೇಕು ಮುಂದಿನ ದಿನಗಳಲ್ಲಿ ..
ಕೆ.ಜಿ.ಸರೋಜಾ ನಾಗರಾಜ್
ಇತ್ತೀಚೆಗೆ ಪ್ರಾರಂಭವಾದ ಕರೋನಾ ಸೋಂಕಿನ ವಿರುದ್ಧ ಹಗಲಿರುಳು ತೊಡೆ ತಟ್ಟಿ ಸಾವಿರಾರು ವೈದ್ಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಒಂದೇ ಒಂದು ದಿನ ರಜೆ ಇಲ್ಲದೆ ಕರೋನಾ ಪಿಡುಗಿನ ವಿರುದ್ಧ ಕಠಿಣ ಸಂದರ್ಭದಲ್ಲಿ ಹೊರಡುತ್ತಿರುವುದನ್ನು ಕಂಡಾಗ ವೈದ್ಯರ ಪಾತ್ರದ ಮಹತ್ವವನ್ನು ನಾವುಗಳು ಶ್ಲಾಘಿಸಲೇ ಬೇಕು..
ಎಲ್ಲಾ ವೈದ್ಯರಿಗೂ ವೈದ್ಯ ದಿನಾಚರಣೆಯ ಶುಭಾಶಯಗಳೊಂದಿಗೆ ಜೀವ ಉಳಿಸುವ ಡಾಕ್ಟರ್ ನಿಮಗೊಂದು ಸಲಾಂ..
– ಕೆ.ಜಿ.ಸರೋಜಾ ನಾಗರಾಜ್, ಪಾಂಡೋಮಟ್ಟಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.