ಮಂಗಳೂರು (www.vknews.com) : ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು 50 ವರ್ಷಗಳನ್ನು ಪೂರೈಸಿದ ಸುಸಂದರ್ಭದಲ್ಲಿ ಮುದ್ರಿಸಲಾದ ಮೀನಿನ ಚಿತ್ರವಿರುವ ಭಾರತೀಯ ಅಂಚೆ ಚೀಟಿಯನ್ನು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತುದ.ಕ. ಜಿಲ್ಲೆಯಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿಅವರು ಮಂಗಳವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೀನು ಒಂದುಉತ್ಕøಷ್ಟ ಪೌಷ್ಟಿಕಾಂಶವನ್ನು ಹೊಂದಿರುವಜೀವಿ. ಮೀನನ್ನು ಸೇವಿಸುವವರು ಮತ್ತುಅದರ ಪರಿಮಳವನ್ನು ಹೀರುವವರಆರೋಗ್ಯಉತ್ತಮವಾಗಿರುವುದಲ್ಲದೇಜ್ಞಾಪಕ ಶಕ್ತಿ ಹೆಚ್ಚಾಗುತ್ತದೆಎಂದು ಹೇಳಿದರು. ಕರಾವಳಿ ಪ್ರದೇಶದಲ್ಲೊಂದೇಅಲ್ಲದೆ, ಒಳನಾಡು ಮೀನುಗಾರಿಕೆಗೂ ಸಹಾ ಆದ್ಯತೆ ನೀಡಬೇಕು ಮತ್ತು ಮೀನಿನ ಸಂತತಿ ಹೆಚ್ಚಿಸಬೇಕಾಗಿರುವುದು ಅನಿವಾರ್ಯವಿದೆಎಂದುಅಭಿಪ್ರಾಯಪಟ್ಟರು. ಪಂಜರಗಳಲ್ಲಿ ಮೀನು ಸಾಕಣೆ ಮಾಡಿದರೆಉತ್ಪಾದನೆಯನ್ನು ಹೆಚ್ಚಿಸಬಹುದಾದತಾಂತ್ರಿಕತೆಯನ್ನು ವಿಜ್ಞಾನಿಗಳು ಕೃಷಿಕರಿಗೆ ನೀಡಬೇಕಾಗಿದೆ.ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡ ಪ್ರಧಾನ ಮಂತ್ರಿ ಮತ್ಸ್ಯ ಸಂಪದಯೋಜನೆಯಡಿಇಂತಹ ಪದ್ದತಿಗಳಿಗೆ ಪೆÇ್ರೀತ್ಸಾಹಕೊಡಬೇಕಾಗಿದೆಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸಕಾಮತ್ಮಾತನಾಡಿ, ಮೀನಿನ ಅಂಚೆ ಚೀಟಿ ಹೊರತರುವುದುಕಷ್ಟಕರವಾದ ವಿಷಯ ಮತ್ತುಕಾಲೇಜಿನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ತಯಾರಿಸಿದ ಪೆÇೀಸ್ಟ್ ಸ್ಟಾಂಪ್ ಮೀನುಗಾರಿಕಾರಂಗದಲ್ಲಿ ಹೆಮ್ಮೆಯ ವಿಷಯವೆಂದು ಹೇಳಿದರು. ಸಮುದ್ರ ಕಳೆ (ಸೀವೀಡ್) ಬೆಳೆಯುವ ತಂತ್ರಜ್ಞಾನವನ್ನು ಅಳವಡಿಸುವುದು ಅನಿವಾರ್ಯವಾಗಿರುತ್ತದೆ.ಈ ಸೀವೀಡ್ ಎಂಬುದುಆಹಾರ ಸೇವನೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ ಮತ್ತುಇದರಿಂದಔಷದತಯಾರಿಕೆಯಲ್ಲಿ ಬಳಸಲಾಗುತ್ತದೆ.ಆದುದರಿಂದಇಂತಹ ಜಲ ಸಸ್ಯಗಳನ್ನು ಬೆಳಸುವುದರಿಂದ ಕರಾವಳಿ ತೀರಪ್ರದೇಶದಲ್ಲಿ ವಾಸಿಸುವ ಮೀನುಗಾರ ಬಾಂಧವರಿಗೆಒಂದು ಉಪಕಸುಬಾಗಿ ಲಾಭದಾಯಕಉದ್ಯೋಗವಾಗುವುದರಲ್ಲಿಯಾವುದೇ ಸಂಶಯವಿಲ್ಲ ಎಂದುಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನಡೀನ್ಡಾ. ಎ. ಸೆಂಥಿಲ್ ವೇಲ್ಪ್ರಾಸ್ತಾವಿಕಮಾತನಾಡಿ, ಅಂಚೆ ಇಲಾಖೆಯ ಸಹಕಾರದಿಂದಕರ್ನಾಟಕರಾಜ್ಯದ ಸ್ಥಳಿಯ ಮೀನಾದ ಪಂಟಿಯಸ್ಕಾರ್ನಾಟಿಕಸ್ ನ್ನು ಅಂಚೆಚೀಟಿಯ ಮೂಲಕ ಮುದ್ರಿಸಲು ಸಹಕರಿಸಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸಿದರು. ಮೀನುಗಾರಿಕಾಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಮುದ್ರಿಸಲ್ಪಟ್ಟ ಅಂಚೆ ಚೀಟಿಯು ಭಾರತದೇಶಕ್ಕೆಒಂದುಕೊಡುಗೆ ಮತ್ತು ನೆನಪು ಎಂದು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ನಿರೂಪಣೆ ಮಾಡಿದಕಾಲೇಜಿನ ಜಲಪರಿಸರ ವಿಭಾಗದ ಪೆÇ್ರಫೆಸರ್ಡಾ.ಎ.ಟಿ. ರಾಮಚಂದ್ರ ನಾಯ್ಕ ಮಾತನಾಡಿ, ಪಶ್ಚಿಮ ಘಟ್ಟದ ಅಳಿವೆ ಪ್ರದೇಶದಲ್ಲಿಯೆಥೇಚ್ಚವಾಗಿ ಬೆಳೆಯುವ ಕರ್ನಾಟಕರಾಜ್ಯದ ಮೀನೆಂದುಕರೆಯಲ್ಪಡುವ ಸ್ಥಳೀಯ ಮೀನಾದ ಪಂಟಿಯಸ್ಕಾರ್ನಾಟಿಕಸ್ ನ್ನು ಭಾರತೀಯ ಅಂಚೆ ಇಲಾಖೆಯವರು ಅಂಚೆ ಚೀಟಿಯ ಮೇಲೆ ಮುದ್ರಿಸಿರುವುದು ಮೀನುಗಾರಿಕಾಕಾಲೇಜಿಗೆ ಹೆಮ್ಮೆಎಂದು ಪ್ರಶಂಶಿಸಿದರು.
ಮಂಗಳೂರು ಮಹಾನಗರಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್, ಉಪಮೇಯರ್ ವೇದಾವತಿ, ಕಾಪೆರ್Çೀರೇಟರ್ರೇವತಿ ಶ್ಯಾಮಸುಂದರ್ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.ಸಹಾಯಕ ಪ್ರಾಧ್ಯಾಪಕಡಾ.ಕುಮಾರನಾಯ್ಕಎ,ಎಸ್. ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.