ಗ್ರಂಥಾಲಯಗಳಿಗೆ ಆಯ್ಕೆ: ಪುಸ್ತಕಗಳ ಆಹ್ವಾನ
ಮಂಗಳೂರು (www.vknews.com) : 2020ನೇ ಸಾಲಿನಲ್ಲಿಜನವರಿ1ರಿಂದಜೂನ್30 ರವರೆಗೆ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ/ಕಲೆ/ವಿಜ್ಞಾನ/ಸ್ಪರ್ಧಾತ್ಮಕ/ ಪಠ್ಯ ಸಾಂದರ್ಭಿಕ/ಮಕ್ಕಳ ಸಾಹಿತ್ಯ/ವಿಚಾರ ಸಾಹಿತ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಇತ್ಯಾದಿ ವಿಷಯಗಳ ಕನ್ನಡ/ಆಂಗ್ಲ/ಇತರ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ಹಾಗೂ ವಿತರಕರಿಂದ ಮೊದಲನೇ ಹಂತದಲ್ಲಿ ಪುಸ್ತಕಗಳನ್ನು ಆಹ್ವಾನಿಸಿದೆ.
ಆಯ್ಕೆಗೆಪುಸ್ತಕಗಳನ್ನು ಸಲ್ಲಿಸಲುಜುಲೈ 30 ಕೊನೆಯ ದಿನ. ಹಾಗೂ ನಿಗದಿತಅರ್ಜಿ ನಮೂನೆ ಮತ್ತು ನಿಬಂಧನೆಗಳನ್ನು ಇಲಾಖಾ ಅಂತರ್ಜಾಲ http://www.karnatakapubliclibrary.gov.in ನಿಂದ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರಕಚೇರಿ, ಬೆಂಗಳೂರು ದೂರವಾಣಿ ಸಂಖ್ಯೆ: 22864990/22867358 ಹಾಗೂ ಜಿಲ್ಲಾ/ನಗರಕೇಂದ್ರಗ್ರಂಥಾಲಯ, ಮಂಗಳೂರು, ದೂರವಾಣಿ ಸಂಖ್ಯೆ: 2441905/2425873 ನ್ನು ಸಂಪರ್ಕಿಸಲು ಮಂಗಳೂರು ಜಿಲ್ಲಾಕೇಂದ್ರಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಹವಾಮಾನಆಧಾರಿತ ಬೆಳೆ ವಿಮೆ ಅರ್ಜಿ ಸಲ್ಲಿಸುವ ದಿನ ವಿಸ್ತರಣೆ
ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಬೆಳೆ ವಿಮೆ ಕಾರ್ಯಕ್ರಮವನ್ನು ಮರು ವಿನ್ಯಾಸಗೊಳಿಸಿದ ಹವಾಮಾನಆಧಾರಿತ ಬೆಳೆ ವಿಮೆ ಕಾರ್ಯಕ್ರಮದಲ್ಲಿ 2020, 2021, 2022 ಮೂರು ವರ್ಷಗಳಿಗೆ ಮುಂಗಾರು ಹಂಗಾಮಿಗೆ ಅನ್ವಯಿಸಿ ಕರ್ನಾಟಕ ಸರಕಾರಆದೇಶ ಹೊರಡಿಸಿದೆ.
ಈ ಯೋಜನೆಯುಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿತೋಟಗಾರಿಕೆರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ನಷ್ಟ ಪರಿಹಾರವನ್ನು ಪಡೆಯಲುಅವಕಾಶವನ್ನುಕಲ್ಪಿಸುತ್ತದೆ.ಈ ಯೋಜನೆಯನ್ನು ಮುಂಗಾರು ಹಂಗಾಮಿಗೆ ದಕ್ಷಿಣಕನ್ನಡಜಿಲ್ಲೆಯಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಎಲ್ಲಾ 231 ಗ್ರಾಮ ಪಂಚಾಯತ್ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.ಸದರಿಯೋಜನೆಯಡಿದಕ್ಷಿಣಕನ್ನಡಜಿಲ್ಲೆಯಲ್ಲಿ 2020, 2021, 2022ನೇ ಮುಂಗಾರು ಹಂಗಾಮಿಗೆ ಅಡಿಕೆ ಮತ್ತುಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದೆ.2020ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾಕಂತು ಪಾವತಿಸಲುಜೂನ್ 30ಅಂತಿಮ ದಿನ ನಿಗದಿಪಡಿಸಲಾಗಿತ್ತು. ಸದರಿಯೋಜನೆಯಡಿರೈತರ ನೋಂದಾವಣೆಗೆ ಕಾಲಾವಕಾಶ ಅತೀಕಡಿಮೆಯಾಗಿರುವುದರಿಂದ ಹೆಚ್ಚಿನರೈತರನ್ನು ಈಯೋಜನೆಯಡಿತರುವಉದ್ದೇಶದಿಂದ ನೋಂದಣಿಗೆಅಂತಿಮದಿನವನ್ನುಜುಲೈ 10ರವರೆಗೆ ವಿಸ್ತರಿಸಲಾಗಿರುತ್ತದೆ.
ಆದುದರಿಂದಜಿಲ್ಲೆಯಲ್ಲಿನಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಬ್ಯಾಂಕ್ಗಳಲ್ಲಿ ಸಾಲ ಪಡೆದ ಬೆಳೆಗಾರರು ಸಂಬಂಧಿಸಿದ ಬ್ಯಾಂಕ್ಗಳ ಮೂಲಕ ಹಾಗೂ ಸಾಲ ಪಡೆಯದರೈತರು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಈಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್/ಹೋಬಳಿ ಮಟ್ಟದರೈತ ಸಂಪರ್ಕಕೇಂದ್ರದತೋಟಗಾರಿಕೆಅಥವಾ ಕೃಷಿ ಅಧಿಕಾರಿಗಳು/ತಾಲೂಕು ಮಟ್ಟದ ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರು/ಜಿಲ್ಲಾತೋಟಗಾರಿಕೆಉಪನಿರ್ದೇಶಕರಕಛೇರಿಯನ್ನು ಸಂಪರ್ಕಿಸಲುಕೋರಲಾಗಿದೆ. ಸಂಪರ್ಕಿಸ ಬಹುದಾದದೂರವಾಣಿ ಸಂಖ್ಯೆ: ಮಂಗಳೂರು ತೋಟಗಾರಿಕೆಉಪನಿರ್ದೇಶಕರುದೂರವಾಣಿ ಸಂಖ್ಯೆ 9448999226, ಮಂಗಳೂರು ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರುದೂರವಾಣಿ ಸಂಖ್ಯೆ 8277806378 (0824-2423615), ಬಂಟ್ವಾಳ ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರುದೂರವಾಣಿ ಸಂಖ್ಯೆ 8277806371 (08255-234102), ಪುತ್ತೂರು ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರುದೂರವಾಣಿ ಸಂಖ್ಯೆ 9731854527 (08251-230905), ಸುಳ್ಯ ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕದೂರವಾಣಿ ಸಂಖ್ಯೆ9880993238 (08257-232020), ಬೆಳ್ತಂಗಡಿ ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕ. 8277806380 (08256-232148) ಸಂಪರ್ಕಿಸಲು ಮಂಗಳೂರು ತೋಟಗಾರಿಕೆಇಲಾಖೆಯಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಜು. 4 ರಿಂದ 30 ರವರೆಗೆ ಪಿಲಿಕುಳ ನಿಸರ್ಗಧಾಮ ಸಾರ್ವಜನಿಕವೀಕ್ಷಣೆಇಲ್ಲ
ಕೊರೋನಾ ವೈರಾಣು ಕಾಯಿಲೆ – 2019 ರ ಸಮಸ್ಯೆ ಹಾಗೂ ಮಳೆಗಾಲದ ಕಾರಣದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಸಂದರ್ಶಕರ ಭೇಟಿಯುಅತ್ಯಲ್ಪವಾಗಿದ್ದು ಪಿಲಿಕುಳದ ಎಲ್ಲಾ ಆಕರ್ಷಣೆಗಳನ್ನು ಜುಲೈ 4ರಿಂದ 31ರವರೆಗೆತಾತ್ಕಾಲಿಕವಾಗಿಮುಚ್ಚಲಾಗಿದೆ. ಈ ಅವಧಿಯಲ್ಲಿ ಸಂದರ್ಶಕರ ಭೇಟಿಗೆಅವಕಾಶವಿರುವುದಿಲ್ಲ ಎಂದುಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ದೇವಸ್ಥಾನಗಳ ಚಿನ್ನ ಬೆಳ್ಳಿ ಭದ್ರತೆ: 13 ರಂದುಸಭೆ
ಧಾರ್ಮಿಕದತ್ತಿಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಅನಾದಿ ಕಾಲದ ವಿಗ್ರಹ, ಚಿನ್ನ-ಬೆಳ್ಳಿ, ಅಮೂಲ್ಯ ವಸ್ತುಗಳ ಕಳುವಿನ ಪ್ರಕರಣಗಳು/ಭದ್ರತೆ ಹಾಗೂ ಅಮೂಲ್ಯ ತಾಳೆಗರೆಯಂತಹ ದಾಖಲೆಗಳ ಸಂರಕ್ಷಣೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು/ ಆಡಳಿತಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿಜಿಲ್ಲೆಯ ಪ್ರವರ್ಗ ‘ಎ’ ಮತ್ತು ‘ಬಿ’ ಗೆ ಸೇರಿದ ದೇವಸ್ಥಾನಗಳ ಆಡಳಿತದಾರರ/ ಕಾರ್ಯನಿರ್ವಹಣಾಧಿಕಾರಿಯವರ/ ಆಡಳಿತಾಧಿಕಾರಿಯವರ/ ಧಾರ್ಮಿಕದತ್ತಿ ಇಲಾಖಾಧಿಕಾರಿಗಳ ಸಭೆಕರೆಯಲಾಗಿದೆಎಂದು ಪ್ರಕಟಣೆ ಸಭೆ.
ಪುತ್ತೂರು-ಗುತ್ತಿಗೆ ಆಧಾರದಲ್ಲಿ ವಾಹನಗಳ ಟೆಂಡರ್ಆಹ್ವಾನ
ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರುಜಿ.ಪಂ. ಪುತ್ತೂರುಇವರಕಚೇರಿಬಳಕೆಗಾಗಿ ಹೊರಗುತ್ತಿಗೆ ಬಾಡಿಗೆಆಧಾರದ ಮೇಲೆ ಸ್ಥಳೀಯವಾಗಿ ಟೆಂಡರ್ ಮೂಲಕ ಟಾಟಾಇಂಡಿಗೋ, ಟಾಟಾಇಂಡಿಕಾ-ಡಿಲೆಕ್ಸ್, ಟಾಟಾ ಸುಮೋ, ಬೋಲಾರೋ, ಸ್ವಿಫ್ಟ್ ಡಿಸ್ಜಾಯರ್ಅಥವಾಅದಕ್ಕೆ ಸಮಾನ ಮಾದರಿಯ ವಾಹನವನ್ನು ಪಡೆಯಲುಆಸಕ್ತರಿಂದಟೆಂಡರ್ಆಹ್ವಾನಿಸಲಾಗಿದೆ.ಟೆಂಡರ್ ಸಲ್ಲಿಸಲುಕೊನೆಯ ದಿನ ಜುಲೈ 31 ರಂದು ಸಂಜೆ 5 ಗಂಟೆ. ಹೆಚ್ಚಿನ ಮಾಹಿತಿಗಾಗಿ ಪುತ್ತೂರುಕಚೇರಿದೂರವಾಣಿ ಸಂಖ್ಯೆ: 08251-230905 ಸಂಪರ್ಕಿಸಲು ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್, ಪುತ್ತೂರುಇವರ ಪ್ರಕಟಣೆ ತಿಳಿಸಿದೆ.
14ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಆಚರಣೆ
ಸಂಖ್ಯಾ ಶಾಸ್ತ್ರದ ಪಿತಾಮಹ ಪ್ರೊ. ಪಿ.ಸಿ. ಮಹಾಲನೋಬಿಸ್ ಇವರ 127ನೇ ಜನ್ಮ ದಿನಾಚರಣೆಯನ್ನು ಸರ್ಕಾರದ ನಿರ್ದೇಶನದಂತೆ “14ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ”ಯನ್ನಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯವರ ಕಛೇರಿಯಲ್ಲಿ ಜೂನ್ 26 ರಂದು ಆಚರಿಸಲಾಯಿತು. ಸರ್ಕಾರದ ನಿರ್ದೇಶನದಂತೆ ಜೂನ್ 26 ರಂದು ಬೆಳಿಗ್ಗೆ ವಿಶ್ವಸಂಸ್ಥೆ ನಿಗದಿಪಡಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಎರಡು ವಿಷಯಗಳಾದ ಎಲ್ಲಾ ವಯೋವೃದ್ಧರಲ್ಲಿ ಆರೋಗ್ಯಕರ ಜೀವನವನ್ನು ಖಾತ್ರಿ ಪಡಿಸಿ ಯೋಗಕ್ಷೇಮವನ್ನು ಉತ್ತೇಜಿಸುವುದು, ಲಿಂಗ ಅಸಮಾನತೆಯನ್ನು ಹೋಗಲಾಡಿಸಿ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿಸುವುದರ ಬಗ್ಗೆ ಸಂಬಂಧಿಸಿದ ಗುರಿಗಳನ್ನು ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಸಾಂಖ್ಯಿಕ ಸಿಬ್ಬಂದಿಗಳಿಗೆ ಆನ್ಲೈನ್ ಮೂಲಕ ಮಾಹಿತಿಯನ್ನು ನೀಡಲಾಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾóಮಾತನಾಡಿ, ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿರುವುದರಿಂದ ಸುಸ್ಥಿರ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದನ್ನು ಪ್ರಶಾಂತ ಚಂದ್ರ ಮಹಾಲನೋಬಿಸ್ರವರು ತಿಳಿಸಿದ್ದಾರೆ. ಇದನ್ನು ಅಭಿವೃದ್ಧಿಪಡಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮಪಡಬೇಕು ಹಾಗೂ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಅನುಷ್ಟಾನಗೊಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದಾಗ ಮಾತ್ರ ಮಾಡಿದ ಕೆಲಸಕ್ಕೆ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ಹೇಳಿದರು.
ದೇಶದ ಅಭಿವೃದ್ಧಿಗಾಗಿ ಯೋಜನೆಯನ್ನು ರೂಪಿಸಬೇಕಾದರೆ ಪ್ರಾಥಮಿಕ ದತ್ತಾಂಶ ಎನ್ನುವುದು ಬಹಳ ಅವಶ್ಯಕವಾಗಿರುತ್ತದೆ ಎಂಬುದಕ್ಕೆ ಬಹಳ ದಶಕಗಳ ಹಿಂದೆಯೇ ಪ್ರೊ. ಪಿ.ಸಿ. ಮಹಾಲನೋಬಿಸ್ರವರು ಹೆಚ್ಚಿನ ಒತ್ತನ್ನು ನೀಡಿದ್ದರು. ಒಂದು ದೇಶ ವ್ಯವಸ್ಥಿತವಾಗಿ ಸಮಗ್ರವಾಗಿ ಎಲ್ಲರನ್ನು ಒಳಗೊಂಡು ಅಭಿವೃದ್ಧಿಯಾಗಬೇಕಾದರೆ ಅಂಕಿ ಅಂಶಗಳು ಹಾಗೂ ಅದರ ವಿಶ್ಲೇಷಣೆಯ ಮಾಹಿತಿ ಪ್ರಮುಖವಾಗಿದೆ ಎಂದು ಅವರು ತಿಳಿಸಿಕೊಟ್ಟಿದ್ದಾರೆ ಮತ್ತು ಈ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ, ಒಂದು ಮಾಹಿತಿ ಸಮಗ್ರವಾಗಿರಬೇಕು, ಪ್ರಾಯೋಗಿಕವಾಗಿರಬೇಕು ಮತ್ತು ಯಾವುದೇ ಲೋಪದೋಷಗಳು ಇರಬಾರದೆಂದು ತಿಳಿಸಿದರು.
ಪ್ರೊ. ಪಿ.ಸಿ. ಮಹಾಲನೋಬಿಸ್ರವರು ಹಾಕಿಕೊಟ್ಟಂತಹ ತಳಪಾಯಕ್ಕೆ ನಮ್ಮ ಭಾರತ ದೇಶ ಪಂಚವಾರ್ಷಿಕ ಯೋಜನೆಗಳು ನಿರ್ಮಾಣವಾಗಿವೆ. ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ಆದಾಯ ಖರ್ಚು ವೆಚ್ಚಗಳನ್ನು ತಿಳಿದುಕೊಂಡು ನಾವು ಯಾವ ರೀತಿ ವೆಚ್ಚ ಮಾಡಿದರೆ ದೇಶದ ಅಭಿವೃದ್ಧಿಯನ್ನು ಸಾಧಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿಯ ದತ್ತಾಂಶ ಮತ್ತು ಕಾಲಕಾಲಕ್ಕೆ ಕೃಷಿ ಚಟುವಟಿಕೆಗಳು, ಬೆಳೆಗಳ ಸಂಶೋಧನೆ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಸರ್ವೆ, ಲಿಂಗಾನುಪಾತದ ಸರ್ವೆಗಳು ಹೇಗೆ ನಮ್ಮ ಮುಂದಿನ ಅಭಿವೃದ್ಧಿಗೆ ಪೂರಕವಾಗುತ್ತವೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಂ ವಹಿಸಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಡಾ| ಉದಯ ಶೆಟ್ಟಿ ಮಾತನಾಡಿ, ಒಬ್ಬ ಸಂಖ್ಯಾ ಶಾಸ್ತ್ರಜ್ಞ ಒಂದು ದೇಶಕ್ಕೆ ಏನೆಲ್ಲಾ ಕೊಡುಗೆ ನೀಡಬಹುದು ಎಂಬುದಕ್ಕೆ ಮಾಹಾಲನೋಬಿಸ್ರವರು ಉದಾಹರಣೆ. ಅಂದಿನ ಕೇಂದ್ರ ಸರ್ಕಾರ ಇವರನ್ನು ಸಾಂಖ್ಯಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತ್ತು. ಇವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ ಎಂದು ತಿಳಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಕೆ.ರತ್ನಾಕರ ಸ್ವಾಗತಿಸಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಮಾರುತಿಪ್ರಸಾದ್ ಬಿ.ವಿ ನಿರೂಪಿಸಿದರು.
ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆಅರ್ಜಿಆಹ್ವಾನ
ಕನ್ನಡ ಸಾಹಿತ್ಯ ಪರಿಷತ್ತು 2020-21ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 2020ರ ಡಿಸೆಂಬರ್ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಸಲ್ಲಿಸಲುಆಗಸ್ಟ್ 31 ಕೊನೆಯ ದಿನ. ಸೆಪ್ಟೆಂಬರ್ 15 ರವರೆಗೆದಂಡ ಶುಲ್ಕ ರೂ 30 ನ್ನು ಹೆಚ್ಚುವರಿಯಾಗಿ ನೀಡಿಅರ್ಜಿ ಸಲ್ಲಿಸಬಹುದು.ರೂ 25 ಶುಲ್ಕ ಪಾವತಿಸಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನುಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಜುಲೈ 1 ರಿಂದ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ ಮೂವತ್ತುರೂಪಾಯಿ ಮನಿಯಾರ್ಡರ್ ಮಾಡಿದರೆಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲಾಗುವುದು.
ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ http://www.kasapa.in ಮೂಲಕ ಪಡೆದುಕೊಳ್ಳಬಹುದು.ಪರೀಕ್ಷಾ ಶುಲ್ಕದೊಂದಿಗೆಅರ್ಜಿ ಶುಲ್ಕ ರೂ 25 ನ್ನು ಪ್ರತ್ಯೇಕವಾಗಿ ಪಾವತಿಸಬಹುದು.
ಹೆಚ್ಚಿನ ವಿವರಗಳಿಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18, ದೂರವಾಣಿ ಸಂಖ್ಯೆ 080 26623584 ನ್ನು ಸಂಪರ್ಕಿಸಲುಕನ್ನಡ ಸಾಹಿತ್ಯ ಪರಿಷತ್ತಿನಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ ಇವರ ಪ್ರಕಟಣೆ ತಿಳಿಸಿದೆ.
ರಾಷ್ಟ್ರ ಮಟ್ಟದಉತ್ತಮ ಶಿಕ್ಷಕ ಪ್ರಶಸ್ತಿ: ಅರ್ಜಿಆಹ್ವಾನ
2019 ನೇ ಸಾಲಿನ ರಾಷ್ಟ್ರ ಮಟ್ಟದಉತ್ತಮ ಶಿಕ್ಷಕ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಆನ್ಲೈನ್ ಮೂಲಕ ನಡೆಯಲಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲಾಖಾ ಅಂತರ್ಜಾಲ ತಾಣ http://www.schooleducation.kar.nic.in ಹಾಗೂ httt://www.nationalawardtoteacher.mhrd.gov.in ಅಲ್ಲಿ ಪಡೆಯಬಹುದು. ಹಾಗೂ ಅಂತರ್ಜಾಲದ ಮುಖಾಂತರಅರ್ಜಿ ಸಲ್ಲಿಸಲುಜುಲೈ 6 ಕೊನೆಯ ದಿನವಾಗಿರುತ್ತದೆ. ರ್ಹಶಿಕ್ಷಕರು ಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲುದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಮೀನುಗಾರಿಕಾಕಾಲೇಜಿನ ಸಂಶೋಧನಾಗ್ರಂಥ ಬಿಡುಗಡೆ
ಮಂಗಳೂರಿನ ಮತ್ಸ್ಯನಗರದಲ್ಲಿರುವ ಮೀನುಗಾರಿಕಾಕಾಲೇಜು 1969 ರಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಅಧೀನದಲ್ಲಿ ಪ್ರಾರಂಭವಾಗಿದ್ದು, 2019 ಕ್ಕೆ 50 ವರ್ಷ ಪೂರೈಸಿದೆ. ಈ ಸುಸಂದರ್ಭದಲ್ಲಿಕಾಲೇಜಿನ ವಿಜ್ಞಾನಿಗಳು ಸಂಶೋಧನೆ ಮಾಡಿ ಪ್ರಕಟಿಸಿರುವ ಪ್ರಬಂಧಗಳ ಹೊತ್ತಿಗೆಯನ್ನು ಗ್ರಂಥಗಳ ಮೂಲಕ ಹೊರತಂದಿರುವುದು ಹೆಮ್ಮೆಯ ವಿಷಯಎಂದು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತುದ.ಕ.ಜಿಲ್ಲಾಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆ ಮಾಡಿ ಹಾರೈಸಿದರು.
ಅವರು ಮೀನುಗಾರಿಕಾಕಾಲೇಜಿನ ಸಭಾಂಗಣದಲ್ಲಿಇತ್ತೀಚೆಗೆ ಸಂಶೋಧನಾಗ್ರಂಥ ಬಿಡುಗಡೆ ಮಾತನಾಡುತ್ತಿದ್ದರು,ಮೀನುಗಾರಿಕಾ ಕ್ಷೇತ್ರದಲ್ಲಿಇನ್ನೂ ಹೆಚ್ಚಿನಅಧ್ಯಯನಅರ್ಥಾತ್ ಸಂಶೋಧನೆ ನಡೆಯಬೇಕಿದೆ.ಪಂಜರಗಳಲ್ಲಿ ಮೀನು ಸಾಕಣೆ ಮಾಡಿಅಧಿಕ ಇಳುವರಿಯನ್ನು ಮಾಡಬಹುದಾಗಿದೆ.ಈ ನಿಟ್ಟಿನಲ್ಲಿಕಾಲೇಜಿನ ವಿಜ್ಞಾನಿಗಳು ಮೀನುಗಾರಿಕೆಇಲಾಖೆಯ ಸಹಯೋಗದಿಂದಆಧುನಿಕ ತಂತ್ರಜ್ಞಾನಗಳನ್ನಾಧರಿಸಿ ಕೆಲಸ ಮಾಡಬೇಕಿದೆಎಂದರು. ಪ್ರಧಾನ ಮಂತ್ರಿ ಮತ್ಸ್ಯ ಸಂಪದಯೋಜನೆಯಲ್ಲಿಇಂತಹ ಕೆಲಸಗಳಿಗೆ ಇಲಾಖೆಯ ಸಹಕಾರದೊಂದಿಗೆಕಾರ್ಯನಿರ್ವಹಿಸುವುದು.
ಅನಿವಾರ್ಯಎಂದರು.ಕರಾವಳಿ ತೀರಪ್ರದೇಶ ಮಾತ್ರವಲ್ಲದೇ, ಹಿನ್ನೀರು ಮತ್ತು ಸಿಹಿನೀರಿನಲ್ಲೂ ಸಹಾ ಮೀನು ಕೃಷಿ ಕೈಗೊಳ್ಳಲು ಅದ್ಯತೆ ನೀಡಬೇಕು ಮತ್ತು ಮೀನಿನ ಸಂತತಿ ಹೆಚ್ಚಿಸವ ಅನಿವಾರ್ಯವಿದೆಎಂದುಅಭಿಪ್ರಾಯಪಟ್ಟರು. ಮೀನಿನ ಮರಿಗಳ ಬೇಡಿಕೆ ಹೆಚ್ಚುತ್ತಿದ್ದುರೈತರ ಬೇಡಿಕೆಗಳಿಗೆ ಕಾಲೇಜಿನ ಪಾಧ್ಯಾಪಕ ವೃಂದದವರು ಶ್ರಮಿಸಬೇಕುಎಂದುಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸಕಾಮತ್, ಸಮುದ್ರ ಕಳೆ (ಸೀ ವೀಡ್) ಬೆಳೆಯುವ ತಂತ್ರಜ್ಞಾನವನ್ನು ಅಳವಡಿಸುವುದು ಅನಿವಾರ್ಯವಾಗಿರುತ್ತದೆಎಂದರು. ಈ ಸೀ ವೀಡ್ಎಂಬದು ಸಮುದ್ರದಲ್ಲಿ ಬೆಳೆಯುವ ತರಕಾರಿ ಸೊಪ್ಪು ಮತ್ತುಇದುಆಹಾರ ಸೇವನೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ.ಇದನ್ನುಔಷದತಯಾರಿಕೆಯಲ್ಲಿ ಬಳಸಲಾಗುತ್ತದೆ.ಇಂತಹ ಜಲ ಸಸ್ಯಗಳನ್ನು ಬೆಳೆಸುವುದರಿಂದ ಕರಾವಳಿ ತೀರಪ್ರದೇಶದಲ್ಲಿ ವಾಸಿಸುವ ಮೀನುಗಾರರಿಗೆಒಂದು ಉಪಕಸುಬಾಗಿ ಲಾಭದಾಯಕಉದ್ಯಮವಾಗುವುದರಲ್ಲಿಯಾವುದೇ ಸಂಶಯವಿಲ್ಲ ಎಂದು ಅಬಿಪ್ರಾಯ ಪಟ್ಟರು. ಕಾಲೇಜಿನಡೀನ್ಡಾ.ಎ. ಸೆಂಥಿಲ್ ವೇಲ್,ಪ್ರಾಸ್ತಾವಿಕ ನುಡಿದು ಮೀನುಗಾರಿಕಾಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಮುದ್ರಿಸಲ್ಪಟ್ಟ ಸಂಶೋಧನಾಗ್ರಂಥವು ವಿಜ್ಞಾನಿಗಳಿಗೆ ಉಪಯೋಗವಾಗಲಿದೆಎಂದು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ನಿರೂಪಣೆ ಮಾಡಿದಕಾಲೇಜಿನ ಜಲಪರಿಸರ ವಿಭಾಗದ ಪೆÇ್ರಫೆಸರ್ಡಾ.ಎ.ಟಿ. ರಾಮಚಂದ್ರ ನಾಯ್ಕ ಮಾತನಾಡಿ,ಐದು ವರ್ಷಗಳ ಸಂಶೋಧನಾ ಪರಿಶ್ರಮದ ಸಾರಾಂಶದ ಈ ಗ್ರಂಥವು ವಿಶ್ವದಾದ್ಯಂತಇರುವ ಮೀನುಗಾರಿಕಾ ಸಂಶೋಧಕರಿಗೆ ನೇರವಾಗಲಿದೆಎಂದರು.ಪಂಚ ವಾರ್ಷಿಕ ಮುದ್ರಣದ ಈ ಹೊತ್ತಿಗೆಯು ಮೀನುಗಾರಿಕಾಕ್ಷೇತ್ರದಲ್ಲಿ ವಿವಿಧ ವಿಷಯಗಳ ಅರಿವಿಗೆ ಸಹಕಾರಿಯಾಗಲಿದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್, ಉಪಮೇಯರ್ ವೇದಾವತಿ, ಹೊಯಿಗೆಬಝಾರ್ ವಾರ್ಡ್ಕಾಪೆರ್Çೀರೇಟರ್ರೇವತಿ ಶ್ಯಾಮಸುಂದರ್ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಮೊಹಮ್ಮದ್ ನಝೀರ್ ಉಪಸ್ಥಿತರಿದ್ದರು. ಮೀನುಗಾರಿಕಾ ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು. ಸಹಾಯಕ ಪ್ರಾಧ್ಯಾಪಕಡಾ.ಕುಮಾರನಾಯ್ಕಎ,ಎಸ್. ವಂದಿಸಿದರು.
ಇಲಾಖಾ ದರದಲ್ಲಿ ವಿವಿಧ ಸಸಿಗಳು ಲಭ್ಯ
ಮಂಗಳೂರು ತಾಲೂಕು, ಪಡೀಲುತೋಟಗಾರಿಕೆಕ್ಷೇತ್ರದಲ್ಲಿ ಇಲಾಖಾ ದರದಂತೆತೆಂಗು ಸಸಿ ರೂ. 60, ಅಡಿಕೆ ಸಸಿ ರೂ.20, ಮಲ್ಲಿಗೆ ಸಸಿ ರೂ.12, ಕಾಳುಮೆಣಸು ಸಸಿ ರೂ.4 ಗಳು ಮಾರಾಟಕ್ಕೆ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿಮೊಬೈಲ್ ಸಂಖ್ಯೆ 9972057821 ನ್ನು ಸಂಪರ್ಕಿಸಬಹುದುಎಂದುರಾಜ್ಯವಲಯ ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ ಹಾಜರಾತಿ
ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ. .ಸಿ. (ತೃತೀಯ ಭಾಷೆ) ಹಿಂದಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ವಿವರಇಂತಿವೆ:-
ಹಿಂದಿ ಪರೀಕ್ಷೆಗೆ27,448ವಿದ್ಯಾರ್ಥಿಗಳು ರಿಜಿಸ್ಟ್ರೇಶನ್ (ನೊಂದಣಿ) ಮಾಡಿದ್ದು, ಒಟ್ಟು27,155 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.293 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಹಾಜರಾದವರಲ್ಲಿಅನಾರೋಗ್ಯಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 49, ನೆರೆ ರಾಜ್ಯಗಳಿಂದ ಒಟ್ಟು 367 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರುಎಂದುದ.ಕಜಿಲ್ಲಾ ಸಾರ್ವಜನಿಕಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಅಂಗನವಾಡಿ ಸಹಾಯಕಿ ಹುದ್ದೆ -ಅರ್ಜಿಆಹ್ವಾನ
ವಿಟ್ಲ ಶಿಶು ಅಭಿವೃದ್ಧಿಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 3 ಅಂಗನವಾಡಿ ಸಹಾಯಕಿಯರಗೌರವ ಸೇವೆಯಹುದ್ದೆಗಳನ್ನು ಭರ್ತಿ ಮಾಡಲುವೆಬ್ಸೈಟ್ ವಿಳಾಸ http://www.anganwadirecruit.kar.nic.in ರಲ್ಲಿಜುಲೈ1 ರಿಂದಅರ್ಜಿ ಆಹ್ವಾನಿಸಿದೆ.ಜುಲೈ30ಆನ್ಲೈನ್ನಲ್ಲಿಅರ್ಜಿ ಸಲ್ಲಿಸಲುಕೊನೆಯ ದಿನವಾಗಿರುತ್ತದೆ.
ಸಹಾಯಕಿ ಹುದ್ದೆಖಾಲಿಯಿರುವಅಂಗನವಾಡಿಕೇಂದ್ರದ ವಿವರಇಂತಿವೆ:- ಮಂಚಿಗ್ರಾಮ ಪಂಚಾಯತ್, ಕೈಯೂರುಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, ಕನ್ಯಾನಗ್ರಾಮ ಪಂಚಾಯತ್ಕೇಪುಳಗುಡ್ಡೆ ಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ, ಬೋಳಂತೂರುಗ್ರಾಮ ಪಂಚಾಯತ್ಕೊಕ್ಕಪುಣಿ-1 ಅಂಗನವಾಡಿಕೇಂದ್ರ-ಸಾಮಾನ್ಯ ವರ್ಗ.
ಅಭ್ಯರ್ಥಿಗಳುಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿಯೋಜನೆ ವಿಟ್ಲ, ರಿಹಾ ಪ್ಲಾನೆಟ್, ಚಂದ್ರನಾಥ ಬಸದಿ ಎದುರು, ಪುತ್ತೂರುರಸ್ತೆ, ವಿಟ್ಲದೂರವಾಣಿ ಸಂಖ್ಯೆ 08255 238080 ನ್ನು ಸಂಪರ್ಕಿಸಲು ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸಫಾಯಿಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಮತ್ತುಅವರಕುಟುಂಬದ ಅವಲಂಬಿತರಿಂದಅರ್ಜಿಆಹ್ವಾನ
ಕರ್ನಾಟಕರಾಜ್ಯ ಸಫಾಯಿಕರ್ಮಚಾರಿ ನಿಗಮದ ವತಿಯಿಂದ ಸಫಾಯಿಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಮತ್ತು ಅವರ ಕುಟುಂಬದ ಅವಲಂಬಿತರಿಗಾಗಿ ಅರ್ಜಿಕರೆಯಲಾಗಿದ್ದು ಕೋವಿಡ್-19 ಇರುವಕಾರಣ ನಿಗಮದ ಮೂರು ಯೋಜನೆಗಳಾದ ಸ್ವಯಂಉದ್ಯೋಗಯೋಜನೆ, ಸಮೃದ್ಧಿ ಯೋಜನೆ ಮತ್ತುಉನ್ನತಿ ಯೋಜನೆಗಳನ್ನು ತಾತ್ಕಾಲಿಕವಾಗಿರದ್ದುಪಡಿಸಲಾಗಿದೆ.
ಈಗಾಗಲೇ ಸದರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಈ ಮೂರು ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳಿಗೆ ಮರುಅರ್ಜಿ ಸಲ್ಲಿಸಬಹುದು.ಅರ್ಜಿಸಲ್ಲಿಸುವ ದಿನಾಂಕವನ್ನುಜುಲೈ 31 ರ ವರೆಗೆ ವಿಸ್ತರಿಸಲಾಗಿದೆ.ಅರ್ಜಿ ಸಲ್ಲಿಸಲು ನಿಗಮದ ವೆಬ್ಸೈಟ್ http://www.ksskdc.kar.nic.in ನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್ಅಂಬೇಡ್ಕರ್ಅಭಿವೃದ್ಧಿ ನಿಗಮ, ಜಿ.ಹೆಚ್.ಎಸ್ರಸ್ತೆ, ಜನತಾ ಬಜಾರ್ಕಟ್ಟಡ, 2ನೇ ಮಹಡಿ, ಹಂಪನಕಟ್ಟೆ, ಮಂಗಳೂರು, ದೂರವಾಣಿಸಂಖ್ಯೆ0824-2420114 ನ್ನು ಸಂಪರ್ಕಿಸಲುದ.ಕ ಮಂಗಳೂರು ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.
ಜು.31 ರವರೆಗೆತಣ್ಣೀರುಬಾವಿ ಟ್ರೀ ಪಾರ್ಕ್ ಸಾರ್ವಜನಿಕರಿಗೆ ನಿರ್ಬಂಧ
ಜಿಲ್ಲೆಯಲ್ಲಿ ಹರಡುತ್ತಿರುವಕೊರೋನಾ ವೈರಸ್-19ರ ಪ್ರಸರಣವನ್ನುತಡೆಯುವ ಮುಂಜಾಗೃತಾದೃಷ್ಟಿಯಿಂದತಣ್ಣೀರುಬಾವಿ ಟ್ರೀಪಾರ್ಕಿನ ನಿರ್ವಹಣಾ ಸಮಿತಿಯ ನಿರ್ಧಾರದಂತೆತಣ್ಣೀರುಬಾವಿ ಸಸ್ಯೋದ್ಯಾನವನ್ನುಜುಲೈ 31 ರವರೆಗೆ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧಿಸಲಾಗಿರುತ್ತದೆಎಂದುಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.