ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಶೈಖುನಾ ತಾಜುಲ್ ಉಲಮಾ (ಖ.ಸಿ) ರವರ ಆತ್ಮೀಯರೂ, ಎಸ್.ವೈ.ಎಸ್ಗೆ ನೇತೃತ್ವ ನೀಡಿದ್ದ ತ್ವಾಹಿರ್ ಹಾಜಿ ಮುಕ್ಕಚ್ಚೇರಿ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ತಲೆಬಾಗಿದರು. ಇವರ ನಿಧನಕ್ಕೆ SYS,SSF ಮುಕ್ಕಚ್ಚೇರಿ ಸಂತಾಪ ಸೂಚಿಸಲಾಗಿದೆ.
ಉಲಮಾ ಸಾದಾತುಗಳೊಂದಿಗೆ, ಮುತಅಲ್ಲಿಮರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಸುನ್ನತ್ ಜಮಾಅತಿನ ಕಾರ್ಯಚಟುವಟಿಕೆಗಳಲ್ಲಿ ನಿರಂತರ ಸಕ್ರಿಯ ಸಾನಿಧ್ಯವಾಗಿತ್ತು ಅವರದು.
ತಾಜುಲ್ ಉಲಮಾ(ಖ.ಸ) ರನ್ನು ಅವರೂ, ಅವರನ್ನು ತಾಜುಲ್ ಉಲಮಾ(ಖ.ಸ) ಪರಸ್ಪರ ಪ್ರೀತಿಸುತ್ತಿದ್ದರು. ಉಲಮಾ ಸಾದಾತುಗಳನ್ನು ಹಾಗೂ ಮುತಅಲ್ಲಿಮರನ್ನು ಮನೆಗೆ ಕರೆದುಕೊಂಡು ಹೋಗಿ ದುಆ ಮಾಡಿಸುತ್ತಿದ್ದದು ವಿದ್ವಾಂಸರೊಂದಿಗೆ ನಿಕಟವಾದ ಸಂಬಂಧ ಬೆಳೆಸುತ್ತದ್ದುದು ಅವರ ವಿಶೇಷತೆ.
ತ್ವಾಹಿರ್ ಹಾಜಿಯವರ ನಿಧನ ನಮಗೆ ಬಲು ದೊಡ್ಡ ನಷ್ಟವಾಗಿದೆ. ಅಲ್ಲಾಹು ಅವರ ಪಾರತ್ರಿಕ ಜೀವನ ಸಂತಸಮಯವಾಗಲಿ. ಖಬ್ರ್ ವಿಶಾಲಗೊಳಿಸಲಿ. ಮಗ್ಫಿರತ್ ಮರ್ಹಮತ್ ನೀಡಲಿ(ಆಮೀನ್)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.