ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಿನಾಂಕ: 09-07-2020 ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ಕಛೇರಿಯ ಸಿಬ್ಬಂದಿಗಳಿಗೆ ಮತ್ತು ಗೃಹರಕ್ಷಕರಿಗೆ, ದೇಹದ ರಕ್ಷಣಾ ವ್ಯವಸ್ಥೆ ಹೆಚ್ಚಿಸುವ, ಆಯುಷ್ ಆಯುರ್ವೇದಿಕ್ ಔಷಧವನ್ನು ಉಚಿತವಾಗಿ ನೀಡಲಾಯಿತು.
ಮಂಗಳೂರಿನ ಖ್ಯಾತ ಆಯುರ್ವೇದ ಆಸ್ಪತ್ರೆ ಶ್ರೀ ವೇದಮಾಯು ಆಸ್ಪತ್ರೆ ಇದರ ವತಿಯಿಂದ ಈ ಔಷಧಿಯನ್ನು ವಿತರಿಸಲಾಯಿತು. ಖ್ಯಾತ ಆಯುರ್ವೇದ ತಜ್ಞ ಡಾ|| ಕೇಶವ ರಾಜ್ ಅವರು ಈ ಔಷಧಿಯನ್ನು ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಪೌರರಕ್ಷಣಾ ದಳದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಇವರಿಗೆ ಹಸ್ತಾಂತರಿಸಿದರು.
ಡಾ|| ಕೇಶವರಾಜ್ ರವರು ಮಾತನಾಡಿ ಹೆಚ್ಚಿನ ಎಲ್ಲಾ ಸೋಂಕು ರೋಗಗಳನ್ನು ದೇಹದ ರಕ್ಷಣಾ ವ್ಯವಸ್ಥೆ ವೃದ್ಧಿಸಿಕೊಂಡು ತಡೆಯಲು ಸಾಧ್ಯವಿದೆ ಎಂದರು. ನಮ್ಮ ಜೀವನಶೈಲಿ ಬದಲಿಸಿಕೊಂಡು ಒತ್ತಡವಿಲ್ಲದ ಜೀವನ ಕ್ರಮ ಅಳವಡಿಸಿಕೊಂಡಲ್ಲಿ ಹೆಚ್ಚಿನ ಎಲ್ಲಾ ರೋಗಗಳನ್ನು ಬರದಂತೆ ತಡೆಯಲು ಸಾಧ್ಯವುದೆ ಎಂದು ಅಭಿಪ್ರಾಯಪಟ್ಟರು.
ಕಛೇರಿಯ ಅಧೀಕ್ಷಕರಾದ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್., ಗೃಹರಕ್ಷಕರಾದ ದಿವಾಕರ್, ಮಹೇಶ್, ಸುನಿಲ್, ಸುಲೋಚನಾ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.