ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): “ಸೋರುತಿಹುದು ಮನೆಯ ಮನೆಯ ಮಾಳಿಗೆ ಅಜ್ಞಾನದಿಂದ” ಕವಿವಾಣಿಯನ್ನು ಇಲ್ಲಿ ಸ್ವಲ್ಪ ತಿದ್ದಿದರೆ “ಸೋರುತಿಹುದು ಮಹಿಷಮರ್ದಿನಿಯ ಆಲಯ” ಎಂದು ಹೇಳೋಕು ದುಃಖ ಹಾಗು ಬೇಸರವಾಗುತ್ತದೆ. ಮೂರೂ ಗ್ರಾಮದ ಅಧಿದೇವತೆಯಾದ ಧರಣಿ ದೇವಿಯ ಮುತ್ತಿನ ಮಣಿಯಂತೆ ರಾರಾಜಿಸುವ ಸಹ್ಯಾದ್ರಿಯ ತಪ್ಪಲಿನಲ್ಲಿ ಮುಂದೆ ಬರುವಾಗ ಸಿಗುವ ಪಟ್ಟಣವೇ ಹೆಬ್ರಿ. ಅಲ್ಲೇ ಮುಂದೆ 2 ಕಿಲೋ ಮೀಟರ್ ಬಂದಾಗ ಬಯಲಿನ ಮದ್ಯೆ ಪ್ರಶಾಂತವಾದ ವಾತಾವರಣದಲ್ಲಿ ಕಂಗೊಳಿಸುವ ಜಗನ್ಮಾತೆಯ ಸನ್ನಿದಾನ. ಪುರ್ವಾಬಿಮುಖವಾಗಿ ದುಷ್ಟ ಮಹಿಷಾಸುರನ ಮೆಟ್ಟಿ ನಿಂತ ಮೂರ್ತಿ ನಯನ ಮನೊಹರ. ನಂಬಿ ಬಂದ ಭಕ್ತರ ಇಂಬನ್ನು ಕೊಡುವ ತ್ರೈಲೋಕ ಜನನಿ ಮಹಾ ತಾಯಿ ಶ್ರೀ ಮಹಿಷಮರ್ದಿನಿ ಎಂಬ ನಾಮದಿಂದ ಕಂಗೊಳಿಸುತ್ತಾಳೆ.
ಕ್ಷೇತ್ರ ಪರಿಚಯ:
ಹಿಂದೆ ತ್ರೇತಾಯುಗದಲ್ಲಿ ರಾವಣನ ಸೇನಾನಿ ಖರಾಸುರ ಈಶ್ವರನ ಪರಮಭಕ್ತ. ಆತನು ಭೂಲೋಕದಲ್ಲಿ ಅಲ್ಲಲ್ಲಿ ಶಿವಲಿಂಗವನ್ನು ಸ್ಥಾಪನೆ ಮಾಡುತ್ತ ಪೂಜಿಸುತ್ತಿದ್ದನು. ಹಾಗೆ ಶಹರ ಪಟ್ಟಣದಲ್ಲಿ ಸಹ ಒಂದು ಲಿಂಗವನ್ನು ಪ್ರತಿಷ್ಠೆ ಮಾಡಿ ಪೂಜಿಸುತ್ತಿದ್ದನು. ಅವನ ಮಡದಿ ಕುಂಭಮುಖಿ ಪರಮೇಶ್ವರಿಯ ಭಕ್ತಳು. ಅವಳ ಸಂತೋಷಕ್ಕಾಗಿ ಶ್ರೀ ದುರ್ಗೆಯನ್ನು ಭೂಲೋಕದಲ್ಲಿ ಪ್ರತಿಷ್ಠೆ ಮಾಡುತ್ತಾನೆ. ಹಾಗೆಯೇ ಸಪ್ತಕ್ಷೇತ್ರದಲ್ಲಿ ಒಂದಾದ ಶಹರ ಪಟ್ಟಣ(ಈಗಿನ ಚಾರ) ದಲ್ಲಿ ಒಂದು ಲಿಂಗವನ್ನು ಹಾಗೂ ಮಹಿಷಾಸುರಮರ್ದಿನಿಯ ವಿಗ್ರಹವನ್ನು ಪ್ರತಿಷ್ಠೆ ಮಾಡುತ್ತಾನೆ. ನಂತರ ಪಾಳು ಬಿದ್ದ ಮೂರ್ತಿಗೆ ಕಲೆಕೊಟ್ಟು ಶ್ರೀ ರಾಮನ ಭಕ್ತೆ ಶಬರಿ ತಾಯಿಯ ಅನುಜ ಶೌಬರ ಮುನಿಯು ಪ್ರತಿಷ್ಠೆ ಮಾಡಿ ದಿನ ಪುಜಾಕೈಂಕರ್ಯವನ್ನು ಮಾಡುತಾನೆ. ಉತ್ತರಾಯಣದ ಪರ್ವಕಾಲದಲ್ಲಿ ಪ್ರತಿಷ್ಠೆಯನ್ನು ಕಾಲನುಕ್ರಮದಲ್ಲಿ ವಾರ್ಷಿಕ ಜಾತ್ರೆಯನ್ನು ಮಾಡುತ್ತಾರೆ. ಕಾಲಗರ್ಭದಲ್ಲಿ ಬಾರಕೂರಿನ ದೊರೆ ತಿಮ್ಮರಸ(ಅರ್ಥಾತ್ ಇಲ್ಲಿನ ಪಳೆಗಾರ)ನಾದ ತಿಮ್ಮರಸ ಬಾರಕೂರಿನ ಜಯ ಪಾಂಡ್ಯರನ್ನು ಸೋಲಿಸಿ ಅಲ್ಲಿನ ಸಿಂಹಾಸನಾರುಡನಾಗಿದ್ದನು. ಶ್ರೀ ದೇವಿಯ ದೇಗುಲವನ್ನು ಪುನರ್ ನಿರ್ಮಾಣ ಮಾಡಿದ್ದನು. ಷಹರಾ ಪಟ್ಟಣವನ್ನು ಬಾರಕೂರು ಸಂಸ್ಥಾನದ ಎರಡನೇ ರಾಜಧಾನಿಯಾಗಿ ತಿಮ್ಮರಸ ಮಾಡುತ್ತಾನೆ. ಬಾರಕೂರಿನಲ್ಲಿ ಇರುವಂತೆ ಎಲ್ಲಾ ಸವಲತ್ತುಗಳು ದೇಗುಲಗಳು, ಬಸಿದಿಗಳು, ನೂರೊಂದು ಕೆರೆಗಳು, ಮಾಸ್ತಿ ಕಲ್ಲುಗಳು, ಎಲ್ಲವು ಷಹರಾ(ಚಾರ)ದಲ್ಲಿ ಇವೆ. ನಂತರ ತಿಮ್ಮರಸನು ಮಹಿಷಮರ್ದಿನಿ ಅಮ್ಮನವರಲ್ಲಿ ಕೆಂಡೋತ್ಸವ ಮೊದಲಾದ ಉತ್ಸವವನ್ನು ಮಕರ ಸಂಕ್ರಾತಿಯ ಪರ್ವಕಾಲದಲ್ಲಿ ನಡೆಸಿದನು. ಹೀಗೆ ನಂಬಿ ಬಂದ ಭಕ್ತರನ್ನು ಉದ್ದರಿಸುತಾ ಯುಗ ಯುಗಗಳಲ್ಲೂ ಅಬಿವೃದ್ಧಿ ಹೊಂದುತ್ತಾ ಶ್ರೀ ಚಾರ ಮಹಿಷಮರ್ದಿನಿ ಅಮ್ಮನವರು ಸಪ್ತ ಮಹಾ ಕ್ಷೇತ್ರದಲ್ಲಿ ಒಂದಾಗಿದೆ. ಮಕರ ಸಂಕ್ರಮಣದ ಪುಣ್ಯದಿನದಲ್ಲಿ ನಡೆಯುವ ಏಳು ಅಲಯದಲ್ಲಿ ಕೆಂಡೋತ್ಸವವು ಇಲ್ಲಿಯೂ ವಿಜ್ರಂಭಣೆಯಿಂದ ನಡೆಯುತ್ತದೆ.
ಆದರೆ ಈಗ ದೇವಿಯ ಗರ್ಭಗುಡಿಯು ಹಾಗು ಪುನರ್ ಅಷ್ಟಬಂಧ ಬ್ರಹ್ಮಕಲಶವಾಗಿ ಸುಮಾರು 28 ರಿಂದ 30 ವರುಷಗಳೇ ಸಂಧಿದೆ. ಆದರೆ ಕೆಲವು ವರುಷದಿಂದ ವರುಷ ದೇಗುಲದ ಲೆಕ್ಕ ಪಾತ್ರ ಸರಿಯಿಲ್ಲದೆ ದೇಗುಲದಲ್ಲಿ ನಿತ್ಯಪೂಜೆ ಬಿಟ್ಟರೆ ಉತ್ಸವದ ದಿನಗಳಲ್ಲಿ ಮಾತ್ರ ಅಚ್ಚುಕಟ್ಟಿನ ಜಾತ್ರೆ ನಡೆಯುತ್ತಿತ್ತು. ಅಷ್ಟು ಹಿಂದಿನ ಆಡಳಿತ ಅವ್ಯವಹಾರ ನಡೆಯುತ್ತಿತ್ತು. ಇದನ್ನರಿತ ಮುಜರಾಯಿ ಹಾಗು ಧಾರ್ಮಿಕ ದತ್ತಿ ಇಲಾಖೆಯು ಕಳೆದ 2017ನೇ ಮಕರ ಸಂಕ್ರಾಂತಿಯ ಶುಭ ಪುಣ್ಯ ದಿನದಂದು ಚಾರ ಮಹಿಷಮರ್ದಿನಿಯ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಸರಕಾರದ ಪ್ರತಿನಿಧಿ ಗ್ರಾಮ ಲೆಕ್ಕಿಗರು ಹಿಡಿದರು. ಕಳೆದ 25 ವರುಷ ಒಂದು ಸಣ್ಣ ಅಭಿವೃದ್ಧಿ ಕಾಣದ ದೇಗುಲ ಕೇವಲ 2018 ಮತ್ತು 2019ರ ಸಾಲಿನಲ್ಲಿ ಆಡಳಿತ ಅಧಿಕಾರಿಗಳು ಊರ ಪರವೂರ ಭಕ್ತಾಭಿಮಾನಿರಾದ ಧಾನಿಗಳಿಂದ ಹಾಗು ದೇವಸ್ಥಾನದ ಪರಿಚಾರಕರ ಸಹಾಯದಿಂದ ದೇವಸ್ಥಾನ ದೇವರ ಮೂರ್ತಿಗೆ ಸುಮಾರು 2ರಿಂದ 3ಲಕ್ಷದ ವೆಚ್ಚದ ರಜತ ಪ್ರಭಾವಳಿ, ಹಾಗೆಯೇ ಒಳಸುತ್ತಿನ ನಡೆಯ ಸುತ್ತಿಗೆ ಅರ್ಧ ತಗಡು ಚಪ್ಪರ, ಮತ್ತೆ ದೇವಸ್ಥಾನದ ಒಳಸುತ್ತಿನ ಗ್ರಾನೈಟ್ ಕಲ್ಲು ಹಾಸುವಿಕೆ, ಸುತ್ತ ಪೌಳಿಯ ನೆಲಕ್ಕೆ ಟೈಲ್ ಹಾಸುವಿಕೆ, ಹೀಗೆ ದೇವಸ್ಥಾನದ ಹೊರಾಂಗಣ ವಠಾರದ ವಿಸ್ತಾರವಾಗಿದೆ.
ಸೋರುತ್ತಿರುವ ಶ್ರೀದೇವಿಯ ಗರ್ಭಗುಡಿ
ಜಗನ್ಮಾತೆಯ ಸನ್ನಿಧಿಯಲ್ಲಿ ಕೇವಲ ಎರಡು ಮೂರೂ ವರುಷದಲ್ಲಿ ಹೀಗೆ ಸುಮಾರು ಅಭಿವೃದ್ಧಿ ಕಾರ್ಯಗಳು ನಡೆದರೂ, ಮುಖ್ಯವಾಗಿ ಮಳೆಗಾಲದಲ್ಲಿ ದೇಗುಲದ ಗರ್ಭಗುಡಿಯು ಮಾತ್ರ ಸೋರುತ್ತಿರುವುದು. ತುಂಬಾ ಬೇಸರ ಹಾಗು ದುಃಖದ ಸಂಗತಿ. ಪುರಾಣದ ಹಿನ್ನೆಲೆ ಹೊಂದಿರುವ ಈ ದೇಗುಲ ಯುಗ ಯುಗಾಂತರದಲ್ಲೂ ನಂಬಿ ಬಂದ ಭಕ್ತರ ಇಷ್ಟಾರ್ಥವನ್ನು ಪರಿಹರಿಸುವ ಜಗನ್ಮಾತೆ ಚಾರ ಮಹಿಷಮರ್ದಿನಿಗೆ ಆ ವರುಣ ದೇವನೇ ನೇರ ಜಲ ಅಭಿಷೇಕ ಮಾಡುತ್ತಾನೆ. ಆ ಗರ್ಭಗುಡಿಯು ಖೇಧವಾಗಿ ಹಾಳಾಗಿರುವುದು ಬರುವ ಊರ ಪರವೂರ ಭಕ್ತಾದಿಗಳಿಗೆ ಸ್ವಲ್ಪ ಮಟ್ಟಿಗೆ ಗೊತ್ತಿದೆ. ಇದನ್ನು ಸರಕಾರದ ಈಗಿನ ಆಡಳಿತ ಅಧಿಕಾರಿಗಳು ತಮ್ಮ ಧಾರ್ಮಿಕ ಧತ್ತಿ ಇಲಾಖೆ ಹಾಗು ಮುಜರಾಯಿ ಇಲಾಖೆಯಾ ಗಮನಕ್ಕೆ ಆಡಳಿತ ಅಧಿಕಾರಿಯಾದ ಗ್ರಾಮಲೆಕ್ಕಿಗರು ತಂದಿರುತ್ತಾರೆ. ಈ ಊರಿನಲ್ಲಿ ಹೆಚ್ಚಾಗಿ ಎಲ್ಲರ ಮನೆಯು ಸೋರುದಿಲ್ಲ. ಎಲ್ಲರ ಮನೆಯು ಗಟ್ಟಿಯಾದರೆ ಊರಿನ ಗ್ರಾಮದೇವತೆ ಮಹಿಷಮರ್ಧಿನಿ ಅಮ್ಮನವರ ಗರ್ಭಗುಡಿ ಮಾತ್ರ ಸೋರುತ್ತಿರುವುದು, ಕಳಂಕ, ಬೇಸರ ಹಾಗು ದುಃಖದ ಸಂಗತಿಯಾಗಿದೆ. ಇಂತಹ ಸಂಗತಿಗಳು ಇಡೀ ಚಾರ ಊರಿಗೆ ಕಳಂಕ ತಂದ ಹಾಗು ಬೇಸರ ಮತ್ತು ದುಃಖದ ವಿಷಯವನ್ನು ಊರ ಪರವೂರ ಮುಂದೆ ಲೇಖನದ ಮೂಲಕ ತಿಳಿಯ ಪಡಿಸುವೆನೆಂದರೆ, ಈ ವರುಷ ಇತಿಹಾಸ ನಿರ್ಮಿಸಿದ ದುಷ್ಟಕರೋನವೆಂಬ ಮಹಾಮಾರಿ ರೋಗ ಲೋಕಕಂಠಕವಾಗಿ ಮೆರೆಯುತ್ತಿದೆ. ಹೀಗೆ ಸರಕಾರದ ಮುಜರಾಯಿ ಹಾಗು ಧಾರ್ಮಿಕ ದತ್ತಿ ಇಲಾಖೆ ಹಾಗು ಪರವೂರಿನ ಭಕ್ತರರು ದಾನಿಗಳು ಹೆಚ್ಚಿನ ಧನ ಸಹಾಯ ನಿರೀಕ್ಷಿಸಲು ಸಾಧ್ಯವಾಗದೆ ಇರುವುದರಿಂದ, ಊರಿನ ಎಲ್ಲಾ ಮನೆ ಮನ ಬೆಳಗುವ ದೇವಿ ಚಾರ ಮಹಿಷಮರ್ಧಿನಿ ಅಮ್ಮನವರ ಶಿಲಾ ಮಯ ಗರ್ಭಗುಡಿಗೆ ಕಟ್ಟಲು ಆದಷ್ಟು ಹೆಚ್ಚು ಊರಿನ ದಾನಿಗಳು, ಶ್ರೀಮಂತರು, ಬಡವರು, ಮಧ್ಯಮವರ್ಗದವರು ಎನ್ನದೆ ಗ್ರಾಮದ ಪ್ರತಿಯೊಂದು ಮನೆಯ ಹಣವನ್ನು ಸೇವಾರೂಪದಲ್ಲಿ ಪಡೆದು ಬರುವ ಉತ್ತರಾಯಣದ ಪರ್ವಕಾಲದಲ್ಲಿ ಶಿಲಾಮಯ ಗರ್ಭಗುಡಿಗೆ ಶ್ರೀ ಚಾರ ಮಹಿಷಮರ್ಧಿನಿ ಅಮ್ಮನವರ ಪುನರ್ ಅಷ್ಟಬಂಧ ಬ್ರಹ್ಮಕಲಶೋತ್ಸವವಾಗಲಿ ಎಂದು ಶ್ರೀ ದೇವರಲ್ಲಿ ನಡೆಸಿಕೊಳ್ಳುವಂತೆ ನಾವೆಲ್ಲರೂ ಪ್ರಾರ್ಥಿಸೋಣ.
ಚಾರ ಪ್ರದೀಪ ಹೆಬ್ಬಾರ್ (ಶ್ರೀ ದೇವಿಯ ಸೇವಕ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.