ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ದೇಶಾದ್ಯಂತ ಲಾಕ್ಡೌನ್ ಹೇರಿಕೆಯಿಂದಾಗಿ ಜನ ಜೀವನ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತದ್ದು, ಇದರ ಪರಿಣಾಮವು ಈಗ ಖಾಸಗೀ ಶಾಲಾ ಕಾಲೇಜಿನ ಶಿಕ್ಷಕರಿಗೆ ಮತ್ತು ಸರಕಾರಿ ಅತಿಥಿ ಉಪನ್ಯಾಸಕರ ಮೇಲೆ ಕೂಡ ಬೀರಿದೆ. ಇದರೊಂದಿಗೆ ರಾಜ್ಯದಲ್ಲಿ ಸುಮಾರು ಮೂವತ್ತೈದು ಸಾವಿರಕ್ಕೂ ಹೆಚ್ಚು ಖಾಸಗೀ ಶಿಕ್ಷಕರ ಭವಿಷ್ಯವು ಆತಂಕದಲ್ಲಿದೆ ಅಲ್ಲದೇ ಸರಕಾರಿ ಅತಿಥಿ ಉಪನ್ಯಾಸಕರು ವೇತನವಿಲ್ಲದೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸರಕಾರ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಶಿಕ್ಷಕರಿಗೆ ಶೀಘ್ರದಲ್ಲೇ ಯೋಜನೆಗಳನ್ನು ಪ್ರಕಟಿಸಿ ಅವರಿಗೆ ನೆರವಾಗಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಕೂಡ ಮಹತ್ತರವಾದದ್ದು, ಶೈಕ್ಷಣಿಕ ವರ್ಷ ಕೊನೆಯಾಗುತ್ತಿರುವ ವೇಳೆ ಸಂಸ್ಥೆಗಳು ಅತಿಥಿ ಶಿಕ್ಷಕರ ಮೇಲೆ ಎಲ್ಲಾ ಒತ್ತಡ ಹಾಕಿ ಪಾಠವನ್ನು ಮುಗಿಸುತ್ತಾರೆ, ಇಂತಹ ಸಂಧರ್ಭಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ವೇತನ ಬಾಕಿ ಇಟ್ಟರೆ ಅವರ ಪಾಡೇನು,? ರಾಜ್ಯದಲ್ಲಿ ಕೇವಲ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸೇರಿ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರ ಸಂಖ್ಯೆ 34516 ಇದೆ. ಶೇಕಡ 70 ರಷ್ಟು ಇರುವ ಅತಿಥಿ ಉಪನ್ಯಾಸಕರಿಂದಲೇ ಶೈಕ್ಷಣಿಕ ವರ್ಷದ ಪಾಠಗಳು ಮುಗಿಯಲು ಸಾಧ್ಯವಾಗುತ್ತದೆ. ಇನ್ನು ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ ಪರಿಸ್ಥಿತಿ ಇದೇ ರೀತಿಯಲ್ಲಿದೆ. ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೂವತ್ತೈದು ಸಾವಿರಕ್ಕೂ ಅಧಿಕ ಶಿಕ್ಷಕರೂ ಕೂಡಾ ವೇತನವಿಲ್ಲದೇ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ 8 ಮಂದಿ ಸರಕಾರಿ ಅತಿಥಿ ಶಿಕ್ಷಕರು ಈಗಾಗಲೇ ಆತ್ಮಹತ್ಯೆ ಕೂಡ ಮಾಡಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಒಟ್ಟಾರೆಯಾಗಿ ಈ ಎಲ್ಲಾ ಸಮಸ್ಯೆಗಳಿಗೆ ಲಾಕ್ಡೌನ್ ಕೂಡ ಕಾರಣ ಎನ್ನಬಹುದು.ಶಿಕ್ಷಣ ಸಂಸ್ಥೆಗಳಲ್ಲಿಯೂ ಕೂಡ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಈ ಸಮಸ್ಯೆ ಸ್ಫೋಟಗೊಂಡಿದೆ. ಸರಕಾರದ ಶೀಘ್ರ ಮಧ್ಯಸ್ತಿಕೆಯೇ ಇದಕ್ಕೆ ಪರಿಹಾರ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಸಮಸ್ಯೆಗಳು ಮುಂದುವರಿಯುತ್ತಾ ಹೋದರೆ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚುಗಡೆಯಾಗುವುದರಲ್ಲಿ ಸಂಶಯವಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆಯನ್ನು ನೀಡುತ್ತಿರುವ ಸಣ್ಣಸಣ್ಣ ಖಾಸಗಿ ಶಾಲೆಗಳನ್ನು ಉಳಿಸಲು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರ ಜೀವನವನ್ನು ಉಳಿಸಲಿಕ್ಕಾಗಿ ಸರಕಾರ ಶೀಘ್ರ ಯೋಜನೆಯನ್ನು ಪ್ರಕಟಿಸಬೇಕು. ಒಂದು ಕಡೆ ಇದೇ ವೃತ್ತಿಯನ್ನು ಅವಲಂಬಿಸಿದ್ದ ಸರಕಾರಿ ಅತಿಥಿ ಉಪನ್ಯಾಸಕರು ಇಂತಹಾ ಸಮಸ್ಯೆಯಿಂದಾಗಿ ಸಮಾಜದಲ್ಲಿ ಕೂಲಿ ಕೆಲಸಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಆದುದರಿಂದ ಶಿಕ್ಷಕರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಖಾಸಗೀ ಶಿಕ್ಷಕರಿಗೆ ಮತ್ತುಅತಿಥಿ ಉಪನ್ಯಾಸಕರಿಗಾಗಿ ಶೀಘ್ರ ವಿಶೇಷ ಯೋಜನೆಯನ್ನು ಪ್ರಕಟಿಸಬೇಕೆಂದು ಕ್ಯಾಂಪಸ್ ಫ್ರಂಟ್ ಈ ಕೆಳಗಿನ ಬೇಡಿಕೆಗಳೊಂದಿಗೆ ಸರಕಾರಕ್ಕೆ ಆಗ್ರಹಿಸುತ್ತಿದೆ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಒತ್ತಾಯಿಸಿದ್ದಾರೆ.
ಬೇಡಿಕೆಗಳು:
1 ಖಾಸಗಿ ಶಾಲೆಯ ಶಿಕ್ಷಕರಿಗೆ ಬೇಕಾದ ಹಣವನ್ನು ಪ್ರತಿ ಶಾಲೆಯ ಮಾಲಕರಿಂದ ಒಟ್ಟುಗೂಡಿಸುವ ಪ್ರಯತ್ನವನ್ನು ಮಾಡಬೇಕು. ಅದಕ್ಕಾಗಿ ತಜ್ಞರ ಸಮಿತಿಯನ್ನು ನೇಮಿಸಿ ಖಾಸಗಿ ಶಾಲೆಯ ಮಾಲಕರ ಸಂಘಟನೆಗಳ ಜೊತೆ ಸರಕಾರವು ನಿರ್ಧಾರವನ್ನು ತೆಗೆದುಕೊಳ್ಳಬೇಕು.
2 ಎಲ್ಲಾ ಶಿಕ್ಷಕರನ್ನು ಸರಕಾರದ ಅದೀನದಲ್ಲಿ ನೋಂದಣಿ ಮಾಡಿ ಪ್ರೊತ್ಸಾಹ ಧನ ನೀಡಬೇಕು.
3 ಸರಕಾರಿ ಅತಿಥಿ ಉಪನ್ಯಾಸಕರ ಕೆಲಸವನ್ನು ಖಾಯಂಗೊಳಿಸಬೇಕು
4 ಅತಿಥಿ ಶಿಕ್ಷಕರಿಗೆ ಸಂಸ್ಥೆಗಳು ಬಾಕಿ ಇಟ್ಟಿರುವ ಗೌರವ ಧನವನ್ನು ಶೀಘ್ರವಾಗಿ ನೀಡಬೇಕು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.