(www.vknews.com) : ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ನಡೆಯ ಬೇಕಾಗಿದ್ದ ಸಾಮಾನ್ಯ ಸಭೆಯನ್ನು ರದ್ದು ಪಡಿಸಿ, ಮುಂದೂಡಲು ಮಾನ್ಯ ಉಪಾಧ್ಯ ಕ್ಷೆ ಮತ್ತು ಮುಖ್ಕಾಧಿಕಾರಿಗೆ ಲಿಖಿತ ಮನವಿ ಮೂಲಕ ಕೆಲವು ಸದಸ್ಯರು ತಿಳಿಸಿದ್ದರು, ಕಾರಣ ಮಹಾ ಮಾರಿ ಸಾಂಕ್ರಾಮಿಕ ರೋಗವು ದ.ಕ. ಜಿಲ್ಲೆಯಾಧ್ಯಂತ ಮಾತ್ರವಲ್ಲದೆ ಸದ್ರಿ ನಮ್ಮ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೂ ಕಳೆದ ಎರಡು ದಿನಗಳ ಹಿಂದೆಯಷ್ಟೇ ಒಂದು ಸೋಂಕು ತಗಲಿಸಿದ ವ್ಯಕ್ತಿ ಪತ್ತೆಯಾದ ಹಿನ್ನಲೆಯಲಿ ಗ್ರಾಮದ ಜನರು ಆತಂಕದ ಸ್ಥಿತಿಯಲಿ ಇದ್ದು, ಮಾತ್ರವಲ್ಲದೆ ಪಂಚಾಯತ್ ಕೆಲಸ ಕಾರ್ಯಗಳು ಕೂಡ ಆಮೆಗತಿಯಲಿ ನಡೆಯುತ್ತಿದ್ದು,ಈ ಮಧ್ಯೆ ಇಂದು ಬೆಳಿಗ್ಗೆಯಿಂದಲೇ ಪಂಚಾಯತ್ ಬಾಗಿಲು ಮುಚ್ಚಿ ಕೊಂಡು ಜನರಿಗೆ ತಮ್ಮ ಕೆಲಸಕಾರ್ಯಗಳ ಪಂಚಾಯತ್ ಮುಖೇನ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದ್ದು , ಇಂತಹ ಪರಿಸ್ಥಿತಿಯಲ್ಲಿ ನಾವು ಮಿಟಿಂಗ್ ಮಾಡಿಕೊಂಡು ಜನತೆಯ ಸಮಸ್ಯೆಗಳಿಗೆ ಸ್ಪಂಧನೆ ನೀಡದೇ ನಮ್ಮ ಸ್ವಾರ್ಥ ಸಾಧನೆಯನು ಮಾಡದಿರಲು ಉಪಾಧ್ಯಕ್ಷೆಗೆ ಲಿಖಿತವಾಗಿ ಬರೆದು ಹೇಳಿದರೂ ಅವರ ಮಾತಿಗೆ ಕಿಂಚಿತ್ತು ಬೆಲೆ ಕೊಡದೇ ಅವರ ಕಡೆಗಣಿಸಿ ಮಿಟಿಂಗ್ ಮಾಡಿ ಬಿಟ್ಟ ರೀತಿಯಿಂದ, ಕೆಲವು ಸದಸ್ಯರು ಸಭಾತ್ಯಾಗ ಮಾಡಿದರು.
ಈ ಬಗ್ಗೆ ಕೌನ್ಸಿಲರ್ ಹಮೀದ್ ಹಸನ್ ಮಾಡೂರು ಅವರೊಡನ ಆ ಬಗ್ಗೆ ವಿಚಾರಿಸಿದಾಗ ಅವರು ಹೀಗೆ ಹೇಳಿದರು, “ಗ್ರಾಮದೊಳಗೆ ಮಹಾ ಮಾರಿ ರೋಗ ನುಸುಳಿ ಕೊಂಡಾಗಿದೆ, ಜನರು ಆತಂಕದಲ್ಲಿ ಜೀವನ ಕಳೆಯುವ ಪರಿಸ್ಥಿತಿ ಬಂದೊದಗಿದೆ, ಕೊರೋನಾ ಪೀಡಿತರಿಗೆ ಸರಕಾರ ಅಥವಾ ಪಂಚಾಯತ್ ನಿಂದ ಯಾವುದೇ ಸವಲತ್ತು ಅಥವಾ ತುರ್ತು ಸಹಾಯ ನೀಡಲಾಗುತ್ತಿಲ್ಲ, ಮೊನ್ನೆ ತಾನೇ ಒಂಭತ್ತನೆಯ ವಾರ್ಡಿನಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಪೊಸಿಟಿವ್ ಬಂದಾಗ ಸದ್ರಿ ವ್ಯಕ್ತಿಯನು ಆಸ್ವತ್ರೆಗೆ ಕಳುಹಿಸಿ ಒಂಟಿ ಮಹಿಳೆ ತಾಯಿಯನು ಮನೆಯೊಳಗೆ ಸಿಲ್ ಡೌನ್ ಮಾಡಿ ಅಧಿಕಾರಿಗಳು ಹೋಗಿರುತ್ತಾರೆ. ಅಲ್ಲಿ ಅವರಿಗೆ ಆಹಾರ ವಸ್ತುಗಳು ಇದೆಯೋ ಏನಾದರೂ ಅವಶ್ಯಕತೆ ಇದೆಯೋ ಎಂದು ಹೇಳುವ ಯಾವ ಅಧಿಕಾರಿಗಳು ಇರಲಿಲ್ಲ. ಸಂಧರ್ಭದ ಗಂಭೀರತೆಯನ್ನು ಅರ್ಥ ಮಾಡಿ ಕೊಂಡ ಸದ್ರಿ ಕೌನ್ಸಿಲರ್ ಹಮೀದ್ ಹಸನ್ ಮಾಡೂರು ಇವರು ಸಂಘಟನೆಯೊಂದರ ಮೂಲಕ ಆ ಮಹಿಳೆಗೆ ಒಂದು ತಿಂಗಳ ಸಂಪೂರ್ಣ ಆಹಾರ ಕಿಟ್ ನೀಡುವ ಕೆಲಸ ಮಾಡಿಸಿದ್ದಾರೆ ಎಂದು ಸಹ ಕೌನ್ಸಿಲರ್ ಡಿ.ಎಮ್ ಮಹಮ್ಮದ್ ಪುಷ್ಟಿ ತಿಳಿಸಿದರು.
ಮಾತ್ರವಲ್ಲದೆ ಪ್ರಸ್ತುತ ಪರಿಸ್ಥಿತಿಯಲಿ ಕೊರೋನಾದ ಲಾಭ ಪಡೆಯಲು ಈ ಮಿಟಿಂಗನ್ನು ವಿರೋಧದ ನಡುವೆ ಮಾಡಿರುತ್ತಾರೆ, ಕಾಮಗಾರಿಯೊಂದು ಕಳೆದ ಒಂದು ವರ್ಷಗಳಿಂದ ನಿರ್ಣಾಯ ಮಾಡಿಸಿ ಕೊಂಡು ಟೆಂಡರ್ ಕರೆಯದೆ ಮೂಲೆ ಗುಂಪಾಗಿಸಿ ಈ ಮದ್ಯೆ ಕೆಲವು ಕೆಲಸಗಳನ್ನು ಉಪಾಧ್ಯಕ್ಷೆಯು ಬಹಳ ಉತ್ಸಾಹದಿಂದ ತಮ್ಮ ಸ್ವಂತ ಇಚ್ಚೆ ಯಲ್ಲಿ ತಮಗೆ ಬೇಕಾದವರ ವಾರ್ಡಿನಲ್ಲಿ ಮಾಡಿಸಿ ಅದರ ಬಿಲ್ಲು ಕೊಡಿಸಲು ಒಮ್ಮತದ ನಿರ್ಣಾಯ ಕೈ ಗೊಳ್ಳಲು ಈ ಮಿಟಿಂಗನ್ನು ನಮ್ಮ ವಿರೋಧದ ಮಧ್ಯೆ ಮಾಡುತ್ತಿದ್ದಾರೆ ಎಂದು ಕೆಲವು ಸದಸ್ಯರು ದೂರಿ ಕೊಂಡಿದ್ದಾರೆ. ಮಿಟಿಂಗ್ ನಲಿ ಸಲಹೆ ಮತ್ತು ಪ್ರಶ್ನೆಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು ಇಲ್ಲದಿರುವಾಗ ಮತ್ತು ಯೋಜನೆ ಮತ್ತು ಕಾಮಗಾರಿಯ ಮಾಹಿತಿ ಪಡೆಯುವ ಇಂಜಿನಿಯರ್ ಕೂಡ ಗೈರು ಹಾಜರಾಗಿದ್ದು, ಸಂಬಂಧ ಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಗೈರು ಹಾಜರಿಯಲಿ ಜನತೆಗೆ ಏನೂ ಸವಲತ್ತುಗಳ ನೀಡ ಬಹುದು?, ಇದೆಲ್ಲ ಅಸಾಧ್ಯ ಎಂದಾಗಿದ್ದು, ಮಳೆ ಬೇರೆ ಪ್ರಾರಂಭವಾಗಿ ಚರಂಡಿ ಹೊಳೆತ್ತುವ ಮತ್ತು ಹೊಸ ಚರಂಡಿ , ಮೋರಿಗಳ ಬಗ್ಗೆ ಮಾತಾನಾಡಲು ಲೋಕೋಪಯೋಗಿ ಅಧಿಕಾರಿಗಳೇ ಇಲ್ಲ, ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿದ್ಯುತ್ ಅಧಿಕಾರಿಗಳು ಇಲ್ಲ. ಅಪಾಯದ ಮರಗಳ ಮತ್ತು ಕೊಂಬೆ ಕಡಿಸುವ ಬಗ್ಗೆ ಮಾತಾನಾಡ ಬೇಕಾದ ಅರಣ್ಯ ಇಲಾಖೆ ಇಲ್ಲ, ಆರೋಗ್ಯದ ಬಗ್ಗೆ ಚರ್ಚೆ ನಡೆಸ ಬೇಕಾದ ಅರೋಗ್ಯಾಧಿಕಾರಿಗಳು ಬಂದಿಲ್ಲ. ಹೀಗಿರುವಾಗ ಯಾವ ಕಾಟಚಾರಕ್ಕೆ ಇವರು ಮಿಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವರ ಅಭಿಪ್ರಾಯ.
ಅವರು ಗುಪ್ತವಾಗಿ ಮಾಡಿಸಿದ ಕೆಲವು ಕೆಲಸಗಳ ಬಿಲ್ಲುಗಳನ್ನು ಮಾಡಿಸಿ ಪಂಡ್ ಬಿಡುಗಡೆ ಮಾಡಿಸಲು ಗುತ್ತಿಗೆದಾರರ ಪರ ನಿಲ್ಲುವ ಬದಲು ಗ್ರಾಮದ ಜನರಿಗೆ ಪ್ರಯೋಜನವಾಗುವ ಯಾವುದೇ ಮೂಲಭೂತ ಸೌಕರ್ಯ ಕಾರ್ಯಗಳಿಗಲ್ಲ ಎಂದರು. ಕಳೆದ ಎರಡು ವರ್ಷಗಳಿಂದ ಯಾವುದೇ ವಾರ್ಡ್ ಗಳ ಕಾಮಗಾರಿಗಳಿಗೆ ಅವಕಾಶ ನೀಡದೇ ತಮ್ಮವರ ವಾರ್ಡಿನ ಮಾತ್ರ ಮಾಡಿಸಿದ ಬಿಲ್ಲು ಪಾವತಿ ಮಾಡಿಸಲು ನಿರ್ಣಾಯಕ್ಜಾಗಿ ಮಾತ್ರ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಅದ್ದರಿಂದ ಇಂತಹ ದುರಾಡಳಿತೆಯ ತುಘಲಕ್ ದರ್ಬಾರ್ ನಡೆಸಲು ನಾವು ಇರುವ ತನಕ ಬಿಡಲಾರೆವು ಎಂದು ತಮ್ಮ ಮನದಾಳದ ಮಾತುಗಳನು ಒಬ್ಬೊಬ್ಬ ಕೌನ್ಸಿಲರ್ ಹೇಳಿರುತ್ತಾರೆ. ಮಹಮ್ಮದ್ ಡಿ.ಎಮ್ ಜಲಾಲ್ ಭಾಗ್ ದೇರಳೆಕಟ್ಟೆ, ಜುಲೈಖಾ ಬಸೀರ್ ಅಜಿನಡ್ಕ , ಲ್ಯಾನ್ಸಿ ಡಿ ಸೋಜ ಪಾನೀರ್, ಮೊಯಿನ್ ಕುಂಞ್ಞ ಕೊಮರಂಗಳ,ಹಾಗೂ ಶ್ರೀಮತಿ ಸುಮತಿ ಗುಡ್ಡಕ್ಜೆ ಪಾಲು, ಇವರು ಸಾಮಾನ್ಯ ಸಭೆಯನ್ನು ವಿರೋಧಿಸಿ ಜನರ ಪರ ನಿಂತು ಸಭಾ ತ್ಯಾಗ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.