(www.vknews.com) : ಇಂದು ಜುಲೈ,1. ಕರ್ನಾಟಕದ ಮೊದಲ ವಾರ್ತಾ ಪತ್ರಿಕೆ “ಮಂಗಳೂರು ಸಮಾಚಾರ” (1843) ಪ್ರಾರಂಭವಾದ ದಿನ, ಈ ದಿನವನ್ನು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಪತ್ರಿಕೆ ಎಂಬುದು ಅದು ಬಿಳಿ ಹಾಳೆಯಲ್ಲಿ ಕಪ್ಪು ಅಕ್ಷರ,ಬಣ್ಣದ ಚಿತ್ರಗಳಲ್ಲ, ಅದೆಷ್ಟೋ ಸುಖ-ದುಃಖಗಳ ಭಾವನೆಯ ಸೆರಗನ್ನ ತನ್ನಲ್ಲಿ ಹಾಸಿಕೊಂಡು, ಗಲ್ಲಿಯಿಂದ ಹಿಡಿದು ದಿಲ್ಲಿಯನ್ನು ದಾಟಿ ಅಖಂಡ ಭೂಮಿಯನ್ನೇ ಸುತ್ತಿ ಬರುವ ಶಕ್ತಿಯನ್ನು ಹೊಂದಿರುವ ವಜ್ರಾಯುಧವೇ ಈ ಪತ್ರಿಕೆ.
ಪತ್ರಿಕೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಅಥವಾ ಆಯಾಮ ಎಂದೇ ಪರಿಗಣಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೇ ಅಥವಾ ಅದಕ್ಕಿಂತಲೂ ಪ್ರಬಲವಾದ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ. ಈ ಮೇಲಿನ ಮೂರು ಅಂಗಗಳ ಉತ್ತಮ ಸಾಧನೆಗಳನ್ನು, ಕಾರ್ಯವೈಖರಿಗಳನ್ನು ಜೊತೆಗೆ ಹುಳುಕುಗಳ ವಸ್ತು ನಿಷ್ಠೆ ವರದಿ ಗಳನ್ನು ಜನರಿಗೆ ತಲುಳುಸುವ ಸಾಧನವೇ ಪತ್ರಿಕೆಗಳು.
ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು, ಪತ್ರಕರ್ತರನ್ನು, ಪತ್ರಿಕಾ ಸ್ವಾತಂತ್ರ್ಯವನ್ನು ಧಮನಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ವಸ್ತುನಿಷ್ಠವಾದ ವರದಿಗಳಿಗೆ ಅಡ್ಡಗಾಲು ಹಾಕುವುದು, ಪತ್ರಕರ್ತರನ್ನು ಧಮನಿಸುವುದು, ಅವರ ಹತ್ಯೆಗೆ ಯತ್ನಿಸುವುದು ಮುಂತಾದ ಘಟನೆಗಳು ದಿನನಿತ್ಯ ಕೇಳಿ ಬರುತ್ತಿವೆ. ಇದನ್ನೆಲ್ಲಾ ನಿವಾರಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರತಿವರ್ಷ ಜುಲೈ 1.ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ದಿನದಂದು ಪತ್ರಿಕಾ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯನ್ನು ನೀಡಿದವರಿಗೆ ಪ್ರಶಸ್ತಿಗಳನ್ನು ಕೂಡಾ ನೀಡಲಾಗುತ್ತದೆ.
ಸಮಾಜದ ಏಳಿಗೆಗಾಗಿ ಸದಾ ಶ್ರಮಿಸುವ ಪತ್ರಿಕೆಗಳು ನಾಡಿನ ಒಳಿತಿಗೆ ಇರುವ ಬೆಳಕು. ಅಂತಹ ಬೆಳಕನ್ನು ಕೊಟ್ಟ ಎಲ್ಲಾ ಪತ್ರಕರ್ತ ಬಂಧುಗಳಿಗೆ ಸಮಸ್ತ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
ಲೇಖನ: ಅದ್ದಿ ಬೊಳ್ಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.