ಕೋಲಾರ (www.vknews.com) : ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ವತಿಯಿಂದ ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕಿನ ವಿಟ್ಟಪ್ಪನಹಳ್ಳಿ ಎಂಬ ಗ್ರಾಮದಲ್ಲಿ “ಬೃಹತ್ ರಕ್ತದಾನ ಶಿಬಿರ” Blod donation camp ಅಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದ VKF ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ ನಾಗರಾಜ್ ಮಾತನಾಡಿ “ಕರ್ನಾಟಕ ರಾಜ್ಯದ ಉದ್ದಗಲಕ್ಕೂ ರಕ್ತದ ಕೊರತೆಯನ್ನು ನಿಗಿಸುವ ನಿಟ್ಟಿನಲ್ಲಿ, ರೋಗಿಗಳ ಜೀವಕ್ಕೆ ಜೀವ ನೀಡುವ ಕಾರ್ಯಕ್ಕಾಗಿ ಬೃಹತ್ ರಕ್ತದಾನ ಶಿಬಿರ ಏರ್ಪಾಡಿಸಿ ಅದನ್ನು ರಾಜ್ಯ ವ್ಯಾಪಿ ಉಚಿತ ರಕ್ತ ಪೂರೈಸಿ ಜೀವ ಉಳಿಸುವ ಕಾರ್ಯ ಮಾಡುವುದೇ ನಮ್ಮ ಗುರಿಯಾಗಿದೆ, ಇಂತಹ ರಕ್ತದಾನ ಕಾರ್ಯಗಳಿಗೆ ಎಲ್ಲಾರೂ ಸ್ಪಂದಿಸಲಿ” ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರೆರೆದು ಮಾಡಿದ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ವಿ.ಮುನಿರಾಜ್ ಸರ್ ಮಾತನಾಡಿ “”ರಕ್ತದಾನ ಶಿಬಿರಕ್ಕಿಂತ ಮಹಾದಾನ ಯಾವುದು ಇಲ್ಲ, ಅದರಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಜೀವ ಉಳಿಸುವ ಕಾರ್ಯ ಮಾಡಬೇಕು, ರಕ್ತದ ಮಹತ್ವ ಅಪಾರವಾದದ್ದು, ಮಾನವನಿಗೆ ನೇತ್ರದಾನವು ಸಹ ಪ್ರಮುಖವಾದದ್ದು, VKF ನ ಸೇವೆ ರಾಷ್ಟ್ರ ಮಟ್ಟದಲ್ಲಿ ಬೆಳಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಿಟ್ಟಪ್ಪನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಂ.ನಾರಾಯಣಸ್ವಾಮಿ ಮಾತನಾಡಿ ” ಪುಣ್ಯದ ಕೆಲಸ ಮಾಡುತ್ತಿರುವ ಕಾರ್ಯ ರಕ್ತದಾನ, ಪ್ರಸ್ತುತ ದಿನದಲ್ಲಿ ರಕ್ತದಾನ ಕಾರ್ಯ ಬಹಳ ಅವಶ್ಯ. ಆಪತ್ತಿನಲ್ಲಿರುವ ರೋಗಿಗಳಿಗೆ, ಗರ್ಭೀಣಿ ಮಹಿಳೆಯರಿಗೆ, ವೃದ್ದರಿಗೆ, ಕ್ಯಾನ್ಸರ್ ರೋಗಿಗಳಿಗೆ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯ ಮಾಡುತ್ತಿರುವ VKF ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಟ್ಟಪ್ಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ರವರು ಮಾತನಾಡಿ ” ಜೀವ ಉಳಿಸುವ ಕಾರ್ಯವನ್ನು ನಮ್ಮೂರಿನ ಶಾಲೆಯಲ್ಲಿ, ನಮ್ಮೂರಿನಲ್ಲಿ ಇದು ಒಂದು ಬಹು ಉತ್ತಮವಾದದ್ದು, ರಕ್ತದಾನದ ಮಹತ್ವ, ರಕ್ತದ ಕೊರತೆಯಿಂದಾಗುವ ಅನೇಕ ಉಪಯೋಗಗಳ ಬಗ್ಗೆ ಮಾತನಾಡಿದರು” ಎಂದರು.
ರಕ್ತದಾನ ಶಿಬಿರದಲ್ಲಿ ರಕ್ತದಾನಿ ಪ್ರಶಸ್ತಿಯನ್ನು ಸಿ.ವೆಂಕಟೇಶಪ್ಪ ರವರಿಗೆ ನೀಡಿ ಅಭಿನಂದಿಸಲಾಯಿತು. ಆರೋಗ್ಯ ಸೈನಿಕ ಪ್ರಶಸ್ತಿಯನ್ನು ಸ್ರೀಮತಿ ಅಮರಾವತಿ (ಆಶಾ ಕಾರ್ಯಕರ್ತೆ) ವಿಟ್ಟಪ್ಪನಹಳ್ಳಿ ರವರಿಗೆ ನೀಡಲಾಯಿತು.
ರಕ್ತದಾನ ಶಿಬಿರದಲ್ಲಿ life care blood bank ರಕ್ತನಿಧಿ ಕೇಂದ್ರಕ್ಕೆ 41 unit ನೀಡಲಾಯಿತು.
ಕಾರ್ಯಕ್ರಮದಲ್ಲಿ VKF ರಾಜ್ಯ ಅಧ್ಯಕ್ಷ ಲಕ್ಕೂರು ಎಂ ನಾಗರಾಜ್, ಕೋಲಾರ ತಾಲ್ಲೂಕು ಅಧ್ಯಕ್ಷ ವಾಲಿಬಾಲ್ಸೋಮು, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಉಪ್ಪರಪ್ಪಲ್ಲಿ ಹರೀಶ್ , ವಿಟ್ಟಪ್ಪನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಂ.ನಾರಾಯಣಸ್ವಾಮಿ, SDMC ಸದಸ್ಯರಾದ ಸುರೇಶ್,ವೆಂಕಟೇಶ್, ಹನುಮಪ್ಪ, ಶ್ರೀನಿವಾಸ, ಶಿಕ್ಷಕರಾದ ಅಶ್ವಥ್ ನಾರಾಯಣ್, ದೇವರಾಜ್,ಇತರರು ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.